ಬರ್ತಡೇ ಆಯ್ತು, ರಾಬರ್ಟ್ ಟೀಸರ್ ಬಿಡುಗಡೆ ಆಯ್ತು. ಇದೀಗ ರಾಬರ್ಟ್ ಚಿತ್ರಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಇದೀಗ ರಾಬರ್ಟ್ ನಂತರದ ಮುಂದಿನ ಚಿತ್ರ ಯಾವುದು ಏನು ಎಂಬ ಡೀಟೆಲ್ಸ್ ಇಲ್ಲಿದೆ ನೋಡಿ. 
 
ಸಖತ್ ಕ್ರೇಜ್ ಹುಟ್ಟಿಸಿರುವ ಸಿನಿಮಾ ತಂಡದೊಟ್ಟಿಗೆ ಮಗದೊಮ್ಮೆ ಮತ್ತೊಂದು ಬಿಗ್ ಪ್ರಾಜೆಕ್ಟ್​​ಗೆ ಕೈ ಹಾಕಿದ್ದಾರೆ ಬಾಕ್ಸಾಫೀಸ್ ಸುಲ್ತಾನ , ಸ್ಯಾಂಡಲ್ ವುಡ್ ನ ಒಡೆಯ ನಟ ದರ್ಶನ್​​. ಇದು ದರ್ಶನ್ ಕರಿಯರ್​ ನ ಮಗದೊಂದು ಐತಿಹಾಸಿಕ ಕಥಾಹಂದರದ ಸಿನಿಮಾ ಅನ್ನೋದೇ ಇಂಟ್ರಸ್ಟಿಂಗ್ ​ ನ್ಯೂಸ್​.
 
ರಾಬರ್ಟ​ ಸಿನಿಮಾದ ನಂತರ ದಾಸ ದರ್ಶನ್ , ‘ರಾಜವೀರ ಮದಕರಿ ನಾಯಕ’ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅವರ ಸಿನಿಮಾಗಳ ಶೂಟಿಂಗ್ , ರಿಲೀಸಿಂಗ್ ನಡುವೆ ಹೊಸ ಹೊಸ ಪ್ರಾಜೆಕ್ಟ್​​ೌ ಗಳ ಬಗ್ಗೆ ಗಾಂಧಿನಗರದಲ್ಲಿ ಮಾತುಕಥೆ ಕೇಳಿ ಬಂದಿವೆ. . ಈಗ ಅದರಂತೆ ದರ್ಶನ್ ಹೊಸ ಸಿನಿಮಾದ ಬಗ್ಗೆ ಮಗದೊಂದು ಎಕ್ಸ್​​​​​ ಕ್ಲೂಸಿವ್ ಹ್ಯಾಪಿ ನ್ಯೂಸ್ ಹೊರ ಬಂದಿದೆ. ‘ಸಂಗೊಳ್ಳಿ ರಾಯಣ್ಣ’ , ‘ರಾಜವೀರ ಮದಕರಿ’ ನಾಯಕ ಚಿತ್ರಗಳ ನಂತರ ಮತ್ತೊಮ್ಮೆ ಕತ್ತಿಯನ್ನು ಝಳಪಿಸಲಿದ್ದಾರೆ ನಯಾ ಯಜಮಾನ​​. ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ದರ್ಶನ್ ಧಗಧಗಿಸಲಿದ್ದಾರೆ. ಅದ್ಯಾವಾಗ ಅನ್ನೋದಕ್ಕೆ ಉತ್ತರ D57. ಅಂದ್ರೆ ದರ್ಶನ್ ನಟಿಸಲಿರುವ 57ನೇ ಸಿನಿಮಾ ಐತಿಹಾಸಿಕ ಕಥಾಹಂದರವನ್ನು ಹೊಂದಿರಲಿದೆ ಎಂದರ್ಥ. 
 
ದರ್ಶನ್ ಅಭಿನಯದ 53ನೇ ಚಿತ್ರ ‘ರಾಬರ್ಟ್​’ ಸಿನಿಮಾವನ್ನು ನಿರ್ದೇಶನ ಮಾಡಿದ್ದ ಡೈರೆಕ್ಟರ್ ಮತ್ತು ನಿರ್ಮಾಣ ಮಾಡಿದ್ದ ಪ್ರೊಡ್ಯೂಸರ್ ಈ ಚಿತ್ರದ ಮೇನ್ ಪಿಲ್ಲರ್ಸ್​​. ರಾಬರ್ಟ್​​​​​ ಶೂಟಿಂಗ್​ ಸೆಟ್​ ನಲ್ಲಿ ಕುಳಿತು ಮಾತನಾಡುವಾಗ ಆದ ಪ್ರಸ್ತಾಪ ಈಗ ಮಗದೊಂದು ಐತಿಹಾಸಿಕ ಸಿನಿಮಾ ಸಿದ್ಧತೆಗೆ ವೇದಿಕೆಯಾಗಿದೆ. ದರ್ಶನ್​​, ನಿರ್ದೇಶಕ ತರುಣ್ ಸುಧೀರ್ ಹಾಗೂ ನಿರ್ಮಾಪಕ ಉಮಾಪತಿ ಮತ್ತೆ ಒಟ್ಟಾಗಿ ಕೆಲಸ ಮಾಡೋದು ಖಚಿತವಾಗಿದ್ದು  ಅಧಿಕೃತ ಮಾಹಿತಿ ಹೊರಬೀಳಿವುದಷ್ಟೇ ಬಾಕಿಯಿದೆ. ಸಂಗೊಳ್ಳಿ ರಾಯಣ್ಣನಾಗಿ ಖಡಕ್ ಡೈಲಾಗ್ ಹೊಡೆದು ಮಿಂಚಿದ್ದ ದರ್ಶನ್ ಇದೀಗ ಮತ್ತೇ ಮದಕರಿ ನಾಯಕನಾಗಿ ಮಿಂಚಲಿದ್ದಾರೆ.

మరింత సమాచారం తెలుసుకోండి: