ಬೆಂಗಳೂರು: ಕರ್ನಾಟಕದಲ್ಲಿ ಕನ್ನಡವೇ ಮಾಯಾವಾಗುತ್ತಿರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ಅಭಿಮಾನಿಯೊಬ್ಬ ಆತನ ನೆಚ್ಚಿನ ನಟನನ್ನು ಭೇಟಿಯಾಗಲು ಫಿಲಿಫೈನ್ಸ್ ನಿಂದ ಕನ್ನಡ ಕಲಿತು ಬಂದಿದ್ದಾನೆ. ಅರೇ ನಿಜಾನಾ ಇದು! ಎಂದು ಆಶ್ಚರ್ಯವಾದರೂ ಸಹ ನಂಬಲೇಬೇಕಾದ ವಿಷಯವಿದು. ಯಾರು ಆ ನಟ. ಅಷ್ಟರಮಟ್ಟಿಗೆ ಹವಾ ಸೃಷ್ಟಿಸುವಲ್ಲಿ ಯಶಸ್ವಿಯಾದ ಚಿತ್ರವಾದರೂ ಯಾವುದು, ಏನಿದು ಸ್ಟೋರಿ ಅಂತ ನಾವ್ ಹೇಳ್ತೀವಿ ನೋಡಿ. 
 
ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಪಂಚ ಭಾಷೆಯಲ್ಲಿ ಮೂಡಿ ಬಂದಿದ್ದು  ‘ಕೆಜಿಎಫ್’ ಚಾಪ್ಟರ್ 1 ಚಿತ್ರ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ನಟ ಯಶ್ ಕನ್ನಡದ ಕಂಪನ್ನು ವಿದೇಶಗಳಲ್ಲಿ ಪಸರಿಸುವಂತೆ ಮಾಡಿದ್ದರು. ಇತ್ತೀಚೆಗಷ್ಟೇ ಕೇರಳದಿಂದ ಯಶ್ ಭೇಟಿಯಾಗಲು ಅಭಿಮಾನಿಗಳು ಬಂದಿದ್ದರು. ಇದೀಗ ರಾಕಿಭಾಯ್ ನೋಡಲು ಅಭಿಮಾನಿಯೊಬ್ಬರು ಕನ್ನಡ ಕಲಿತು ಫಿಲಿಪೈನ್ಸ್‌ನಿಂದ ಬಂದಿದ್ದಾರೆ. ಪೇಟೆ ಅಶೋಕ್ ಜೋರ್ನಲ್ ಎಂಬ ಅಭಿಮಾನಿ ವಿದೇಶದಿಂದ ಯಶ್ ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಾರೆ. ಹೀಗಾಗಿ ನಾನು ಯಶ್ ಅಭಿಮಾನಿ, ಅವರನ್ನು ನಾನು ನೋಡಬೇಕು ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
 
ಪೇಟೆ ಅಶೋಕ್ ಜೋರ್ನಲ್ ಏರ್‌ಪೋರ್ಟ್‌ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಅಭಿಮಾನಿ ಯಶ್ ನೋಡಲು ಬೆಂಗಳೂರಿಗೆ ಬಂದಿದ್ದು, ಯಶ್‍ಗಾಗಿ ಕನ್ನಡ ಕೂಡ ಕಲಿಯುತ್ತಿದ್ದಾರೆ. ಜೊತೆಗೆ ಕೆಜಿಎಫ್ ಸಿನಿಮಾದಲ್ಲಿನ ಯಾಶ್ ಅಭಿನಯ ಹಾಗೂ ಯಶೋಮಾರ್ಗದ ಮೂಲಕ ಜನಸೇವೆ ಮಾಡುತ್ತಿರುವುದನ್ನು ಮೆಚ್ಚಿಕೊಂಡಿದ್ದಾರೆ. ಇದೇ ತಿಂಗಳ 20ರ ಬುಧವಾರದಂದು ಜೋರ್ನಲ್ ವಾಪಸ್ ಫಿಲಿಪೈನ್ಸ್‌ಗೆ ತೆರಳಬೇಕಿದೆ. ಹೀಗಾಗಿ ಅದಕ್ಕೂ ಮುನ್ನ ಯಶ್ ಅವರನ್ನ ಭೇಟಿ ಮಾಡಿಸಿ ಎಂದು ಮಾಧ್ಯಮ ಮತ್ತು ಇತರೆ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. 
 
ಇವರ ಅಭಿಮಾನಕ್ಕೆ ಯಶ್ ಮಣಿಯುತ್ತಾರಾ, ಯಶ್ ಇವರನ್ನು ಭೇಟಿಯಾಗುತ್ತಾರಾ ಇಲ್ಲವಾ ಎಂಬುದೂ ಸದ್ಯದ ಮಟ್ಟಿಗೆ ಕುತೂಹಲಕಾರಿ ಯಾಗಿದೆ. ಪ್ರಸ್ತುತ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ನಲ್ಲಿ ಫುಲ್ ಬ್ಯೂಸಿಯಾಗಿದ್ದಾರೆ. ಅಭಿಮಾನಿ ಬಳಗವೇ ದೇವರು ಎಂದು ಹೇಳುವ ನಟರು ಇದೀಗ ಭೇಟಿಯಾಗುತ್ತಾರಾ, ಇಲ್ಲವಾ ಎಂಬುದು ಕಾದುನೋಡಬೇಕಾಗಿದೆ.

మరింత సమాచారం తెలుసుకోండి: