ನಟಿ ಹರಿಪ್ರಿಯಾ ಅವರ ವಿರುದ್ಧ ಸೂಜಿದಾರ ಚಿತ್ರದ ನಿರ್ದೇಶಕ ಮೌನೇಶ್ ಬಡಿಗೇರ್ ಗರಂ ಆಗಿದ್ದಾರೆ. ಹೌದು, ಸೂಜಿದಾರ ಸಿನಿಮಾ ಶೂಟಿಂಗ್ ಮಾಡೋದಕ್ಕಿಂತ ಮೊದಲೇ ಹರಿಪ್ರಿಯಾ ಅವರಿಗೆ ಈ ಚಿತ್ರದ ಎಲ್ಲ ರೀತಿಯ ಕಥೆಯನ್ನು ಹೇಳಲಾಗಿತ್ತು. ಅಷ್ಟೇ ಅಲ್ಲದೇ ಸೂಜಿದಾರ ಚಿತ್ರದ ಇಡೀ ಸ್ಕ್ರಿಪ್ಟ್ ಕೂಡ ನೀಡಲಾಗಿತ್ತು. ಆಗ ಹರಿಪ್ರಿಯಾ ಚಕಾರ ಎತ್ತಿರಲಿಲ್ಲ ಎಂದಿದ್ದಾರೆ.


ಆದರೆ ಇದೀಗ ಹರಿಪ್ರಿಯಾ ಸೂಜಿದಾರ ಚಿತ್ರದ ಕತೆಯ ಬಗ್ಗೆ ಹೀಗೆ ಬಹಿರಂಗವಾಗಿ ಹೇಳಿಕೆ ನೀಡೋದೆ ಸರಿಯಲ್ಲ ಎಂದು ಮೌನೇಶ್ ಬಡಿಗೇರ್ ಹರಿಪ್ರಿಯಾ ವಿರುದ್ಧ ಹರಿಹಾಯ್ದಿದ್ದಾರೆ.ಅಷ್ಟಕ್ಕೂ ಹರಿಪ್ರಿಯಾ ಹೇಳಿದ್ದಾದ್ರೂ ಏನು ಅಂದ್ರೆ, ಸೂಜಿದಾರ ಚಿತ್ರ ಬಿಡುಗಡೆಯಾದ ಮೇಲೆ ಸಾಕಷ್ಟು ಬದಲಾವಣೆ ಇದೆ. ಅದಕ್ಕೂ ಕೊಟ್ಟ ಸ್ಕ್ರಿಪ್ಟ್‌ಗೂ ನಂತರ ತೋರಿಸಿದ ಚಿತ್ರಕ್ಕೂ ವ್ಯತ್ಯಾಸ ಇದೆ ಎಂದು ಹರಿಪ್ರಿಯಾ ಹೇಳಿದ್ದರು. ಇದರಿಂದ ಗರಂ ಆಗಿರುವ ನಿರ್ದೇಶಕ, ಸಿನಿಮಾ ಪ್ರಮೋಷನ್ಗೂ ಬಾರದ ಹರಿಪ್ರಿಯಾ ಇದೀಗ ಇಡೀ ಚಿತ್ರತಂಡ ಹಾಗೂ ಕಲಾವಿದರಿಗೆ ಅವಮಾನ ಮಾಡುವ ರೀತಿಯಲ್ಲಿ ಅಸಂಬದ್ಧ ಹೇಳಿಕೆ ನೀಡಿದ್ದಾರೆ ಎಂದು ಕಿಡಿ ಕಾರಿದ್ದಾರೆ.

ಇನ್ನು ತಮ್ಮ ಸಮರ್ಥನೆಯನ್ನು ಮುಂದುವರೆಸಿರುವ ಮೌನೇಶ್ ಬಡಿಗೇರ್, ಚಿತ್ರದಲ್ಲಿ ಬೇರೆ ಪಾತ್ರಗಳು ಹೈಲೈಟ್ ಆಗಿರೋದನ್ನು ಕಂಡು ಹರಿಪ್ರಿಯಾ ಅವರಿಗೆ ಸಹಿಸೋಕೆ ಆಗಿಲ್ಲ. ಸಿನಿಮಾ ಬಿಡುಗಡೆಯಾದ ಮೂರೇ ದಿನಕ್ಕೆ ಅವರ ಅಹಂಕಾರಕ್ಕೆ ಪೆಟ್ಟು ಬಿದ್ದಿದೆ. ಅವರು ನೀಡಿದ ಹೇಳಿಕೆಯಿಂದ ಕಲೆಕ್ಷನ್ ಡಲ್ ಆಗಿದ್ದು, ನಿರ್ಮಾಪಕರಿಗೆ ನಷ್ಟ ಉಂಟಾಗೋ ಸಾಧ್ಯತೆ ಇದೆ. ಹೀಗಾಗಿ ಅದನ್ನು ಭರಿಸುವಂತೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಸಲ್ಲಿಸಿದ್ದಾರೆ


మరింత సమాచారం తెలుసుకోండి: