ಯಾರ ವಿರುದ್ದ ನಾನೇಕೆ ದೂರಲಿ, ಫೇಸ್ ಬುಕ್ ನಲ್ಲಿ ನಾನು ಯಾರ ವಿರುದ್ಧವೂ ದೂರಿಲ್ಲ  ಎಂದ ಖ್ಯಾತ ಗಾಯಕ ಎಸ್. ಪಿ ಬಾಲಸುಬ್ರಹ್ಮಣ್ಯಂ ಹೇಳಿದ್ದಾರೆ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ  ಆಯೋಜಿಸಿದ್ದ ಔತಣಕೂಟಕ್ಕೆ  ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಕೂಡ ಆಹ್ವಾನಿತರಾಗಿದ್ದರು. ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಕೆಲವು ತಾರೆಗಳು ಮೋದಿ ಜತೆಗೆ ಸೆಲ್ಫಿ ತೆಗೆದುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು. ಈ ಬಗ್ಗೆ ಎಸ್‌ಪಿಬಿ ತಮ್ಮ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು ವಿವಾದಕ್ಕೂ ಕಾರಣವಾಗಿದೆ.


ಪ್ರಧಾನಿ ನರೇಂದ್ರ ಮೋದಿ ಆಯೋಜಿಸಿದ್ದ ವಿಷೇಶ ಔತಣಕೂಟಕ್ಕೆ ಆಗಮಿಸಿದ್ದ ಅತಿಥಿಗಳಲ್ಲಿ ಎಸ್‌ಪಿಬಿ ಸಹ ಒಬ್ಬರಾಗಿದ್ದರು. ಈ ಕಾರ್ಯಕ್ರಮದ ಬಗ್ಗೆ ಫೇಸ್‌ಬುಕ್‍ನಲ್ಲಿ ಪೋಸ್ಟ್ ಸಹ ಮಾಡಿದ್ದರು. "ಕಾರ್ಯಕ್ರಮಕ್ಕೆ ಹೋಗುವ ಮುನ್ನ ನಮ್ಮ ಮೊಬೈಲ್‌ಗಳನ್ನು ಸೆಕ್ಯುರಿಟಿಗೆ ಅಧಿಕಾರಿಗಳಿಗೆ ಒಪ್ಪಿಸುವಂತೆ ಸೂಚಿಸಲಾಗಿತ್ತು. ಇದಕ್ಕೆ ಟೋಕನ್ ಸಹ ಕೊಡಲಾಯಿತು. ಆದರೆ ಒಳ ಹೋದಾಗ ಸ್ಟಾರ್‌ಗಳು ಮೋದಿ ಜತೆಗೆ ಸೆಲ್ಫಿ ತೆಗೆದುಕೊಳ್ಳುತ್ತಿರುವುದನ್ನು ನೋಡಿ ಅಚ್ಚರಿಯಾಯಿತು" ಎಂದು ಪೋಸ್ಟ್ ಮಾಡಿದ್ದರು.
ಈ ವಿವಾದಿತ ಪೋಸ್ಟ್ ವಿವಾದಕ್ಕೆ ಗುರಿಯಾಗಿದ್ದು ಗೊತ್ತೇ ಇದೆ. ಈ ಬಗ್ಗೆ ಎಸ್‌ಪಿಬಿ ಸ್ಪಷ್ಟೀಕರಣ ನೀಡಿದ್ದಾರೆ.

"ಇದ್ಯಾಕೆ ವಿವಾದಾಸ್ಪದ ಆಯಿತು? ನೀವು ಬಳಸಿದ ಪದಗಳಿಂದ ಆ ರೀತಿ ಆಗಿದೆ. ನನ್ನ ಫೋನನ್ನು ಕಸಿದುಕೊಂಡರು, ಪ್ರಧಾನಿ ಮೋದಿ ಜತೆಗೆ ಅಸಮಾಧಾನ ವ್ಯಕ್ತಪಡಿಸಿದರು ಎಂದೆಲ್ಲ ಬರೆಯಲಾಗಿದೆ. ನಾನು ಪ್ರಧಾನ ಮಂತ್ರಿಗಳ ವಿರುದ್ಧ ಏನೂ ಹೇಳಿಯೇ ಇಲ್ಲ. ಅದೇ ರೀತಿ ಸ್ಟಾರ್‌ಗಳ ವಿರುದ್ಧವೂ ಏನೂ ಹೇಳಿಲ್ಲ. ನಾನು ಹೇಳಿದ್ದು ಇಷ್ಟೇ, ಒಳಗಡೆಗೆ ನಮ್ಮ ಫೋನ್‌ಗಳನ್ನು ಕೊಂಡೊಯ್ಯಲು ಅನುಮತಿ ನೀಡಲಿಲ್ಲ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಆದರೆ ನಮಗದು ಸಾಧ್ಯವಾಗಲಿಲ್ಲ. ಅಷ್ಟೇ ನಾನು ಹೇಳಿದ್ದು". ಇದರಲ್ಲಿ ವಿವಾದ ಆಗುವಂತಹದ್ದು ಏನಿದೆ ಎಂದು ಇದೀಗ ಸ್ಪಷ್ಟೀಕರಣ ಕೊಟ್ಟಿದ್ದಾರೆ. 


ಪ್ರಧಾನಿ ನರೇಂದ್ರ ಮೋದಿ ವಿರುದ್ಧವೇ, ಅಥವಾ ಅವರಿಗೆ ಮೊಬೈಲ್ ಫೋನ್ ಬಳಕೆಯ ನಿಷೇಧಕ್ಕೆ ಹಾಗೆ ಪೋಸ್ಟ್ ಮಾಡಿದರೆ ಎಂಬಂತಹ ಹಲವಾರು ಗೊಂದಲಗಳಿಗೆ ಇದೀಗ ಸ್ಪಷ್ಟ ಉತ್ತರ ನೀಡಿದ್ದಾರೆ. 


మరింత సమాచారం తెలుసుకోండి: