ಒಂದು ಕಾಲದಲ್ಲಿ ಸ್ಯಾಂಡಲ್ ವುಡ್ ನ ಮಿಂಚಿನ ಬೆಡಗಿಯಾಗಿದ್ದ ರಾಧಿಕ ಮದುವೆಯ ನಂತರ ಸಿನಿಮಾದಿಂದ ಸ್ವಲ್ಪ ದೂರವೇ ಉಳಿದಿದ್ದರು. ಆನಂತರ ಇತ್ತೀಚಿನ ದಿನಗಳಲ್ಲಿ ಮತ್ತೇ ಸಿನಿಮಾ ಮಾಡುವುದರಲ್ಲಿ, ಅದರಲ್ಲೂ ನಾಯಕಿ ಮಹತ್ವದ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅದೇ ರೀತಿ ನಮಗಾಗಿಯು ಇತ್ತು. ಕಾರಣಾಂತರಗಳಿಂದ ನಿಂತಿತ್ತು. ಇದೀಗ ನಮಗಾಗಿ ಏನಾಗ್ತಿದೆ ಗೊತ್ತಾ! ಇಲ್ಲಿದೆ ನೋಡಿ ಉತ್ತರ. 
 
ಸ್ಯಾಂಡಲ್ ವುಡ್ ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿರುವ “ನಮಗಾಗಿ’ ಎಂಬ ಸಿನಿಮಾ ಆರಂಭವಾಗಿದ್ದು ನಿಮಗೆ ಗೊತ್ತಿರಬಹುದು. ವಿಜಯ ರಾಘವೇಂದ್ರ ನಾಯಕರಾಗಿದ್ದ ಈ ಚಿತ್ರವನ್ನು ರಘುರಾಮ್‌ ನಿರ್ದೇಶಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಆ ಚಿತ್ರ ನಿಂತು ಹೋಯಿತು. ಆದರೆ, ಈಗ “ನಮಗಾಗಿ’ ಚಿತ್ರಕ್ಕೆ ಮತ್ತೆ ಚಾಲನೆ ಸಿಗುವ ಸಾಧ್ಯತೆ ಇದೆ. “ನಮಗಾಗಿ’ ಚಿತ್ರಕ್ಕೆ ಮರುಜೀವ ಕೊಡುವ ಕುರಿತಾದ ತೆರೆಮರೆಯ ಬೆಳವಣಿಗೆಗಳು ನಡೆಯುತ್ತಿವೆ. ಈ ಬಾರಿ ಚಿತ್ರದ ನಿರ್ಮಾಣದ ಹೊಣೆಯನ್ನು ಸ್ವತಃ ರಾಧಿಕಾ ಅವರೇ ಹೊತ್ತುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಂತ ಅಂತಿಮವಾಗಿಲ್ಲ. “ನಮಗಾಗಿ’ ಚಿತ್ರ ರೀ ಟೇಕಾಫ್ ಆಗುವ ಕುರಿತು ಮಾತನಾಡುವ ನಿರ್ದೇಶಕ ರಘುರಾಮ್‌, “ಸದ್ಯಕ್ಕೆ ಆ ಚಿತ್ರ ಮುಂದು ವರೆಯುತ್ತದೆ ಅಥವಾ ಇಲ್ಲ ಎಂದು ಹೇಳುವ ಸ್ಥಿತಿಯಲ್ಲಿ ನಾನಿಲ್ಲ. ಏಕೆಂದರೆ ಯಾವುದೂ ಅಂತಿಮವಾಗಿಲ್ಲ.
 
 ಇಷ್ಟು ದಿನ ನಾನು ಚಿತ್ರೀಕರಿಸಿದ ಫ‌ೂಟೇಜ್‌ ನನ್ನ ಕೈಗೆ ಬಂದಿದ್ದು, ಅದನ್ನು ಎಡಿಟ್‌ ಮಾಡು ತ್ತಿದ್ದೇನೆ. ಆ ದೃಶ್ಯಗಳನ್ನು ರಾಧಿಕಾ ಅವರು ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತಾರೆ. ಒಂದು ವೇಳೆ ಅವರು ಓಕೆ ಅಂದರೆ ಚಿತ್ರ ಮುಂದುವರೆಯುತ್ತದೆ. ಚಿತ್ರದ ಚಿತ್ರೀಕರಣ ಇನ್ನೂ ಶೇ 30ರಷ್ಟು ಬಾಕಿ ಇದೆ. ಮುಖ್ಯವಾಗಿ ಫಾರಿನ್‌ ಸನ್ನಿವೇಶಗಳ ಚಿತ್ರೀಕರಣ ಇನ್ನಷ್ಟೇ ಆಗಬೇಕಿದೆ’ ಎನ್ನುವುದು ರಘುರಾಮ್‌ ಅವರ ಮಾತುಗಳಾಗಿವೆ. ಅಂದಹಾಗೆ, ರಾಧಿಕಾ ಅಭಿನಯದ “ದಮಯಂತಿ’ ಚಿತ್ರ ಇತ್ತೀಚೆಗಷ್ಟೇ ತೆರೆಕಂಡಿದೆ. ಇದರ ಬೆನ್ನಲ್ಲೇ “ಬೈರಾದೇವಿ’, “ಕಾಂಟ್ರ್ಯಾಕ್ಟ್’ ಚಿತ್ರ ತೆರೆಕಾಣಲಿವೆ. ಈಗ “ನಮಗಾಗಿ’ ಚಿತ್ರದ ಸುದ್ದಿಯೂ ಹರಿದಾಡುತ್ತಿದ್ದು ರಾಧಿಕಾ ಚಿತ್ರಗಳಿಗಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

మరింత సమాచారం తెలుసుకోండి: