ಬಳ್ಳಾರಿ: ಪುಟಾಣಿ ಹುಡುಗನಿಗೆ ಯುವರಾಜ ಪುನಿತ್ ರಾಜ್ ಕುಮಾರ್ ಅವರನ್ನು ನೋಡುವ ಆಸೆಯಾಗಿದೆ. ನಾನು ಪುನೀತ್ ಸರ್ ನ ನೋಡಲೇಬೇಕು ಎಂದಿದ್ದಾರೆ.ಹೊಸಪೇಟೆಯಲ್ಲಿರೋ ಆಟೋ ಡ್ರೈವರ್ ಹನುಮಂತು ಮತ್ತು ರೇಖಾ ಎನ್ನುವ ದಂಪತಿಯ ಮಗ ಆದರ್ಶ. ಇವನಿಗೆ ಹದಿನಾರು ವರ್ಷವಾದ್ರು ಮೇಲೆಳಲು ಆಗದ ಸ್ಥಿತಿ. ಕಾರಣ ಇವನಿಗೊಂದು ವಿಚಿತ್ರ ಖಾಯಿಲೆ ಇದೆ. ವಯಸ್ಸಾದಂತೆಲ್ಲ ದೇಹದ ಎಲ್ಲ ಅಂಗಾಂಗ ಬೆಳೆದ್ರೂ ದೇಹದಲ್ಲಿ ಮಾಂಸ ಮಾತ್ರ ಬೆಳೆಯಲ್ಲ. ಹೀಗಾಗಿ ಇವರ ಜೀವನ ಇವರ ಕೈಯಲ್ಲಿ ಇಲ್ಲ. ತಾನು ಇರೋದ್ರೋಳಗೆ ಪುನಿತ್ ರಾಜಕುಮಾರ್ ಅವರನ್ನು ಒಮ್ಮೆ ನೋಡಬೇಕು ಎನ್ನುವುದೇ ಈ ಪುಟಾಣಿ ಆಸೆ. 
 
ಈ ಪುಟಾಣಿ ಆದರ್ಶ ತಂದೆ ಹನುಮಂತು ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದು, ತಾಯಿ ರೇಖಾ ಬಟ್ಟೆಯನ್ನು ಹೊಲಿದು ಜೀವನ ಮಾಡುತ್ತಾರೆ. ಇರೋ ಮೂವರು ಮಕ್ಕಳಲ್ಲಿ ಆದರ್ಶನೇ ಮೊದಲನೇಯವನು. ಇವನ ನಂತರ ಇಬ್ಬರು ಹೆಣ್ಮಕ್ಕಳು ಇದ್ದಾರೆ. ಬಳ್ಳಾರಿ, ದಾವಣಗೆರೆ, ಬೆಂಗಳೂರು ಸೇರಿದಂತೆ ಹತ್ತುಹಲವು ಕಡೆಗಳಲ್ಲಿ ಆದರ್ಶನಿಗೆ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಇದೀಗ ಮನೆಯಲ್ಲಿ ಔಷೋಧಪಚಾರ ಮಾಡುತ್ತಿದ್ದಾರೆ.
 
ನಿತ್ಯಕರ್ಮಾದಿಗಳು ಸೇರಿದಂತೆ ಎಲ್ಲವನ್ನು ಮಾಡೋ ಆದರ್ಶನ ತಾಯಿಗೆ ಮಗನ ಆಸೆಯನ್ನು ಈಡೇರಿಸಬೇಕೆನ್ನುವ ಹಂಬಲ. ಒಮ್ಮೆಯಾದ್ರೂ ಪುನೀತ್ ಅವರನ್ನು ಮಗನಿಗೆ ತೋರಿಸಬೇಕೆನ್ನುವುದಾಗಿದೆ. ಪುನೀತ್ ಅವರನ್ನು ಭೇಟಿಯಾಗಲು ಮಗನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗೋದು ಕಷ್ಟ. ಒಂದು ವೇಳೆ ಹೋದ್ರೂ, ಅಲ್ಲಿ ಅವರು ಭೇಟಿಯಾಗುತ್ತಾರೋ ಇಲ್ಲವೋ ಎನ್ನುವ ಭಯವು ಇವರಿಗೆ ಕಾಡಲು ಶುರುಮಾಡಿದೆ. 
 
ಜೀವನದಲ್ಲಿ ಪ್ರತಿಯೊಬ್ಬರಿಗೂ, ಒಂದೊಂದು ಆಸೆ, ಒಂದೊಂದು ಗುರಿ ಇರುತ್ತದೆ. ಆದ್ರೇ, ಮನುಷ್ಯನಿಗೆ ತನ್ನ ಆಸೆ ಈಡೇರಿಸಿಕೊಳ್ಳಲು ಸಾಕಷ್ಟು ಸಮಯ ಇರುತ್ತದೆ. ಆದ್ರೇ, ಪುನಿತ್ ಅಭಿಮಾನಿಯಾಗಿರೋ ಆದರ್ಶ ಮತ್ತವರ ಕುಟುಂಬಕ್ಕೆ ಯಾವುದೇ ಆಸೆ ಆಕಾಂಕ್ಷೆ ಇಲ್ಲ. ತಮಗೆ ಬರೋ ಆದಾಯದಲ್ಲಿ ಸಂತೋಷವಾಗಿದ್ದಾರೆ. ಆದ್ರೇ ಖಾಯಿಲೆಯಿಂದ ಬಳಲುತ್ತಿರೋ ಮಗನಿಗೆ ಒಮ್ಮೆ ಪುನಿತ್ ರಾಜಕುಮಾರ ಅವರನ್ನು ತೋರಿಸಬೇಕೆನ್ನುವುದಾಗಿದೆ ಆಸೆ ಮತ್ತು ಗುರಿಯಾಗಿದ್ದು, ದೇವರು ಆ ಭಾಗ್ಯ ಕರುಣಿಸಲಿ ಎಂಬುದೇ ಸಹಸ್ರಾರು ಅಭಿಮಾನಿಗಳ ಆಶಯವಾಗಿದೆ.
 
 

మరింత సమాచారం తెలుసుకోండి: