ತನ್ನ ಗತ್ತು , ಸ್ಟೈಲ್ ಖದರ್ ಮೂಲಕ ಗಬ್ಬರ್ ಸಿಂಗ್ ಎಂದೇ ಖ್ಯಾತಿ ಪಡೆದಿರುವ ಟಾಲಿವುಡ್ ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಇದೀಗ ಸಿನಿ ಕರಿಯರ್ ಗೆ ಮರು ಎಂಟ್ರಿ ಕೊಟ್ಟಿದ್ದಾರೆ. ಜನಸೇವೆಯೇ  ಜನಾರ್ಧನನ ಸೇವೆ ಎಂದು ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಸ್ವಂತ ಜನಸೇನ ಪಕ್ಷವನ್ನು ಸ್ಥಾಪಿಸಿದ್ದರು. ಅದಾದ ನಂತರ ಮತ್ತೇನೋ ನಡೆಯಿತು. ಆದ್ದರಿಂದ ಇದೀಗ ಸಿನಿ ಪ್ರಪಂಚಕ್ಕೆ ಮರು ಎಂಟ್ರಿ ಕೊಟ್ಟಿದ್ದಾರೆ. ಜನರು ಕೈಕೊಟ್ಟಿದ್ದರಿಂದಲೇ ಪವರ್ ಸ್ಟಾರ್ ಪವನ್ಕಲ್ಯಾಣ್ ಮತ್ತೆ ಚಿತ್ರರಂಗದಲ್ಲೇ ಮುಂದುವರೆಯಲಿದ್ದಾರೆ ಎಂಬ ಸುದ್ದಿಗಳು ಕಳೆದ ಕೆಲ ತಿಂಗಳಿಂದ ಹರಿದಾಡಿತ್ತು.


ಇದೀಗ ಬರೋಬ್ಬರಿ 2 ವರ್ಷಗಳ ಬಳಿಕ ಮತ್ತೆ ಬಣ್ಣ ಹಚ್ಚಲು ಪವರ್ ಸ್ಟಾರ್ ಮನಸು ಮಾಡಿದ್ದಾರೆ. ಈಗಾಗಲೇ ನಿರ್ದೇಶಕ ಕ್ರಿಷ್ ಅವರೊಂದಿಗೆ ಈ ಬಗ್ಗೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಅಲ್ಲದೆ ಕಂಬ್ಯಾಕ್ ಚಿತ್ರಕ್ಕೆ ಡಿಸೆಂಬರ್​ನಲ್ಲಿ ಮುಹೂರ್ತವಿಡಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಟಾಲಿವುಡ್​ನಲ್ಲಿ ಬಾಕ್ಸಾಫೀಸ್​ ಸರದಾರನಾಗಿ ಮೆರೆದಿದ್ದ ಪವನ್ ಕಲ್ಯಾಣ್, ರಾಜಕೀಯಕ್ಕೆ ಇಳಿದ ಬಳಿಕ ಚಿತ್ರರಂಗದಿಂದ ಸಂಪೂರ್ಣ ದೂರವಾಗಿದ್ದರು. ಇದೀಗ 'ಖುಷಿ' ಚಿತ್ರವನ್ನು ನಿರ್ಮಿಸಿದ್ದ ಎ.ಎಂ ರತ್ನಂ ಮತ್ತೊಮ್ಮೆ ಪವನ್​ಗೆ ಪವರ್ ನೀಡಲು ಮುಂದಾಗಿದ್ದಾರಂತೆ. ಈ ಹಿಂದೆ 'ಎನ್​ಟಿಆರ್'​ ಅವರ ಬಯೋಪಿಕ್ ಸಿನಿಮಾವನ್ನು ನಿರ್ದೇಶಿಸಿದ್ದ ಕ್ರಿಷ್ ಅವರ ಕಥೆ ಪವನ್ ಕಲ್ಯಾಣ್ ಅವರಿಗೆ ಒಪ್ಪಿಗೆಯಾಗಿದ್ದು, ಈ ಚಿತ್ರಕ್ಕೆ ಎ.ಎಂ.ರತ್ನಂ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ.


ಈ ಹಿಂದೆ ಪವನ್ ಕಲ್ಯಾಣ್​ ಅವರ ರೀಎಂಟ್ರಿಗೆ ಸಾಥ್ ನೀಡಲು ರಾಮ್ ಚರಣ್ ಬಯಸಿದ್ದಾರೆ ಎಂದು ಸುದ್ದಿಯಾಗಿತ್ತು. ಪವರ್ ಸ್ಟಾರ್ ಅಭಿನಯಿಸಲಿರುವ ಕಂಬ್ಯಾಕ್ ಸಿನಿಮಾವನ್ನು ನಿರ್ಮಿಸಲು ಮೆಗಾ ಪವರ್ ಸ್ಟಾರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿತ್ತು.ಏಕೆಂದರೆ ಅತ್ತ ರಾಜಕೀಯದಲ್ಲಿ ಸೋತಿರುವ ಪವನ್ ಕಲ್ಯಾಣ್ ಮತ್ತೊಮ್ಮೆ ತಮ್ಮ ತಾರಾ ವರ್ಚಸ್ಸನ್ನು ಮರಳಿಪಡೆಯುವ ಇರಾದೆಯಲ್ಲಿದ್ದಾರೆ. ಇದಕ್ಕಾಗಿ ತಮ್ಮದೇ ಹೋಮ್ ಬ್ಯಾನರ್​ನಲ್ಲಿ ಚಿತ್ರ ನಿರ್ಮಿಸಿ ಪವನ್​ಗೆ ಪವರ್ ನೀಡಲು ಮೆಗಾ ಕುಟುಂಬ ಯೋಚಿಸಿದೆ ಎಂದು ಹೇಳಲಾಗಿತ್ತು.ಆದರೀಗ ಕ್ರಿಷ್ ನಿರ್ದೇಶಿಸಲಿರುವ ಪವನ್ ಕಲ್ಯಾಣ್ ಬೆಳ್ಳಿತೆರೆಗೆ ಮರಳುವುದು ಪಕ್ಕಾ ಎನ್ನಲಾಗಿದೆ.




మరింత సమాచారం తెలుసుకోండి: