ರಮೇಶ್ ಅರವಿಂದ್ ಅವರಿಗೆ ತಮ್ಮದೇ ಆದ ಒಂದು ಅಭಿಮಾನಿ ವರ್ಗವಿದೆ. ಅವರು ನಟರಾಗಿ ಅಷ್ಟೇ ಅಲ್ಲದೇ, ನಿರ್ದೇಶಕರಾಗಿ, ನಿರೂಪಕರಾಗಿ ಸೈ ಎನಿಸಿಕೊಂಡವರು. ರಮೇಶ್ ಅರವಿಂದ್ ಅವರು ಬಹುಮುಖ ಪ್ರತಿಭೆ. ಅವರು ನೋಡು ನೋಡುತ್ತಲೇ ಸಿನಿ ಇಂಡಸ್ಟ್ರಿಯಲ್ಲಿ ಸೆಂಚೂರಿ ಭಾರಿಸಿದ್ದಾರೆ. ಇದೀಗ ಮತ್ತೊಂದು ಸಿಹಿ ಸುದ್ದಿಯನ್ನು ರಮೇಶ್ ಅರವಿಂದ್ ಅವರು ನೀಡಿದ್ದಾರೆ. ಅದೇ ಶಿವಾಜಿ ಸುರತ್ಕಲ್ ಸಿನಿಮಾ.


ಹೌದು, ರಮೇಶ್ ಅರವಿಂದ್ ಅವರು ಶಿವಾಜಿ ಅವತಾರದಲ್ಲಿ ಕಾಣಿಸಿಕೊಳ್ಳೋಕೆ ಇದೀಗ ಅವರು ಸಜ್ಜಾಗುತ್ತಿದ್ದಾರೆ. ನಿಮಗೆ ಗೊತ್ತಿರಲಿ ಶಿವಾಜಿ ಸುರತ್ಕಲ್ ಸಿನಿಮಾ ರಮೇಶ್ ಅರವಿಂದ್ ಅವರ 101ನೇ ಸಿನಿಮಾ. ಇದು ರಮೇಶ್ ಅರವಿಂದ್ ಅವರಿಗೆ ವಿಶೇಷ ಚಿತ್ರ ಅನ್ನೋದರಲ್ಲಿ ಯಾವುದೇ ಎರಡು ಮಾತಿಲ್ಲ. ಇಷ್ಟೇ ಅಲ್ಲ, ರಮೇಶ್ ಅರವಿಂದ್ ಅವರ ಇನ್ನೊಂದು ವಿಶೇಷವೆಂದರೆ, ನಾಳೆ ಅವರ ಹುಟ್ಟುಹಬ್ಬ. ಹೌದು ಸೆಪ್ಟೆಂಬರ್ 10 ರಮೇಶ್ ಅರವಿಂದ್ ಅವರ ಹುಟ್ಟು ಹಬ್ಬ. 


ಇತ್ತೀಚೆಗೆ ಚಿತ್ರದ ನಾಯಕ ನಟರ ಜನ್ಮದಿನದಂದೇ ಚಿತ್ರತಂಡ ಅವರ ಬರ್ತ್‌ಡೇ ಅಂಗವಾಗಿ ಅವರ ಮುಂಬರುವ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಸಂಪ್ರದಾಯ ಬೆಳೆದು ಬಂದಿದೆ. ಇದೀಗ ಇಲ್ಲಿಯೂ ಹಾಗೆಯೇ ಆಗುತ್ತಿದೆ. ಹೌದು ರಮೇಶ್ ಅರವಿಂದ್ ಅವರ ಜನ್ಮದಿನದಂದೇ ಇದೀಗ ಶಿವಾಜಿ ಸುರತ್ಕಲ್‌ ಚಿತ್ರದ ಟೀಸರ್‌ ಬಿಡುಗಡೆ ಮಾಡಲು ನಿರ್ಧರಿಸಿದೆ.


'ಶಿವಾಜಿ ಸುರತ್ಕಲ್‌’ ಚಿತ್ರ ಶೀರ್ಷಿಕೆಯ ಜೊತೆಗೆ ಮತ್ತೊಂದು ಅಡಿ ಬರಹವಿದೆ. ಹಾಗಾದರೆ ಆ ಅಡಿಬರಹ ಏನು ಗೊತ್ತಾ? ದ ಕೇಸ್‌ ಆಫ್ ರಣಗಿರಿ ರಹಸ್ಯ. ಹೌದು ಈ ಸಿನಿಮಾ ಒಂದು ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ರಮೇಶ್ ಅರವಿಂದ್ ಅವರು ಬಹುದಿನಗಳ ನಂತರ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಈ ಚಿತ್ರದ ಚಿತ್ರೀಕರಣ ಪೂರ್ಣವಾಗಿ ಮುಗಿದಿದ್ದು, ಇನ್ನೇಣು ಡಬ್ಬಿಂಗ್‌ ಕೆಲಸವೂ ಕೊನೆಯ ಹಂತದಲ್ಲಿ ಎಂದು ಹೇಳಲಾಗುತ್ತಿದೆ. 


ಇನನ್ನು ರಮೇಶ್ ಅರವಿಂದ್ ಅವರನ್ನು ಹೊರತುಪಡಿಸಿದರೆ, ರಾಧಿಕಾ ಚೇತನ್‌ ಹಾಗು ಆರೋಹಿ ನಾರಾಯಣ್‌ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ನಿರ್ದೇಶಕ ಆಕಾಶ್‌ ಶ್ರೀವತ್ಸ. ಇನ್ನು ಈ ಚಿತ್ರವನ್ನು ನಿರ್ಮಾಣ ಮಾಡಿದವರು ರೇಖಾ ಕೆ.ಎನ್‌ ಮತ್ತು ಅನೂಪ್‌ ಗೌಡ.  ಜೂಡಾ ಸ್ಯಾಂಡಿ ಅವರು ಈ ಚತ್ರಕ್ಕೆ ಸಂಗೀತ ಒದಗಿಸಿದ್ದಾರೆ.
 



మరింత సమాచారం తెలుసుకోండి: