ಸುದೀಪ್ ಮತ್ತು ದರ್ಶನ್ ಮಧ್ಯೆ ಸ್ಟಾರ್ ವಾರ್ ಶುರುವಾಗಿದೆ. ಇದೇ ರೀತಿಯಲ್ಲಿ ಇವರಿಬ್ಬರು ಫ್ಯಾನ್ಸ್ ವಾರ್ ಕೂಡ ಶುರುವಾಗಿದೆ. ಹೀಗಾಗಿ ಇಬ್ಬರೂ ಫ್ಯಾನ್ಸ್‌ಗಳು ಸಹ ಪರಸ್ಪರ ಕಾಲೆಳೆಯುತ್ತಿದ್ದಾರೆ. ಹೌದು ಇದೀಗ ಸ್ಯಾಂಡಲ್ ವುಡ್ ಇಂಡಸ್ಟ್ರಿ ಸುಡುತ್ತಿದೆ. ಫ್ಯಾನ್ಸ್ ವಾರ್ ಅನ್ನೋ ಬೆಂಕಿ ಸ್ಯಾಂಡಲ್‌ವುಡ್​​ನ್ನು ಸುಡುತ್ತಿದೆ. ಇದಕ್ಕೆ ಕಾರಣ ಏನು ಅನ್ನೋದು ಇಲ್ಲಿದೆ ನೋಡಿ.


ಸೋಷಿಯಲ್ ಮೀಡಿಯಾದಲ್ಲಿ ದರ್ಶನ್ ಫ್ಯಾನ್‌ಗಳು ದೊಡ್ಡ ತಂಡವನ್ನೇ ಕಟ್ಟಿಕೊಂಡಿದ್ದಾರೆ. ಯಾರಾದರೂ ದರ್ಶನ್ ಅವರಿಗೆ ಏನಾದರೂ ಬರೆದರೆ ಕಮೆಂಟ್ ಮಾಡಿದರೆ ಅವರನ್ನು ಹಿಗ್ಗಾ ಮುಗ್ಗಾ ಬೈಯುತ್ತಾರೆ ಈ ಟೀಂ. ಹೀಗೆ ಅದ್ಬೂತವಾಗಿ ತಮ್ಮ ಪಾರುಪತ್ಯವನ್ನು ಈ ಟೀಂ ಪ್ರದರ್ಶನ ಮಾಡುತ್ತಿದೆ. ಇದೀಗ ದಾಸ ಅವರ ಅಭಿಮಾನಿಗಳು ಒಂದು ಬಹಿರಂಗ ಪತ್ರವನ್ನು ಬರೆದು ಪ್ರಕಟಣೆ ಮಾಡಿದ್ದಾರೆ. 


ಹಾಗಾದರೆ ಆ ಪತ್ರದಲ್ಲೇನು ಇದೆ ಗೊತ್ತಾ? ಕೆಲವು ದಿನಗಳ ಹಿಂದೆ ದರ್ಶನ್ ಅಭಿಮಾನಿಗಳುಯ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರವನ್ನು ಪೈರಸಿ ಮಾಡಿದ್ದಾರೆ ಎನ್ನುವ ವದಂತಿ ಹಾಗೂ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯೆ ರೀತಿಯಲ್ಲಿ ದರ್ಶನ್ ಅವರ ಅಭಿಮಾನಿಗಳು ಇದೀಗ ಪತ್ರವೊಂದನ್ನು ಹಾಕಿದ್ದಾರೆ. 


ಪೈಲ್ವಾನ್ ಚಿತ್ರ ಪೈರಸಿ ಆಗೋದಕ್ಕೆ ನಾವು ಕಾರಣ ಅಲ್ಲ,. ನಮ್ಮ ನಟನ ಹೆಸರನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೇ ದರ್ಶನ್ ಅವರ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇದು ಸರಿಯಲ್ಲ ಎಂದು ದರ್ಶನ್ ವಿರೋಧಿಗಳಿಗೆ ಡಿ ಬಾಸ್ ಫ್ಯಾನ್ಸ್ ಬಹಿರಂಗ ಪತ್ರ ಬರೆದಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಹೀಗಾಗಿ ಕಿಚ್ಚ ಮತ್ತು ದರ್ಶನ್ ಫ್ಯಾನ್ಸ್ ಮದ್ಯೆ ವಾರ್ ಶುರುವಾಗಿದೆ.


ಇನ್ನೊಂದೆಡೆ ಪೈಲ್ವಾನ್‌ ಚಿತ್ರದ ನಿರ್ಮಾಪಕಿ, ಸ್ವಪ್ನ ಕೃಷ್ಣ ಅವರು ಸೈಬರ್‌ ಕ್ರೈಂಗೆ ಪೈರಸಿ ವಿರುದ್ಧ ದೂರು ನೀಡಿದ್ದಾರೆ. ಅಲ್ಲದೇ ಇಲ್ಲಿಂದಲೇ ಒಂದು ಸ್ಪಷ್ಟನೆಯನ್ನೂ ನೀಡಿದ್ದಾರೆ. ಪೈಲ್ವಾನ್ ಚಿತ್ರ ಪೈರಸಿಯಾಗಿರುವುದಕ್ಕೆ ದರ್ಶನ್‌ ಅಭಿಮಾನಿಗಳು ಕಾರಣ ಅಲ್ಲ ಎಂದು ಹೇಳಿದ್ದಾರೆ. ಸ್ಟಾರ್ ವಾರು ಆಗಬಾರದು, ಫ್ಯಾನ್ಸ್ ವಾರು ಕೂಡ ಆಗ ಬಾರದು. ಸ್ಯಾಂಡಲ್ ವುಡ್ ನಟರೆಲ್ಲ ಸ್ನೇಹದಿಂದ ಇರಬೇಕು ಅನ್ನೋದು ಪ್ರಜ್ಞಾವಂತರ ಆಶಯ.



మరింత సమాచారం తెలుసుకోండి: