ಬಿಗ್ ಬಾಸ್ ಮನೆ ಕಿಸ್ಸಿಂಗ್ ಸ್ಪಾಟ್ ಆಗಿ ಇತ್ತೀಚೆಗೆ ಭಾರೀ ಸುದ್ದಿಯಾಗಿತ್ತು. ಇದೀಗ ಮತ್ತೊಂದು ವಿಷಯದಲ್ಲಿ ಟ್ರೋಲ್ ಆಗಲು ಶುರು ಮಾಡಿದೆ. ಹೌದು, ಸದಾ ಕಾಲ ಒಂದಿಲ್ಲೊಂದು ವಿಷಯಗಳಲ್ಲಿ ಸುದ್ದಿಯಾಗುತ್ತಲೇ ಇರುವ ಬಿಗ್ ಬಾಸ್ ಇದೀಗ ಸ್ತ್ರೀಲೋಲ ಕತೆ ಶುರುವಾಗಿದೆ ನೋಡಿ. 


ಮನೆಯ ರಣಾಂಗಣ ಟಾಸ್ಕ್ ನ ಇಂಚಿಂಚನ್ನು ತರೆದಿರಿಸಿದ ಕಿಚ್ಚ ಸುದೀಪ್ ಎಲ್ಲರನ್ನು ಜಾಲಾಡಿದರು. ರಣಾಂಗಣ ಟಾಸ್ಕ್ ನಲ್ಲಿ ಜೈಜಗದೀಶ್ ತೆಂಗಿನ ಕಾಯಿ ಹೊಡೆದ ವಿಚಾರವನ್ನು ಸುದೀಪ್ ಎತ್ತುಕೊಂಡರು. ಅದು ನನ್ನಿಂದ ಆದ ತಪ್ಪು ಎಂದು ಜೈಜಗದೀಶ್ ಒಪ್ಪಿಕೊಂಡರು. ಎಲ್ಲರೂ ಅತ್ಯಂತ ಚೆನ್ನಾಗಿ ಆಡಿದಿರಿ ಎಂಬ ಮೆಚ್ಚುಗೆಯನ್ನು ನೀಡಿದರು.


ಆದರೆ ಎಲ್ಲಕ್ಕಿಂತ ವಿಶೇಷ ಗಮನ ಸೆಳೆದಿದ್ದು ಅಡ್ಡ ಹೆಸರು. ಮನೆ ಮಂದಿಗೆಲ್ಲ ವಾರ ಇಡೀ ಅಡ್ಡ ಹೆಸರು ಇಡಲಾಯಿತು. ಈಗ ಎರಡು ತಂಡದ ಸದಸ್ಯರು ಸೇರಿ ಹರೀಶ್ ರಾಜ್ ಗೆ ಹೆಸರಿಡಿ ಎಂದಾಗ ಮನೆಯವರೆಲ್ಲ ಸೇರಿ ಸ್ತ್ರೀಲೋಲ ಎಂಬ ಬಿರುದು ನೀಡಿದರು. ಹರೀಶ್ ರಾಜ್ ಹೆಣ್ಣು ಮಕ್ಕಳನ್ನು ಸದಾ ಇಂಪ್ರೆಸ್ ಮಾಡಲು ಪ್ರಯತ್ನ ಮಾಡುತ್ತಾರೆ ಎಂಬ ಸಂಗತಿ ಹೆಣ್ಣು ಮಕ್ಕಳಿಂದಲೇ ಬಯಲಾಯಿತು. ಕುರಿ ಪ್ರತಾಪ್ ಗೆ ವಾರದ ಟಾಸ್ಕೊಂದನ್ನು ನೀಡಿದ ಸುದೀಪ್, ಕಳಪೆ ಬೋರ್ಡಿನ ಕುರಿತಾಗಿ, ಹರೀಶ್ ರಾಜ್ ನಾಯಕತ್ವ ನಿರ್ವಹಿಸಿದ ಕುರಿತಾಗಿಯೂ ಮಾತನಾಡಿದರು. ಕಳಪೆ ಬೋರ್ಡ್ ನ್ನು ಕಳಪೆಯವರೇ ಹಾಕೊಕೊಳ್ಳಬೇಕು. ಅದನ್ನು ಬಿಟ್ಟು ಕಳಪೆ ಬೋರ್ಡ್ ನ್ನು ರಕ್ಷಾ ಕವಚವಾಗಿ ಬಳಸುವುದು ತಪ್ಪು ಎಂದು ತಿಳಿಸಿದರು.


ಬ್ಲಾಕ್ ಕಲರ್ ಸೀರೆಯಲ್ಲಿ ಮಿಂಚುತ್ತಿದ್ದ ದೀಪಿಕಾ ದಾಸ್ ಮೊದಲನೆಯವರಾಗಿ ಸೇಫ್ ಆದರು. ಇದಾದ ನಂತರ ಕಿರಿಕ್ ಪಾರ್ಟಿ ಚಂದನ್ ಆಚಾರ್,  ಭೂಮಿ ಮತ್ತು ಶೈನ್ ಸೇಫ್ ಆದರು. ಕೊನೆಯದಾಗಿ ಮತ್ತೆ ರಾಜು ತಾಳಿಕೋಟೆ, ಚೈತ್ರಾ ಕೊಟ್ಟೂರು ಮತ್ತು ಪ್ರಿಯಾಂಕಾ ಉಳಿದುಕೊಂಡರು. ಮನೆಯಿಂದ ಹೊರಗೆ ಬರುವವರು ಯಾರು ಎಂದು ಕುತೂಹಲ ಇಟ್ಟುಕೊಂಡು ಸುದೀಪ್ ವಾರದ ಕತೆಗೆ ತೆರೆ ಎಳೆದರು. ಕುತೂಹಲಕಾರಿ ವಿಷಯಕ್ಕೆ ಸದಾ ಸುದೀಪ್ ಆದ್ಯತೆ ನೀಡುತ್ತಾರೆ.


మరింత సమాచారం తెలుసుకోండి: