ದುನಿಯಾ ವಿಜಯ್ ಅವರು ಗೊತ್ತಲ್ವ? ಇವರು ದುನಿಯಾ ಚಿತ್ರದ ಮೂಲಕವೇ ನಾಯಕನಟನಾಗಿ ಬೆಳ್ಳಿ ತೆರೆ ಪ್ರವೇಶಿಸಿದವರು. ಹೌದು ದುನಿಯಾ ವಿಜಯ್ ಅವರು ಈ ಮೊದಲು ಚಿಕ್ಕಪುಟ್ಟ ಪಾತ್ರಗಳಿಗೆ ಬಣ್ಣ ಹಚ್ಚುತ್ತಿದ್ದರು. ನಂತರ ದುನಿಯಾ ಹಿಟ್ ಆದ ಮೇಲೆ ವಿಜಯ್ ಅವರಿಗೆ ಅದೃಷ್ಟ ಮನೆ ಬಾಗಿಕ ಬಳಿಯೇ ಬಂದಿತು. ಒಂದರ ನಂತರ ಒಂದು ಸಿನಿಮಾಗಳಿಗೆ ಅವಕಾಶಗಳು ತೆರೆದುಕೊಂಡವು. 


ಇನ್ನು ನಿರ್ದೇಶಕ ಸೂರಿ ಅವರು ಸೃಷ್ಟಿಸಿದ್ದ ಶಿವಲಿಂಗು ಚಿತ್ರದಲ್ಲಿ ನಟಿಸಿದ್ದ ಪಾತ್ರ ದಿನ ಬೆಳಗಾವುದರ ಒಳಗೆ ಅವರಿಗೆ ನಾಯಕನ ಪಟ್ಟ ತಂದುಕೊಟ್ಟಿತು. ಈ ಚಿತ್ರ ಇಬ್ಬರಿಗೂ ಕನ್ನಡದ ಚಿತ್ರರಂಗದಲ್ಲಿ ನೆಲೆ ಒದಗಿಸಿ ಕೊಟ್ಟಿತು. ಹೀಗಾಗಿ ದುನಿಯಾ ವಿಜಯ್ ಅವರು ಕನ್ನಡದ ಮತ್ತೊಬ್ಬ ನಾಯಕ ನಟನಾಗಿ ಬೆಳೆದರು. 


ದುನಿಯಾ ಚಿತ್ರದ ಬಳಿಕ ವಿಜಯ್‌ ಅವರ ಅದೃಷ್ಟವೂ ಬದಲಾಯಿತು. ಅವರ ಹೆಸರು ಹೆಸರಿನ ಮುಂದೆಯೇ ದುನಿಯಾ ಎನ್ನುವುದೂ ಸಹ ಸೇರ್ಪಡೆ ಆಯಿತು. ಅದಾದ ನಂತರದಲ್ಲಿ ಸಾಲು ಸಾಲು ಚಿತ್ರಗಳಲ್ಲಿ ನಟಿಸಿದರು. ದುನಿಯಾ ವಿಜಯ್ ಅವರಿಗೆ ಕೇವಲ ಗೆಲುವಷ್ಟೇ ಅಲ್ಲ, ಸೋಲುಗಳನ್ನೂ ಕಂಡರು. ಇನ್ನು ದುನಿಯಾ ವಿಜಯ್ ಅವರು ಕೂಡ ಕಳೆದ ವರ್ಷ ಕನ ಹಾಗೂ ಜಾನಿ ಜಾನಿ ಯಸ್ ಪಪ್ಪಾ ಎನ್ನುವ ಚಿತ್ರಗಳನ್ನು ಮಾಡಿದ್ದರು. ಗಲ್ಲಾ ಪೆಟ್ಟಿಗೆಯಲ್ಲಿ ಬಂಪರ್ ಬೆಳೆ ತೆಗೆಯಲಿಲ್ಲ.


ಹೀಗಾಗಿ ಕೊನಗೆ ದುನಿಯಾ ವಿಜಯ್ ಅವರು ನಿರ್ದೇಶಕನಿಗೆ ಕ್ಯಾಪ್ ತೊಡಿಸೋಕೆ ಮುಂದಾಗಿದ್ದಾರೆ. ಹೌದು ಸಲಗ ಚಿತ್ರದ ಮೂಲಕ ದುನಿಯಾ ವಿಜಯ್ ಅವರು ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಇದರ ಜೊತೆಗೆ ನಟನೆಯನ್ನೂ ಮಾಡುತ್ತಿದ್ದಾರೆ. ಸಂಜನಾ ಆನಂದ್ ಅವರು ಈ ಚಿತ್ರದ ನಾಯಕಿ ಆಗಿದ್ದಾರೆ. ಇನ್ನು ಡಾಲಿ ಖ್ಯಾತಿಯ ಧನಂಜಯ್ ಅವರು ಎಸಿಪಿಯ ಪಾತ್ರ ವಹಿಸಿದ್ದಾರೆ.


ಇನ್ನು ಟಗರು ಚಿತ್ರದಲ್ಲಿ ಕೆಲಸ ಮಾಡಿದ್ದ ತಂತ್ರಜ್ಞರ ತಂಡವೇ ಇದರಲ್ಲಿಯೂ ಕೆಲಸ ಮಾಡುತ್ತಿದೆ. ಇನ್ನು ಭೂಗತ ಲೋಕದ ಸುತ್ತಲೂ ಈ ಕಥೆಯನ್ನು ಹೆಣೆಯಲಾಗಿದೆ. ಮೇಕಿಂಗ್ ನಲ್ಲಿ ಈ ಚಿತ್ರ ಸಾಕಷ್ಟು ಸದ್ದು ಮಾಡುತ್ತಿದೆ. ಇನ್ನೇನು ಈಗಾಗಲೇ ಮುಕ್ಕಾಲು ಭಾಗದಷ್ಟು ಶೂಟಿಂಗ್ ಕೂಡ ಪೂರ್ಣವಾಗಿದೆ.


మరింత సమాచారం తెలుసుకోండి: