ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಮುರಳಿ ಅಭಿನಯದ ಭರಾಟೆ ಚಿತ್ರವು ಇದೇ ತಿಂಗಳ 18 ರಂದು ಚಿತ್ರ ತೆರಿಗೆ ಅಪ್ಪಳಿಸಲಿದೆ. ಇದೀಗ ಈ  ಚಿತ್ರದ ಕುರಿತು ನಾಯಕಿ ಶ್ರೀಲಿಲಾ ಏನ್ ಹೇಳಿದ್ದಾರೆ ಅಂತ ನೀವೆ ಓದಿ. ನಾಯಕಿ ಶ್ರೀಲೀಲಾ ಕಳೆದೊಂದು ತಿಂಗಳಿನಿಂದ ಕೆಲಸದ ಒತ್ತಡದಲ್ಲಿದ್ದಾರೆ. ತಮ್ಮ ಚೊಚ್ಚಲ ಚಿತ್ರ ಕಿಸ್ ನಲ್ಲಿ ಪ್ರಶಂಸೆ ಗಿಟ್ಟಿಸಿಕೊಂಡಿರುವ ಶ್ರೀಲೀಲಾ ಎರಡನೇ ಚಿತ್ರ ಭರಾಟೆಯ ಬಿಡುಗಡೆಗೆ ಇದಿರು ನೋಡುತ್ತಿದ್ದಾರೆ.


ಚೇತನ್ ಕುಮಾರ್ ನಿರ್ದೇಶನದ ಭರಾಟೆ ಚಿತ್ರದ ನಾಯಕ ಶ್ರೀಮುರಳಿ. ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಇದೇ 18ರಂದು ತೆರೆಗೆ ಬರಲಿದೆ.ಭರಾಟೆ ಎಂದರೆ ಶಬ್ದ, ಇದು ಪ್ರತಿಯೊಬ್ಬರ ಜೀವನದಲ್ಲಿ ಬದಲಾವಣೆ ಮಾಡುತ್ತದೆ. ಭರಾಟೆ ಚಿತ್ರದಲ್ಲಿ ಶಬ್ದದ ಭಾವನೆಯನ್ನು ಹಲವು ಭಾವನೆಗಳ ಮೂಲಕ ತೋರಿಸಲಾಗುತ್ತದೆ. ಕಿಸ್ ಚಿತ್ರ ಮಾಡುತ್ತಿರುವ ವೇಳೆಗೆ ಭರಾಟೆ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. ಇದು ಮೊದಲ ಚಿತ್ರಕ್ಕಿಂತ ಸಂಪೂರ್ಣ ಭಿನ್ನ. ಭರಾಟೆ ಚಿತ್ರದಲ್ಲಿ ಸ್ಟಾರ್ ಜೊತೆ ನಟಿಸುವ ಅವಕಾಶ ಸಿಕ್ಕಿದೆ. ಅಲ್ಲದೆ ನನಗೆ ನಟಿಸಲು ಅವಕಾಶ ಸಿಕ್ಕಿದೆ, ಭರತನಾಟ್ಯ, ಕುದುರೆ ಸವಾರಿ, ವೀಣೆ ನುಡಿಸುವ ಅವಕಾಶ ಕೂಡ ಸಿಕ್ಕಿದೆ ಎಂದರು ಶ್ರೀಲೀಲಾ.


ಭರಾಟೆ ಚಿತ್ರೀಕರಣ ವೇಳೆ ಹಲವು ಸವಾಲುಗಳನ್ನು ಎದುರಿಸ ಬೇಕಾಯಿತಂತೆ. ಹಾಡಿನ ಚಿತ್ರೀಕರಣ ವೇಳೆ ಬೆಟ್ಟದಿಂದ ಉರುಳುವ ದೃಶ್ಯವಿತ್ತು. ನಾನು ಭಾರೀ ಗಾತ್ರದ ಗೌನ್ ಧರಿಸಿದ್ದೆ. ಅದು ಹೆಲಿಕಾಪ್ಟರ್ ಶೂಟ್. ಶ್ರೀಮುರಳಿ ಮತ್ತು ನಾನು ಹಾಡೊಂದಕ್ಕೆ ನಟಿಸಬೇಕಾಗಿತ್ತು. ನಂತರ ನಾನು ಓಡಿ ಹೋಗಿ ಅವಿತು ಕೂರಬೇಕು. ಪರ್ವತದ ಮೇಲೆ ನಿಂತಿದ್ದೆವು. ಹಿಂದೆ ಜೋರಾಗಿ ಓಡುವಾಗ ಜಾರಿದೆ. ಪರ್ವತದ ಕೆಳಗೆ ಉರುಳುತ್ತಾ ಹೋದೆ. ಅದೃಷ್ಟವಶಾತ್ ಕಲ್ಲೊಂದು ಮಧ್ಯದಲ್ಲಿ ತಡೆದು ನನ್ನನ್ನು ಕಾಪಾಡಿತು. ಭಯವನ್ನು ನಿವಾರಿಸಲು ಮುಂದಿನ ದೃಶ್ಯದ ಚಿತ್ರೀಕರಣದಲ್ಲಿ ಭಾಗಿಯಾದೆ ಎಂದು ಹೇಳುತ್ತಾರೆ ಶ್ರೀಲೀಲಾ.
ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಖ್ಯಾತಿ ಪಡೆದಿದ್ದು, ಭಾರೀ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. 


మరింత సమాచారం తెలుసుకోండి: