ಅಕ್ಷರಾಗೌಡ ಹೆಸರು ಕೇಳಿ ತಕ್ಷಣವೇ ಆಕೆ ಬೋಲ್ಡ್ ಬೆಡಗಿ ಎಂದು ಎಲ್ಲರೂ ಹೇಳುತ್ತಾರೆ. ಯೋಗರಾಜ್ ಭಟ್ ರ ಪಂಚತಂತ್ರ ಸಿನಿಮಾದ ಮೂಲಕ ಅಕ್ಷರಾ ಗೌಡ ಸಿನಿ ಪ್ರಿಯರಿಗೆ ಹತ್ತಿರ ಆದವರು. ಇದೀಗ ಹೊಸ ಚಿತ್ರ ಅಂದರೆ ಮರ್ಡರ್ ಮಿಸ್ಟರಿ ಮೂಲಕ ಅಕ್ಷರಾ ಗೌಡ ಕನ್ನಡ ಪ್ರೇಕ್ಷರ ಮುಂದೆ ಬರುವ ತಯಾರಿಯಲ್ಲಿ ಇದ್ದಾರೆ. ಹೌದು ಹೆಮಂತ್ ಹೆಗ್ಡೆ ನಿರ್ದೇಶನದ ಹೊಸ ಚಿತ್ರಕ್ಕೆ ನಾಯಕಿಯಾಗಿ ಅವರು ಆಯ್ಕೆ ಆಗಿದ್ದಾರೆ. 


ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರದಲ್ಲಿ ನಾಯಕ ನಟ ಗುರುನಂದನ್ ಅವರು. ಹೌದು ಗುರುನಂದನ್ ಅವರಿಗೆ ಜೋಡಿಯಾಗಿ ಅಕ್ಷರಾಗೌಡ ತೆರೆ ಮೇಲೆ ಬರುತ್ತಿದ್ದಾರೆ. ಇನ್ನೂ ಹೆಸರಿಡದ ಈ ಚಿತ್ರಕ್ಕೆ ಈಗಾಗಲೇ ಪ್ರಿಪೊಡಕ್ಷನ್ ಕೆಲಸಗಳು ಭರದಿಂದಲೇ ಸಾಗುತ್ತಿವೆ. ಅಲ್ಲದೇ ಇದೇ ತಿಂಗಳ ಅಂತ್ಯಕ್ಕೆ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ. ಹೌದು ಅಕ್ಟೋಬರ್ 2 ರಿಂದ ಎರಡನೇ ವಾರದ ಚಿತ್ರೀಕರಣವೂ ನಡೆಯಲಿದೆ. 


ಈ ಚಿತ್ರದ ಶೂಟಿಂಗ್ ಸ್ಥಳಗಳು ಅಂದರೆ ಅದು ನಾರ್ವೆ ಮತ್ತು ಬೆಂಗಳೂರು. ಇದೊಂದು ಸಸ್ಪೆನ್ಸ್ ಮರ್ಡರ್ ಮಿಸ್ಟರಿ ಚಿರ್ರ. ಇದರಲ್ಲಿ ಕಾಮಿಡಿ, ಥ್ರಿಲ್ಲರ್, ಹೀಗೆ ಹಲವಾರು ಅಂಶಗಳಿವೆ ಎಂದು ಹೇಳುತ್ತಾರೆ ಚಿತ್ರದ ನಿರ್ದೇಶಕ ಹೇಮಂತ್ ಹೆಗ್ಡೆ. ಇನ್ನೊಂದು ವಿಶೇಷತೆ ಏನಪ್ಪ ಅಂದರೆ, ಇಲ್ಲಿಯವರೆಗೂ ಯಾರೂ ಮುಟ್ಟದ ಎಲಿಮೆಂಟ್ ಒಂದನ್ನು ಇಲ್ಲಿ ಹೇಳಲು ಹೊರಟಿದ್ದೇವೆ ಎಂದು ಚಿತ್ರ ತಂಡ ಹೇಳಿಕೊಳ್ಳುತ್ತದೆ.


ಪದ್ಮಲತಾ ಪ್ರೊಡಕ್ಷನ್ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ. ಸದ್ಯಕ್ಕೆ ಚಿತ್ರ ಕಲಾವಿದರ ಹಾಗೂ ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಇನ್ನು ಕನ್ನಡದಲ್ಲಿ ಇತ್ತೀಚೆಗೆ ಹೊಸತರದ ಚಿತ್ರಗಳು ಮತ್ತು ಪಾತ್ರಗಳು ತಮ್ಮನ್ನು ಹುಡುಕಿಕೊಂಡು ಬರುತ್ತಿರುವುದರ ಬಗ್ಗೆ ನಟಿ ಅಕ್ಷರಾ ಗೌಡ ಕೂಡ ನಿಜಕ್ಕೂ ಖುಷಿಯಾಗಿದ್ದಾರೆ. ಅಲ್ಲದೇ ಸದ್ಯ ಕನ್ನಡದಲ್ಲಿ ಹೊಸ ಸಬ್ಜೆಕ್ಟ್ ಚಿತ್ರಗಳಿಗೆ ಒಳ್ಳೆಯ ಆಫ‌ರ್ ಬರುತ್ತಿವೆ ಇದರಿಂದ ನನಗೆ ಖುಷಿ ಆಗುತ್ತಿದೆ ಎಂದು ಅವರು ಹೇಳಿದ್ದಾರೆ.  ಅಲ್ಲದೇ ಹೇಮಂತ್ ಹೆಗ್ಡೆ ಅವರೊಂದಿಗೆ ಈ ಚಿತ್ರದಲ್ಲಿ ಕೆಲಸ ಮಾಡುತ್ತಿರುವುದು ನನಗೆ ನಿಜಕ್ಕೂ ಖುಷಿ ತಂದಿದೆ ಎಂದು ಅವರು ಹೇಳಿದ್ದಾರೆ.


మరింత సమాచారం తెలుసుకోండి: