ಸ್ಯಾಂಡಲ್ ವುಡ್‌ನಲ್ಲಿ ಇದೀಗ ದರ್ಶನ್ ಹವಾ ಜೋರಾಗಿದೆ. ಹೌದು ಕುರುಕ್ಷೇತ್ರ ಚಿತ್ರ 100 ಕೋಟಿ ಕ್ಲಬ್ ಸೇರಿದ ಮೇಲೆ ದರ್ಶನ್ ಇದೀಗ ಮತ್ತಷ್ಟು ತಮ್ಮ ಮಾರ್ಕೆಟ್ ಹೆಚ್ಚಿಸಿಕೊಂಡಿದ್ದಾರೆ. ಅಲ್ಲದೇ ಇದರ ಜೊತೆಗೆ ರಾಬರ್ಟ್ ಚಿತ್ರ ಕೂಡ ಸದ್ದು ಮಾಡುತ್ತಿತ್ತು. ಹೌದು ರಾಬರ್ಟ್ ಚಿತ್ರ ದರ್ಶನ್ ಅವರ ಮತ್ತೊಂದು ಚಿತ್ರ. ಇದು ಸ್ಯಾಂಡಲ್​ವುಡ್​ನಲ್ಲಿ ಸೆಟ್ಟೇರಿದಾಗಲಿಂದಲೇ ಸಖತ್ ಸೌಂಡ್ ಮಾಡುತ್ತಿತ್ತು. ಆದರೆ ಇದೀಗ ರಾಬರ್ಟ್‌ ಕೊಂಚ ತಣ್ಣಗಾಗಿದ್ದಾನೆ. ಹಾಗಾದರೆ, ಈ ಕುರಿತು ನಿರ್ದೇಶಕ ತರುಣ್ ಸುದೀರ್ ಹೇಳಿದ್ದೇನು? ಇಲ್ಲಿದೆ ನೋಡಿ.


ಹೌದು ರಾಬರ್ಟ್ ತಣ್ಣಗಾಗಿರೋದಕ್ಕೆ ನಿರ್ದೇಶಕ ತರುಣ್ ಸುದೀರ್ ಕಾರಣವನ್ನು ಬಿಚ್ಚಿಟ್ಟಿದ್ದಾರೆ. ಬಾಕ್ಸಾಫೀಸ್​ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ಅವರು ಸದ್ಯಕ್ಕೆ ದುರ್ಯೋಧನನಾಗಿ ದೊಡ್ಡ ಮಟ್ಟದಲ್ಲಿ ಅಬ್ಬರಿಸುತ್ತಿದ್ದಾರೆ.ಇದೇ ಸಂದರ್ಭದಲ್ಲಿ 'ಕುರುಕ್ಷೇತ್ರ' ಕಲೆಕ್ಷನ್ ಮುಗಿಲೆತ್ತರಕ್ಕೆ ಏರುತ್ತಿರುವಾಗಲೇ ದರ್ಶನ್ ಅವರ ಮತ್ತೊಂದು ಚಿತ್ರ ಗಲ್ಲಾಪೆಟ್ಟಿಗೆ ಆಳಲು ಆರಂಭ ಆಗುತ್ತದೆ. ಅದು ಬೇರೆ ಯಾವುದೂ ಅಲ್ಲ. 'ಒಡೆಯ' ಚಿತ್ರ. ಹೌದು ಇದೇ ಕಾರಣಕ್ಕೆ ಇದೀಗ ರಾಬರ್ಟ್​ ಎಂಟ್ರಿಯನ್ನು ತಡಮಾಡಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.


ಹೌದು ಚಿತ್ರದ ನಿರ್ದೇಶಕ ತರುಣ್ ಸುದೀರ್ ಅವರು ಈಗಾಗಲೇ ಈ ಕುರಿತು ಟ್ವೀಟ್ ಮಾಡಿದ್ದು, "ರಾಬರ್ಟ ಅಪ್​ಡೇಟ್​ಗಳಿಗಾಗಿ ಕಾಯುತ್ತಿರುವ ಅಭಿಮಾನಿಗಳು ಕ್ಷಮಿಸಬೇಕು. ಈಗಾಗಲೇ ಡಿ ಬಾಸ್ ಅಭಿನಯದ 'ಕುರುಕ್ಷೇತ್ರ' ಚಿತ್ರವು ಉತ್ತಮವಾಗಿ ಪ್ರದರ್ಶನವಾಗುತ್ತಿದೆ" ಎಂದಿದ್ದಾರೆ. ಇದರ ಬೆನ್ನಲ್ಲೇ "ಒಡೆಯ ಕೂಡ ರಿಲೀಸ್ ಆಗಲಿದೆ. ಹೀಗಾಗಿ 'ರಾಬರ್ಟ್'​ ಚಿತ್ರವನ್ನು ಕೆಲ ದಿನಗಳ ಕಾಲ ನಿಲ್ಲಿಸುವುದಾಗಿ ತಿಳಿಸುತ್ತೇವೆ. ಅಷ್ಟೇ ಅಲದ್ಲದೇ ಕೆಲವೇ ದಿನಗಳಲ್ಲಿ ದೊಡ್ಡ ಸುದ್ದಿಯೊಂದಿಗೆ ಮರಳುತ್ತೇವೆ," ಎಂದು ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.


ಅಷ್ಟಕ್ಕೂ ನಿರ್ದೇಶಕ ತರುಣ್ ಸುದೀರ್ ಹೀಗೆ ಟ್ವೀಟ್ ಮಾಡಿದ್ದೇಕೆ ಅಂತೀರಾ? ಏಕೆಂದರೆ ಈ ಹಿಂದೆ ಎಲ್ಲಾ ಹಬ್ಬದ ಸಂದರ್ಭದಲ್ಲೂ ದರ್ಶನ್ ಅಭಿಮಾನಿಗಳಿಗೆ ಈ ಚಿತ್ರ ತಂಡ ಪೋಸ್ಟರ್​ಗಳೊಂದಿಗೆ ಸರ್​ಪ್ರೈಸ್ ನೀಡಿತ್ತು. ಆದರೆ ಈ ಬಾರಿ ಗಣೇಶ್ ಚತುರ್ಥಿ ಇದ್ದರೂ, ಯಾವುದೇ ಸರ್‌ಪ್ರೈಸ್ ನೀಡಿರಲಿಲ್ಲ. ಹಬ್ಬದ ಪ್ರಯುಕ್ತ ಬಿಗ್ ಗಿಫ್ಟ್​ಗಾಗಿ ದಚ್ಚು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಅವರಿಗೆ ನಿರಾಸೆ ಆಗಿದ್ದು ಸತ್ಯ. ಹೀಗಾಗಿ ಚಿತ್ರದ ನಿರ್ದೇಶಕ ಇದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. 


ಒಟ್ಟಿನಲ್ಲಿ ರಾಬರ್ಟ್​​ ರೌದ್ರವತಾರ ನೋಡಲು ಅಭಿಮಾನಿಗಳು ಕಾತುರದಿಂದ ಒಂದೆಡೆ ಕಾಯುತ್ತಿದ್ದರೆ, ಮತ್ತೊಂದು ಚಿತ್ರೀಕರಣವನ್ನೂ ಮುಂದೆ ಹಾಕಿದ್ದಾರೆ. ಹೀಗಾಗಿ ಡಿಸೆಂಬರ್ ವೇಳೆಗೆ ರಾಬರ್ಟ್ ತೆರೆಗಪ್ಪಳಿಸುವ ಸಾಧ್ಯತೆಯಿದೆ.  ಇನ್ನು ದರ್ಶನ್ ಅವರು ಕೀನ್ಯಾ ಪ್ರವಾಸಕ್ಕೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. 


మరింత సమాచారం తెలుసుకోండి: