ಉಗ್ರಂ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಲೋಕದಲ್ಲಿ ಹವಾ ಸೃಷ್ಟಿಸಿದ ಬೆಡಗಿ ಅಂದರೆ ಅದು ಹರಿಪ್ರಿಯಾ. ಹೌದು ಹರಿಪ್ರಿಯಾ ಕಡೆಯಿಂದ ಇದೀಗ ಒಂದು ಸುದ್ದಿ ಹೊರ ಬಿದ್ದಿದೆ. ಹಾಗಾದರೆ ಆ ಸುದ್ದಿ ಯಾವುದು? ಇಲ್ಲಿದೆ ನೋಡಿ ಡಿಟೇಲ್ಸ್. ಕೈ ತುಂಬಾ ಸಿನಿಮಾ ಇಟ್ಟುಕೊಂಡ ನಟಿ ಎಂದರೆ ಅದು ಹರಿಪ್ರಿಯಾ. ಇವರು ದುರ್ಗದ ಕಡೆಯವರು. ಹರಿಪ್ರಿಯಾ ಇತ್ತೀಚೆಗೆ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿರಲಿಲ್ಲ.


ಹರಿಪ್ರಿಯಾ ಅವರು ಇದೀಗ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಈ ಚಿತ್ರದ ನಾಯಕನಟ ಗುರುನಂದನ್ ಅನ್ನೋದು ವಿಶೇಷ. ಹೌದು ಗುರುನಂದನ್ ಅವರಿಗೆ ನಾಯಕಿಯಾಗಿ ಹರಿಪ್ರಿಯಾ ಅವರು ನಟಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರವನ್ನು ವಿಜಯ್ ಕಿರಣ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ವಿಜಯ್ ಕಿರಣ್ ಅವರು ಇತ್ತೀಚೆಗೆ ಸಿಂಗ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಇದೀಗ ಗುರುಕಿರಣ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. ಅಷ್ಟಕ್ಕೂ ಈ ಚಿತ್ರದ ನಿರ್ದೇಶಕರು ಜಯಣ್ಣ ಅವರು.
ಇನ್ನು ಹರಿಪ್ರಿಯಾ ಅವರೇ ಈ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಅವರು ಈ ಹಿಂದೆಯೇ ಜಯಣ್ಣ ಅವೆರ ನಿರ್ಮಾಣದ ಬುಲೆಟ್ ಬಸ್ಯಾ ಚಿತ್ರದಲ್ಲಿ ನಟಿಸಿದ್ದರು. ಇದೀಗ ಮತ್ತೆ ಅವರ ಬ್ಯಾನರ್‌ನಲ್ಲಿ ಅವಕಾಶ ಸಿಕ್ಕಿದೆ.


ಈ ಬಗ್ಗೆ ಮಾತನಾಡಿದ ಅವರು, 'ಪಾತ್ರ ತುಂಬಾ ಚೆನ್ನಾಗಿದೆ. ಇಡೀ ಸಿನಿಮಾ ಸಿನಿಮಾ ಹಾಸ್ಯದೊಂದಿಗೆ ಸಾಗುತ್ತದೆ. ಕಾಮಿಡಿ ಇಷ್ಟಪಡುವವರಿಗೆ ಈ ಚಿತ್ರ ಇಷ್ಟವಾಗುತ್ತದೆ’ ಎಂದಿದ್ದಾರೆ. ಇನ್ನು ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಹರಿಪ್ರಿಯಾ ಅವರು ಸಹ ಈ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ.


ಈಗಾಗಲೇ ಹರಿಪ್ರಿಯಾ ಅವರು ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಹರಿಪ್ರಿಯಾ ಅವರು ಕನ್ನಡದ ಮೋಸ್ಟ್ ಬ್ಯುಸಿ ನಟಿಯರಲ್ಲಿ ಒಬ್ಬರು. ಕನ್ನಡ್‌ ಗೊತ್ತಿಲ್ಲ, ಎಲ್ಲಿದ್ದೆ ಇಲ್ಲಿ ತನಕ, ಬಿಚ್ಚುಗತ್ತಿ ಹಾಗು ಕಥಾಸಂಗಮ ಚಿತ್ರಗಳು ಬಿಡುಗಡೆಯ ಹಂತದಲ್ಲಿವೆ. ಇನ್ನು ಕನ್ನಡ ಗೊತ್ತಿಲ್ಲ ಎನ್ನುವ ಚಿತ್ರದಲ್ಲಿ ಹೊಸಬಗೆಯ ಪಾತ್ರದಲ್ಲಿ ಮಿಂಚಿದ್ದಾರೆ. 


ಇನ್ನು ಬಿಚ್ಚುಗತ್ತಿ ಸಿನಿಮಾದಲ್ಲಿ ಹರಿಪ್ರಿಯಾ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದಷ್ಟೇ ಅಲ್ಲ, ಕಥಾಸಂಗಮದಲ್ಲಿಯೂ ಅವರದ್ದು ವಿಭಿನ್ನ ಪಾತ್ರ. ಅದೇನೆ ಇದ್ದರೂ ಹರಿಪ್ರಿಯಾ ಅವರು ಕನ್ನಡದ ಮಟ್ಟಿಗೆ ಫುಲ್ ಬ್ಯುಸಿ ನಟಿಯಂತೂ ಹೌದು. ಹೀಗೆ ಒಂದೊಂದು ಸಿನಿಮಾದಲ್ಲಿಯೂ ಕೂಡ ಹರಿಪ್ರಿಯಾ ಅವರು ವಿಭಿನ್ನವಾಗಿ ತಮ್ಮನ್ನು ತಾವು ಪ್ರಯೋಗಕ್ಕೆ ಒಡ್ಡಿಕೊಂಡಿದ್ದಾರೆ. ಅಲ್ಲದೇ ಅವರು ವಿಶೇಷತೆ ಇರುವ ಕಥೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.  ಆದರೆ ಇದೀಗ ಗುರುನಂದನ್ ಅವರ ಸಿನಿಮಾ ಕೂಡ ಒಂದು.



మరింత సమాచారం తెలుసుకోండి: