ಸಿನಿಮಾ ಮಾಧ್ಯಮ ಅತ್ಯಂತ ವೇಗವಾಗಿ ಎಲ್ಲರನ್ನೂ ತಲುಪಬಲ್ಲ ಹಾಗೂ ಪ್ರಭಾವ ಬೀರಬಲ್ಲಂತಹ ಮಾಧ್ಯಮವಾಗಿ ಗುರುತಿಸಿಕೊಂಡಿದೆ ಈ ಒಂದು ಸಿನಿಮಾ ಮಾಧ್ಯಮದ ಮೂಲಕ ಕರೋನಾ ವೈರಸ್ ಬಗ್ಗೆ ಸಿನಿಪ್ರಿಯರಿಗೆ ಜಾಗೃತಿಯನ್ನು ಮೂಡಿಸಲು ಇಂದಿಂನ ಚಲನ ಚಿತ್ರಗಳು ಹಾಗೂ ಅವುಗಳ ಪೋಸ್ಟರ್ಗಳ ಮೂಲಕ ಜಾಗೃತಿಯನ್ನು ಮೂಡಿಸಿದ್ದಾರೆ ಅದ್ಯಾವ ಸಿನಿಮಾದ ಪೋಸ್ಟಪರ್ನಲ್ಲಿ ಕರೋನಾ ಬಗ್ಗೆ ಜಾಗೃತಿ ಮೂಡಿಸಿದ್ದಾರೆ ಅಂತೀರ ಇಲ್ಲಿದೆ ನೋಡಿ ಕಂಪ್ಲೀಟ್ ಟೀಟೇಲ್ಸ್ 

 

 

ಸಿಂಪಲ್ ಸುನಿ ನಿರ್ದೇಶನದ ಅವತಾರ ಪುರುಷ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಯಾವುದೇ ಹಬ್ಬ ಬಂದರೂ ಆ ಹಬ್ಬದ ವಿಶೇಷತೆಯನ್ನು ಗಮನದಲ್ಲಿಟ್ಟುಕೊಂಡೇ ಇಲ್ಲಿಯವರೆಗೂ ಪೋಸ್ಟರ್ಗಳನ್ನು ಬಿಡುಗಡೆ ಮಾಡುತ್ತ ಬಂದಿದ್ದ ಸಿನಿಮಾ ತಂಡ ಈ ಬಾರಿ ಯುಗಾದಿ ಹಬ್ಬದಂದು ಕೊರೋನಾ ಬಗ್ಗೆ ಜಾಗೃತಿ ಮೂಡಿಸಲೆಂದು ವಿಭಿನ್ನವಾದ ರೀತಿಯಲ್ಲಿ ಪೊಸ್ಟರ್ ಬಿಡುಗಡೆ ಮಾಡಿದ್ದಾರೆ ಈಗ ಯುಗಾದಿ ಪ್ರಯುಕ್ತ ವಿಭಿನ್ನವಾದ ಪೋಸ್ಟರ್ ಬಿಡುಗಡೆ ಮಾಡಿದೆ ಚಿತ್ರತಂಡ.

 

 

 

ಚಿತ್ರದ ನಾಯಕ ಶರಣ್ ಮತ್ತು ಆಶಿಕಾ ರಂಗನಾಥ್ ಮುಖಕ್ಕೆ ಮಾಸ್ಕ್ ಹಾಕೊಂಡು ಯುಗಾದಿಯ ಶುಭಾಶಯ ಕೋರಿದ್ದಾರೆ. ಮನೆಯಲ್ಲೇ ಇರಿ. ಹೊರಗೆ ಬಾರದೆ ಹಬ್ಬ ಮಾಡಿ ಎಂದು ಹೇಳಿಕೊಂಡು ಜಾಗೃತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಅಂದಹಾಗೆ, ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ಅವತಾರ ಪುರುಷ ಸಿನಿಮಾ, ಸದ್ಯ ಕೊನೇ ಹಂತದ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮೇ ಅಥವಾ ಜೂನ್ ನಲ್ಲಿ ಬಿಡುಗಡೆ ಆಗಬೇಕಿತ್ತು. ಈಗ ಕರೊನಾ ಹಾವಳಿಯಿಂದ ಬಿಡುಗಡೆಯನ್ನು ಮುಂದೂಡಿಕೊಂಡಿದೆ. ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ

 

 

ಅದೇ ರೀತಿ ಚಾಲೆಂಜಿಂಗ್ ಸ್ಟಾರ್  ದರ್ಶನ್  ಅಭಿನಯದ ರಾಬರ್ಟ್ ಚಿತ್ರದ ಪೋಸ್ಟರ್ ಅಲ್ಲೂ ಕೂಡ ಸ್ವಚ್ಛವಾಗಿರಿ, ಸ್ವಾಸ್ಥ್ಯ ಕಾಪಾಡಿಕೊಳ್ಳಿ ಎಂಬ ವಾಕ್ಯದೊಂದಿಗೆ ಹೊಸ ಪೋಸ್ಟರ್ ಬಿಡುಗಡೆ ಮಾಡಿದೆ. ಎಷ್ಟೇ ಜಾಗೃತಿ ಮೂಡಿಸಿದರೂ ಕೇಳದ ನಾಡಿನ ಜನತೆ ಎಲ್ಲೆಂದರಲ್ಲಿ ಹಬ್ಬದಾಚರಣೆಯ ಗುಂಗಿನಲ್ಲಿದೆ. ಅದೆಲ್ಲವನ್ನು ಬಿಟ್ಟು ಮನೆಯಲ್ಲಿರಿ ಎಂದು ದರ್ಶನ್ ಕೈ ಮುಗಿದು ಕರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಜಾಗೃತೆಯಿಂದ ಇರಿ ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.

మరింత సమాచారం తెలుసుకోండి: