ಸಿನಿಮಾ ಅಂದಮೇಲೆ ಬದಲಾವಣೆಗಳು ಸಹಜವಾಗಿಯೇ ಇರುತ್ತವೆ. ಎಷ್ಟೋ ಸಮಯದಲ್ಲಿ ನಾಯಕ ನಟ ಬದಲಾದ ನಿದರ್ಶನ ಇದೆ. ನಾಯಕ ನಟಿ ಬದಕಾದ ನಿದರ್ಶನ ಇದೆ. ವಿಲನ್ ಬದಲಾದ ನಿದರ್ಶನ ಇದೆ. ಆದರೆ ಇಲ್ಲೊಂದು ವಿಶೇಷ ಏನೆಂದರೆ, ಒಂದು ಸಿನಿಮಾದ ನಿರ್ದೇಶಕರು ಬದಲಾದ ನಿದರ್ಶನ ಇಲ್ಲಿದೆ. ಹೌದು ಬುದ್ದಿವಂತ 2 ಸಿನಿಮಾದ ನಿರ್ದೇಶಕರು ಬದಲಾಗಿದ್ದಾರೆ.


ಉಪೇಂದ್ರ ಅವರು ವಿಭಿನ್ನ ಸಿನಿಮಾ ಮಾಡೋದರಲ್ಲಿ ಎತ್ತಿದ ಕೈ. ಈ ಹಿಂದೆ ಸೂಪರ್ ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಕ್ರೇಕ್ ಸೃಷ್ಟಿ ಮಾಡಿದ್ದರು. ಅದಾದ ನಂತರ ಅವರ ಸಾಲು ಸಾಲು ಸಿನಿಮಾಗಳು ಬಂದವು. ಇನ್ನು ಬುದ್ದಿವಂತ ಅನ್ನೋ ಸಿನಿಮಾವಂತೂ ತಕ್ಕಮಟ್ಟಿಗಿನ ಹೆಸರು ಮಾಡಿತ್ತು. ಇದೀಗ ಬುದ್ದಿವಂತ 2 ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. 


ಆದರೆ, ಇದೀಗ ಬುದ್ದಿವಂತ 2 ಚಿತ್ರದ ನಿರ್ದೇಶಕರು ಬದಲಾಗಿದ್ದಾರೆ. ಹೌದು, ಉಪೇಂದ್ರ ಅಭಿನಯಿಸಲಿರುವ ಬುದ್ಧಿವಂತ 2 ಚಿತ್ರವನ್ನು ಡಿ.ಎನ್‌.ಮೌರ್ಯ ನಿರ್ದೇಶಕರು ಎಂಬುದು ಎಲ್ಲರಿಗೂ ಗೊತ್ತಿತ್ತು. ಆದರೆ, ಈಗ ಮೌರ್ಯ ಬುದ್ಧಿವಂತ 2 ಚಿತ್ರದಿಂದ ಹೊರ ಬಂದಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಕೂಡ ನಡೆಯುತ್ತಿದ್ದು, ಆದರೆ ನಿರ್ದೇಶಕ ಮೌರ್ಯ ಅವರು ಯಾಕೆ ಹೊರ ನಡೆದಿದ್ದಾರೆ ಅನ್ನೋದೇ ಕುತೂಹಕ್ಕೆ ಕಾರಣವಾಗಿದೆ.


ಮೌರ್ಯ ಅವರ ಬದಲಾಗಿ ಜಯರಾಂ ಅವರು ಎಂಟ್ರಿಯಾಗಿದ್ದಾರೆ. ಆದರೆ ಈ ಚಿತ್ರದ ಕಥೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬ ಮಾತುಗಳೂ ಕೇಳಿ ಬರುತ್ತಿವೆ. ನಿಮಗೆ ಇನ್ನೊಂದು ವಿಷಯ ಏನು ಗೊತ್ತಾ? ಜಯರಾಂ ಅವರು ಉಪೇಂದ್ರ ಅಭಿನಯದ ಐ ಲವ್‌ ಯು ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು ಅನ್ನೋದೇ ವಿಶೇಷ. ನಂತರ ಅವರಿಗೆ ಬುದ್ಧಿವಂತ 2 ಚಿತ್ರ ನಿರ್ದೇಶನದ ಜವಾಬ್ದಾರಿ ಹೊರಿಸಲಾಗಿದೆ.


ಮೌರ್ಯ ಅವರು ವೈಯಕ್ತಿಕ ಕಾರಣಗಳಿಂದ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿ, ಆ ಜಾಗಕ್ಕೆ ಜಯರಾಂ ಬಂದಿದ್ದಾರೆ. ಆದರೆ ಮತ್ತೊಂದು ಅಂಶ ಏನೆಂದರೆ, ಈಗಾಗಲೇ ಮೌರ್ಯ ಅವರು ಒಂದಷ್ಟು ದಿನಗಳ ಚಿತ್ರೀಕರಣ ಮಾಡಿದ್ದಾರೆ. ಇನ್ನುಳಿದ ಚಿತ್ರೀಕರಣ ಮುಂದುವರೆಯುತ್ತದೆ. ಟೈಟಲ್‌ ಕಾರ್ಡ್‌ನಲ್ಲಿ ಮೌರ್ಯ ಅವರ ಹೆಸರು ಕೂಡಾ ಇರುತ್ತದೆ ಎಂದು ತಿಳಿದು ಬರುತ್ತಿದೆ. 


మరింత సమాచారం తెలుసుకోండి: