ಟಾಲಿವುಡ್ ನ ಪ್ರಿನ್ಸ್ ಮಹೇಶ್ ಬಾಬು ಇತ್ತೀಚೆಗಷ್ಟೇ ಮಹರ್ಷಿ ಚಿತ್ರ ಬಿಡುಗಡೆಯ ಮೂಲಕ ಭಾರೀ ಯಶಸ್ಸು ಕಂಡಿದ್ದರು. ತನ್ನ ಕುಟುಂಬವೆಲ್ಲಾ ಸೇರಿಕೊಂಡು ಜಾಹೀರಾತು ಒಂದಕ್ಕೆ ನಟಿಸುವ ಮೂಲಕ ಕೆಲ ದಿನಗಳ ಹಿಂದೆ ಸುದ್ದಿಯಾಗಿದ್ದರು. ಇದೀಗ ಪ್ರಿನ್ಸ್ ಟಾಲಿವುಡ್ ಗೆ ಹಾರಿದ್ದಾರೆ. ಯಾವ ಚಿತ್ರವದು, ಅಸಲು ಏನಾಯ್ತು ಎಂದುಮುಂದೆ ಓದಿ. 


ತೆಲುಗಿನ ಸ್ಮಾರ್ಟ್ ಹೀರೋ ಮಹೇಶ್ ಬಾಬು ಸದ್ಯ ತೆಲುಗಿನಲ್ಲೇ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಅದರಲ್ಲೂ ಅವರು ರಶ್ಮಿಕಾ ಹಾಗೂ ಮಹೇಶ್​ ಅಭಿನಯದ 'ಸರಿಲೇರು ನೀಕೆವ್ವರು' ಸಿನಿಮಾ ಚಿತ್ರೀಕರಣ ಬರದಿಂದ ಸಾಗುತ್ತದೆ.  ಈಗಾಗಲೇ ಅಭಿಮಾನಿಗಳು ಚಿತ್ರಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ಅಂತಹದರಲ್ಲಿ ಬಾಲಿವುಡ್ ಸುದ್ದಿ ಕೇಳಿ ಸಿಹಿ -ಕಹಿ ಆದಂತಿದೆ. ಏಕೆಂದರೆ ಮಹೇಶ್ ಬಾಲಿವುಡ್ ನಲ್ಲೂ  ಮಿಂಚಲಿದ್ದಾರೆ ಎಂಬುದು ಸಿಹಿ ಸುದ್ದಿ ಯಾದರೆ, ತೆಲುಗಿನಲ್ಲಿ ಇನ್ನು ಮುಂದೆ ಸಿನಿಮಾ ಮಾಡಲ್ವಾ ಎಂಬುದು ಕಹಿ ವಿಚಾರವಾಗಿದೆ. ಹೌದು, ಮಹೇಶ್​ ಇತ್ತೀಚೆಗೆ ಬಿಡುಗಡೆಯಾಗಿರುವ ಹಿಂದಿ ಸಿನಿಮಾದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.


ಇಷ್ಟಕ್ಕೇ ಅಭಿಮಾನಿಗಳು ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಹಿಂದಿ ಸಿನಿಮಾದ ಹಾಡಲ್ಲಿ ಮಹೇಶ್​ ಅಭಿನಯಿಸಿದ್ದಾರಾ ಎಂದು ತಿಳಿಯಬೇಡಿ. 'ಸ್ಯಾಟಲೈಟ್​ ಶಂಕರ್' ಎಂಬ ಸಿನಿಮಾದಲ್ಲಿ ಪ್ರಿನ್ಸ್​ ಮಹೇಶ್​ ಬಾಬು ಅವರ ಹೆಸರು ಹಾಗೂ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಈ ಸಿನಿಮಾದ ತೇರೆ ಸಂಗ್​ ಎಂಬ ಹಾಡಿನ ವಿಡಿಯೋ ದಲ್ಲಿ ನಾಯಕಿ ನಾಯಕನಿಗೆ ನೀನು ಮಹೇಶ್​ ಬಾಬು ತರ ಇದ್ಯಾ ಅಂತ ಹೇಳಿದ್ದರು ಎಂದು ಹೇಳುವಾಗ ಮಹೇಶ್​ ಬಾಬು ಅವರ ಫೋಟೋ ಅಲ್ಲಿ ಕಾಣಿಸಿಕೊಳ್ಳುತ್ತದೆ.


ಬಾಲಿವುಡ್ ನ ಸೂರಜ್​ ಪಂಚೋಲಿ ನಾಯಕನಾಗಿ ಅಭಿನಯಿಸುತ್ತಿರುವ ಈ ಸಿನಿಮಾದಲ್ಲಿ ಮೇಘಾ ಆಕಾಶ್​ ನಾಯಕಿಯಾಗಿದ್ದಾರೆ. ದಕ್ಷಿಣ ಭಾರತದ ಬ್ಯಾಕ್​ಡ್ರಾಪ್​ನಲ್ಲಿ ಮೂಡಿಬರಲಿರುವ ಈ ಚಿತ್ರದ ಒಂದು ಹಾಡನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿತ್ತು. ಇದರಲ್ಲೇ ಪ್ರಿನ್ಸ್​ ಮಹೇಶ್​ ಬಾಬು ಅವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ. ಪ್ರಸ್ತುತ ಮಹೇಶ್ ಬಾಬು ಸರಿಲೇರು ನೀಕ್ಕೆವರು ಎಂಬ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.




మరింత సమాచారం తెలుసుకోండి: