ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅಭಿನಯದ ಹೊಚ್ಚ ಹೊಸ ಚಿತ್ರ ಆಯುಷ್ಮಾನ್ ಭವ ಸಿನಿಮಾವು ಕನ್ನಡ ರಾಜ್ಯೋತ್ಸವದ ಉಡುಗೊರೆಯಾಗಿ ನವೆಂಬರ್ 1ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. 


ಇತ್ತೀಚೆಗಷ್ಟೇ ಲಂಡನ್ ಇಂದ ವಾಪಾಸ್ ಬಂದು ಈಗ  ಭಜರಂಗಿ -2 , ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಶಿವಣ್ಣನವರು, ಚಿತ್ರದ ಅರ್ಧ ಭಾಗದ ಚಿತ್ರಕರಣ ಆರ್. ಎಸ್ ಗೌಡ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ. ಈ ನಡುವೆಯೇ ಶಿವರಾಜ್ ಕುಮಾರ್ ಸಿನಿಮಾ ಒಂದು ಬಿಡುಗಡೆ ಹಂತಕ್ಕೆ ಬಂದಿದೆ, ಅದು ಆಯುಷ್ಮಾನ್ ಭವ. ಶಿವರಾಜಕುಮಾರ್ ಪಿ.ವಾಸು ಕಾಂಬಿನೇಷನ್ ಬರುತ್ತಿರುವ ಆಯುಷ್ಮನ್ ಭವ ಚಿತ್ರ ನವಂಬರ್ 1ರಂದು ಬಿಡುಗಡೆಯಾಗುತ್ತಿದೆ, ಈ ಮೂಲಕ ರಾಜ್ಯೋತ್ಸವಕ್ಕೆ ಶಿವರಾಜ್ ಕುಮಾರ್ ಅವರ ಸಿನಿಮಾ ಬಿಡುಗಡೆಯಾದಂತಾಗುತ್ತದೆ.

ಶಿವಣ್ಣ ಕೂಡ ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟಿದ್ದಾರೆ, ಅದಕ್ಕೆ ಮುಖ್ಯವಾಗಿ ಎರಡು ಕಾರಣ ಒಂದು ಫ್ಯಾಮಿಲಿ ಎಂಟರ್ಟೈನರ್ ಮತ್ತೊಂದು ಮ್ಯೂಸಿಕಲ್ ಸಿನಿಮಾ.  ಆಯುಷ್ಮನ್ ಭವ ಚಿತ್ರದಲ್ಲಿ ಸಂಗೀತ ಹೆಚ್ಚು ಕೊಡಲಾಗಿದ್ದು ಚಿತ್ರದ ಹಾಡುಗಳು ಹಿಟ್ ಆದೇ ಆಗುತ್ತವೆಂಬ ವಿಶ್ವಾಸ ಶಿವರಾಜ್ ಕುಮಾರ್ ಅವರಿಗಿದೆಯಂತೆ. ಜೊತೆಗೆ ಫ್ಯಾಮಿಲಿ ಎಂಟರ್ಟೈನರ್ ಚಿತ್ರವಾಗಿ ಪ್ರೇಕ್ಷಕರಿಗೆ ಇಷ್ಟವಾಗುವ ವಿಶ್ವಾಸಇದೆ, ಆಯುಷ್ಮನ್ ಭವ ಚಿತ್ರದ ಕಥೆ ತುಂಬಾ ಚನ್ನಾಗಿದೆ,  ವಾಸು ಅವರ ಸ್ಟೈಲ್ ಸಿನಿಮಾ, ಇತ್ತೀಚಿಗೆ ಸಿನಿಮಾಗಳೆಲ್ಲವೂ ಆಕ್ಷನ್ ಇಂದ ಕೂಡಿತ್ತು.

ನನ್ನ ಮೇಲೆನಂತರ ಬರೆದಿರುವ ನನ್ನ ಫ್ಯಾಮಿಲಿ ಎಂಟರ್ಟೈನರ್ ಸಿನಿಮಾ, ಜೊತೆಗೆ ಚಿತ್ರದಲ್ಲಿ ಸಂಗೀತಕ್ಕೂ ಹೆಚ್ಚು ಒತ್ತು ಕೊಡಲಾಗಿದೆ, ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಶಿವಣ್ಣ. ಚಿತ್ರದಲ್ಲಿ ಹೊಸದಾದ ಅಂಡರ್ ವಾಟರ್ ಫೈಟ್ ಕೂಡ ಇದ್ದು, ಇದು ಕೂಡ ಸಿನಿಮಾ ಹೈಲೈಟ್ಸ್ ಆಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಮೊದಲು ದ್ರೋಣ ಚಿತ್ರ ತೆರೆ ಕಾಣಬೇಕಿತ್ತು, ತಾಂತ್ರಿಕ ಸಮಸ್ಯೆಯಿಂದ ದ್ರೋಣ ಸಿನಿಮಾ ಮುಂದಕ್ಕೆ ಹೋಗಿದೆ,

ಈಗ ಆಯುಷ್ಮನ್ ಭವ ಬರುತ್ತಿದ್ದು,  ಹ್ಯಾಟ್ರಿಕ್ ಹೀರೋ ಶಿವಣ್ಣನವರ  ಈ  ಸಿನಿಮಾವು ಹಿಟ್ ಆಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. 


మరింత సమాచారం తెలుసుకోండి: