ಕೊಡಗಿನ ಬೆಡಗಿ ಸ್ಯಾಂಡಲ್ ವುಡ್, ಟಾಲಿವುಡ್ ನಲ್ಲಿ ಭಾರೀ ಸದ್ದು  ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಹಿಂದೊಮ್ಮೆ ಕೊಡಗಿನಲ್ಲಿ ಸುಸಜ್ಜಿತ ಆಸ್ಪತ್ರೆಯೊಂದರ ಅಗತ್ಯದ ಕುರಿತು ಟ್ವೀಟ್ ಮಾಡಿರುವುದು ನೆನಪಿದೆಯಷ್ಟೆ. ಇದಕ್ಕೆ ಸಂಸದ ಪ್ರತಾಪ್ ಸಿಂಹ ಸಹ ಪ್ರತಿಕ್ರಯಿಸಿದ್ದರು. ಆದರೆ ನಂತರ ನಡೆದ ಬೆಳವಣಿಗೆ ಏನು ಅನ್ನೋದು ಇಲ್ಲಿದೆ ನೋಡಿ.


ಇದೀಗ ರಶ್ಮಿಕಾ ಮತ್ತೆ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ. ಅದೇನೆಂದರೆ ಈ ಬಾರಿ ನಟಿ ತಾವು ಈ ಹಿಂದೆ ಕೇಳಿದ್ದ ಕೊಡಗಿನ ಆಸ್ಪತ್ರೆ ಕುರಿತ ವಿಷಯದ ಬಗೆಗೆ ಅಪ್‌ಡೇಟ್ಸ್ ಏನಾದರೂ ಇದೆಯೆ ಎಂದು ಸಂಸದ ಪ್ರತಾಪ್ ಸಿಂಹ ಅವರನ್ನು ಪ್ರಶ್ನಿಸಿದ್ದಾರೆ. "ಸಂಸದ ಪ್ರತಾಪ್ ಸಿಂಹ ಅವರೇ, ನಾನು ಈ ಟ್ವೀಟ್ ಮಾಡುತ್ತಿರುವುದು ಕೊಡಗಿಗೆ ಸುಸಜ್ಜಿತ ಆಸ್ಪತ್ರೆಯ ವಿಚಾರವಾಗಿ. ಈ ಬಗ್ಗೆ ಏನಾದರೂ ಅಪ್‌ಡೇಟ್ಸ್ ಸಿಗುತ್ತದೆಯೆ? ಈ ಕುರಿತ ಬೆಳವಣಿಗೆಗಳ ಸಂಬಂಧ ಏನಾದರೂ ಮಾಹಿತಿ ಲಭಿಸಿದರೆ ಸಂತೋಷವಾಗುತ್ತದೆ" ಎಂದು ರಶ್ಮಿಕಾ ತಮ್ಮ ಟ್ವೀಟ್ ಮಾಡಿದ್ದಾರೆ.


 ಅಲ್ಲದೆ ಅದನ್ನು ಸಂಸದ ಪ್ರತಾಪ್ ಸಿಂಹ ಅವರಿಗೆ ರಶ್ಮಿಕಾ ಮಂದಣ್ಣ ಟ್ಯಾಗ್ ಸಹ ಮಾಡಿದ್ದಾರೆ. ರಶ್ಮಿಕಾ ಅವರ ಈ ಟ್ವೀಟ್ ಬಗೆಗೆ ಕನ್ನಡ ಪ್ರೇಮಿಗಳು ಮಾತ್ರ ಮುನಿಸಿಕೊಂಡಿದ್ದಾರೆ. "ರಶ್ಮಿಕಾ ಅವರೇ ನಿಮಗೆ ಕನ್ನಡದಲ್ಲಿ ಮಾತನಾಡಲು ಕಷ್ಟವಾಗುತ್ತದೆ, ಆದರೆ ಕನ್ನಡದಲ್ಲಿ ಟ್ವೀಟ್ ಮಾಡಿರಿ." ಎಂದು ಕಾಲೆಳೆದಿದ್ದಾರೆ. ಇನ್ನೂ ಕೆಲವರು ನಟಿಯ ಸಾಮಾಜಿಕ ಕಳಕಳಿಯನ್ನು ಮೆಚ್ಚಿಕೊಂಡಿದ್ದು ಕೊಡಗಿನ ಆಸ್ಪತ್ರೆ ಕುರಿತ ಆವರ ವಿಶೇಷ ಕಾಳಜಿ ಒಳ್ಳೆಯದೆಂದು ಹೇಳಿದ್ದಾರೆ.


ರಶ್ಮಿಕಾ ಮಂದಣ್ಣ ಅವರು ಕನ್ನಡದ ಕಿರಿಕ್ ಪಾರ್ಟಿ, ತೆಲುಗಿನಲ್ಲಿ ತೆರೆಕಂಡ ಗೀತ ಗೋವಿಂದಂ ಚಿತ್ರ ತೆರೆಕಂಡ ಮೇಲೆ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನಲ್ಲಿ ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳಾದ ನಂತರ ವಿಜಯ ದೇವರಕೊಂಡ ಅವರ ಜೊತೆಗಿನ ಇತ್ತೀಚಿನ ಡಿಯರ್ ಕಾಮ್ರೆಡ್ ಚಿತ್ರವೂ ಡಿಯರ್ ಆಗುವಲ್ಲಿ  ಅಲ್ಪ ಸ್ವಲ್ಪ ಬೇಸರ ಮೂಡಿಸಿದರು ಸಹ ರಶ್ಮಿಕಾ ಮಂದಣ್ಣ ನಟನೆ ಮಾತ್ರ ಅದ್ಭುತ ವಾಗಿತ್ತು. 


మరింత సమాచారం తెలుసుకోండి: