ಡಾ ವಿಷ್ಣು ಸೇನಾ ಸಮಿತಿ ಅಧ್ಯಕ್ಷ ಅಂದರೆ ಅದು ವೀರಕಪುತ್ರ ಶ್ರೀನಿವಾಸ್. ಹೌದು, ಇವರಿಗೆ ವಿಷ್ಣು ಎಂದರೆ ಎಲ್ಲಿಲ್ಲದ ಪ್ರೀತಿ. ವಿಷ್ಣು ಅಭಿಮಾನಿಯಾದ ಶ್ರೀನಿವಾಸ್, ಡಾ ವಿಷ್ಣುವರ್ಧನ್ ಅವರ ಹೆಸರಲ್ಲಿ ರಾಷ್ಟ್ರೀಯ ಉತ್ಸವ ನಡೆಸಿ ದಾಖಲೆ ಮಾಡಿದ್ದರು. ಇದೀಗ ಹೊಸ ವಿಷ್ಯ ಏನಪ್ಪ ಅಂದರೆ. ವೀರಕಪುತ್ರ ಶ್ರೀನಿವಾಸ್ ಇದೀಗ ಚಿತ್ರ ನಿರ್ಮಾಪಕ. ಹೌದು ಶ್ರೀನಿವಾಸ್ ಅವರು ಇದೀಗ ಚಲನಚಿತ್ರ ನಿರ್ಮಾಣಕ್ಕೆ ಕೈಹಾಕಿದ್ದಾರೆ ಎನ್ನುವ ಸುದ್ದಿ ಹೊರ ಬಿದ್ದಿದೆ.


ಶ್ರೀನಿವಾಸ್ ಅವರಿಗೆ ಬಹಳ ದಿನಗಳಿಂದ ಚಲನಚಿತ್ರವೊಂದನ್ನು ನಿರ್ಮಾಣ ಮಾಡಬೇಕು ಎನ್ನುವ ಆಶೆ ಮತ್ತು ಕನಸು ಇತ್ತಂತೆ. ಇದೀಗ ಅವರ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಹೌದು ಸ್ಯಾಂಡಲ್ ವುಡ್ ಲೋಕದಲ್ಲಿ ಇದೀಗ ಶ್ರೀನಿವಾಸ್ ಅವರು ಒಂದು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿ ತಮ್ಮ ಕನಸಿಗೆ ರೆಕ್ಕೆ ಕಟ್ಟಿ ಹಾರಿಸುವ ಯತ್ನದಲ್ಲಿ ಇದ್ದಾರೆ.


ವಿಷ್ಣು ದಾದಾಗೆ ಲಕ್ಷಾಂತರ ಜನರು ಅಭಿಮಾನಿಗಳಿದ್ದಾರೆ. ಅವರ ಚಿತ್ರಗಳಿಂದ ಪ್ರೇರಿತರಾಗಿ ಬದುಕನ್ನೇ ಬದಲಾಯಿಸಿಕೊಂಡವರಿದ್ದಾರೆ. ಅಲ್ಲದೇ, ವಿಷ್ಣು ದಾದಾ ಅವರನ್ನು ದೇವರಂತೆ ನೆನೆದು ಬದುಕಿದವರಿದ್ದಾರೆ. ವಿಷ್ಣು ತಮ್ಮ ಬದುಕಿನುದ್ದಕ್ಕೂ ಯಾವುದೇ ಕಪ್ಪು ಚುಕ್ಕೆಯನ್ನು ಮೈ ಮೇಲೆ ಹಾಕಿಕೊಂಡವರಲ್ಲ. ತಮ್ಮ ಜೀವಿತದ ಕೊನೆ ಕೊನೆಗೆ ಆಧ್ಯಾತ್ಮದತ್ತ ಹೊರಳಿದ್ದರು ವಿ‍ಷ್ಣುವರ್ಧನ್ ಅವರು. ಇದೀಗ ವಿಷ್ಣು ಅಭಿಮಾನಿಯೊಬ್ಬ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ ಎಂದರೆ ಸಹಜವಾಗಿಯೇ ಅವರ ಆತ್ಮಕ್ಕೆ ಸಂತವಾಗುತ್ತದೆ.


ಹೌದು ಶ್ರೀನವಾಸ್ ಅವರು ಸುದೀಪ್ ಅವರ ಜೊತೆ ಉತ್ತಮವಾದಂತಹ ಒಡನಾಟ ಹೊಂದಿದ್ದಾರೆ. ಹೀಗಾಗಿ ಸುದೀಪ್ ಅವರನ್ನೇ ನಾಯಕನಾಗಿ ಮಾಡುವ ಚಿತ್ರಕ್ಕೆ ಇವರು ನಿರ್ಮಾಣ ಮಾಡಬಹುದು ಎನ್ನಲಾಗುತ್ತಿದೆ. ಅಲ್ಲದೇ ಮತ್ತೊಂದು ವಿಷ್ಯ ಏನಪ್ಪ ಅಂದರೆ, ಸುದೀಪ್ ಕೂಡ ವಿಷ್ಣು ದಾದಾ ಅವರ ಫ್ಯಾನ್. ಹೀಗಾಗಿ ಶ್ರೀನಿವಾಸ್ ಅವರಿಗೆ ಬೆಂಬಲವಾಗಿ ಸುದೀಪ್ ಯಾವಾಗಿನಿಂದಲೂ ಇದ್ದಾರೆ. ಇದೇ ಕಾರಣಕ್ಕೆ ಸುದೀಪ್ ಕೂಡ ಶ್ರೀನಿವಾಸ್ ನಿರ್ಮಾಣ ಂಆಡುತ್ತಿರೋ ಚಿತ್ರವನ್ನು ಒಪ್ಪಿಕೊಳ್ಳಬಹುದು ಎನ್ನುವುದು ಸ್ಯಾಂಡಲ್ ವುಡ್ ಪಂಡಿತರ ಲೆಕ್ಕಾಚಾರ.


ಒಂದು ವೇಳೆ ಸುದೀಪ್ ಅವರು ಈ ಚಿತ್ರಕ್ಕೆ ಒಪ್ಪಿಕೊಳ್ಳದೇ ಇದ್ದರೆ, ಮತ್ಯಾರನ್ನು ಚಿತ್ರದ ನಾಯಕರನ್ನಾಗಿ ಮಾಡುತ್ತಾರೆ ಅನ್ನೋದು ಕುತೂಹಲ.  ಇದೀಗ ಸದ್ಯಕ್ಕೆ ವಿಷ್ಣುವರ್ಧನ್ ಅವರ ಹುಟ್ಟುಹಬ್ಬದ ಸಲುವಾಗಿ ಶ್ರೀನಿವಾಸ್ ಅವರು ಬ್ಯುಸಿ ಇದ್ದಾರೆ. ವಿಷ್ಣು ಹುಟ್ಟು ಹಬಬ್ಬದಂದು ವಿಶೇಷವಾಗಿ ಕೆಲವು ಕಾರ್ಯಕ್ರಮಗಳನ್ನ ಹಮ್ಮಿಕೊಂಡಿದ್ದಾರೆ. ಅದರ ತಯಾರಿ ಮಾಡುತ್ತಿದ್ದಾರೆ. ಹೀಗಾಗಿ ಇದೆಲ್ಲವೂ ಮುಗಿದ ಬಳಿಕ ಅಂದರೆ ಡಿಸೆಂಬರ್ ಸಮಯಕ್ಕೆ ಸಿನಿಮಾ ಕೆಲಸಕ್ಕೆ ಚಾಲನೆ ನೀಡಲು ಯೋಚನೆ ಮಾಡಿದ್ದಾರೆ ಎನ್ನಲಾಗುತ್ತಿದೆ.


మరింత సమాచారం తెలుసుకోండి: