ಇದೇ ಮೊದಲ ಬಾರಿಗೆ ಮಿಲ್ಕಿ ಬ್ಯುಟಿ ತಮನ್ನಾ ಮತ್ತು ನವಾಜುದ್ದೀನ್ ಸಿದ್ದೀಕಿ ಅವರು ತೆರೆ ಮೇಲೆ ಬರುತ್ತಿದ್ದಾರೆ. ಇದು ತಮನ್ನಾ ಮತ್ತು ನವಾಜುದ್ದೀನ್ ಸಿದ್ದೀಕಿ ಅವರ ಅಭಿಮಾನಿಗಳಿಗೆ ಖುಷಿ ತಂದಿದೆ. ಹೌದು, ಅಷ್ಟಕ್ಕೂ ಬೋಲೆ ಚೊಡಿಯಾ ಚಿತ್ರದಲ್ಲಿ ಇಬ್ಬರೂ ನಟಿಸಲಿದ್ದಾರೆ. ಇದಕ್ಕೂ ಮುನ್ನ ನಟಿ ಮೌನಿ ರಾಯ್ ಅವರು ಈ ಚಿತ್ರಕ್ಕೆ ಆಯ್ಕೆ ಆಗಿದ್ದರು. ನಂತರದ ಬೆಳವಣಿಗೆಯಲ್ಲಿ ಮೌನಿ ರಾಯ್ ಅವರು ಸಿನಿಮಾದಿಂದ ಹೊರ ನಡೆದ ನಂತರ ತಮನ್ನಾ ಅವರು ಈ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ.
 
ಮೌನಿ ರಾಯ್ ಅವರ ಮೇಲೆ ಆರೋಪಗಳು ಕೇಳಿ ಬಂದಿದ್ದವು. ಅವರು ವೃತ್ತಿಪರತೆಯ ಕೊರತೆ ಮತ್ತು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎನ್ನಲಾಗಿತ್ತು. ಈ ಆರೋಪವನ್ನು ಮಾಡಿದವರು ಬೇರೆ ಯಾರೂ ಅಲ್ಲ, ಚಿತ್ರದ ನಿರ್ಮಾಪಕ ರಾಜೇಶ್ ಭಾಟಿಯಾ. ಇದೇ ಕಾರಣಕ್ಕೆ ಮೌನಿ ರಾಯ್ ಅವರು ಚಿತ್ರದಿಂದ ಬೇಸತ್ತು ಹೊರ ನಡೆದಿದ್ದರು. ಇಂದು ತಿಂಗಳ ನಂತರ, ಉತ್ತರ ಪ್ರದೇಶದಲ್ಲಿ ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ.

ರಾಜೇಶ್ ಭಾಟಿಯಾ ಹಾಗೂ ಕಿರಣ್ ಝವೇರಿ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ನವಾಜುದ್ದೀನ್ ಸಿದ್ದಿಕಿ ಅವರ ಸಹೋದರ ಶಮ್ಸ್ ನವಾಬ್ ಸಿದ್ದಿಕಿ ಅವರು ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ನಟಿ ತಮನ್ನಾ ಅವರು ಬೊಲೆ ಚೂಡಿಯಾ ಚಿತ್ರಕ್ಕೆ ತಮ್ಮ ಪಾತ್ರದ ಕುರಿತು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. 

 ಅಷ್ಟಕ್ಕೂ ಅವರು ಹೇಳಿದ್ದಾದ್ರೂ ಏನು ಅನ್ನೋದನ್ನು ನೋಡೋಣ. ಬಾಲಿವುಡ್ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಬಹುಆಯಾಮದ ಪಾತ್ರದಲ್ಲಿ ನಾನು ನಟನೆ ಮಾಡುತ್ತಿದ್ದೇನೆ. ಈ ಚಿತ್ರದ ಕಥೆ ನನ್ನನ್ನು ತುಂಬ ಆಕರ್ಷಣೆ ಮಾಡಿದೆ. ಇದು ಸಮಾಜದಲ್ಲಿ ನಡೆಯುವ ಘಟನೆಗಳ ಕಥಾಹಂದರ ಹೊಂದಿದೆ, ಈ ಚಿತ್ರದಲ್ಲಿನ ನನ್ನ ಪಾತ್ರ ಪ್ರಯೋಗಾತ್ಮಕ ಎಂದು ಉತ್ತಮ ಮಾತುಗಳನ್ನು ಆಡಿದ್ದರು. 

ಬೋಲೆ ಚೂಡಿಯಾ ಚಿತ್ರಕ್ಕೆ ತಮನ್ನಾ ಅವರು ಪರ್ಫೆಕ್ಸ್ ಎಂದು ನವಾಜುದ್ದೀನ್ ಸಿದ್ದಿಕಿ ಅವರು ಇತ್ತೀಚೆಗೆ ಹೇಳಿದ್ದರು. ಇದರ ಕಥಾವಸ್ತು ಏನೆಂದರೆ, ಹಳ್ಳಿ ಹುಡುಗಿ ಮತ್ತು ಬಳೆಗಾರ ಇಬ್ಬರ ನಡುವಿನ ಪ್ರೇಮಕತೆ ಸಿನಿಮಾದ ಮೊದಲ ವಸ್ತು.  ಇದರಲ್ಲಿ ರಾಜಪಾಲ್ ಯಾದವ್ಮಮ, ಆದಿತ್ಯ ಶ್ರೀನಿವಾಸ್, ಕಬೀರ್ ಸಿಂಗ್ ಹಾಗೂ ಮೊದಲಾದವರು ನಟಿಸಲಿದ್ದಾರೆ. ಅಲ್ಲದೇ ನಿರ್ದೇಶಕ ಅನುರಾಗ್ ಕಶ್ಯಪ್ ಅತಿಥಿ ಪಾತ್ರದಲ್ಲಿ ಕಾಣಿಸಲಿಕೊಳ್ಳಲಿದ್ದಾರೆ.  ಈ ಸಿನಿಮಾ 2020 ಕ್ಕೆ ಬಿಡುಗಡೆ ಆಗಲಿದೆ ಎನ್ನಲಾಗಿದೆ. 


మరింత సమాచారం తెలుసుకోండి: