ಸೌತ್ ಇಂಡಿಯಾದ ರೌಡಿ ನಟ ಎಂದೇ ಕರೆಯಿಸಿಕೊಳ್ಳುವ ವಿಜಯ್ ದೇವರಕೊಂಡ ಪ್ರಸ್ತುತ ಪೂರಿ ಜಗನ್ನಾಥ್ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಭರ್ಜರಿಯಾಗಿ ಪ್ರಚಾರವಾಗುತ್ತಿದೆ. ವಿಶೇಷತೆಯೆಂದರೆ ಪೂರಿ ನಿರ್ಮಿಸುತ್ತಿರುವ 'ಜನಗಣಮನ' ಚಿತ್ರದಲ್ಲಿ ದೇವರಕೊಂಡ ಹೀರೊನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ದೇವರಕೊಂಡ ಅವರಿಗೆ ಯಾರು ನಾಯಕಿಯಾಗಿ ಬರಬಹುದು ಎಂಬ ಕುತೂಹಲ ಗರಿಗೆದರಿದೆ.


'ರಾಕಿಂಗ್ ಸ್ಟಾರ್'ಗೆ ಸಿದ್ಧವಾಗಿದ್ದ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ.!


ಆದ್ರೆ, ಅಭಿಮಾನಿಗಳ ಲೆಕ್ಕಾಚಾರವನ್ನೇ ಉಲ್ಟಾ ಮಾಡಿರುವ ಪೂರಿ ಜಗನ್ನಾಥ್ ಮತ್ತು ಚಾರ್ಮಿ, ದೇವರಕೊಂಡಗಾಗಿ ಚೆಂದದ ಗೊಂಬೆಯನ್ನ ಕರೆತರಲು ಸಜ್ಜಾಗಿದ್ದಾರೆ. ಯಾರದು? ಮುಂದೆ ಓದಿ. ವಿಜಯ್ ದೇವರಕೊಂಡ ಜೊತೆ ಮುಂದಿನ ಸಿನಿಮಾದಲ್ಲಿ ಸಾಯಿ ಪಲ್ಲವಿ, ರಶ್ಮಿಕಾ ಮಂದಣ್ಣ, ಕೀರ್ತಿ ಹೀಗೆ ಸೌತ್ ಇಂಡಸ್ಟ್ರಿಯವರು ಯಾರೋ ಒಬ್ಬರು ನಾಯಕಿಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, ಯಾರ ನಿರೀಕ್ಷೆಗೆ ನಿಲುಕದ ಹೆಸರುಕೇಳಿ ಬಂದಿದೆ.


ದೇವರಕೊಂಡ ಜೊತೆ ಶ್ರೀದೇವಿ ಮಗಳು: 


ಪೂರಿ ಮತ್ತು ವಿಜಯ್ ದೇವರಕೊಂಡ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ 'ಜನಗಣಮನ' ಚಿತ್ರಕ್ಕೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಅವರನ್ನ ಕರೆತರುವ ಚಿಂತನೆ ಮಾಡಿದ್ದಾರೆ. ಜಾಹ್ನವಿ ದೇವರಕೊಂಡಗೆ ಅಭಿಮಾನಿಯೂ ಹೌದು. ಶ್ರೀದೇವಿ ಮಗಳು ಜಾಹ್ನವಿ ಕಪೂರ್ 'ದಢಕ್' ಎಂಬ ಸಿನಿಮಾ ಮಾಡಿದ್ದರು. ಈ ಮುಂಚೆ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ, ''ನಾನು ವಿಜಯ್ ದೇವರಕೊಂಡಗೆ ದೊಡ್ಡ ಅಭಿಮಾನಿ'' ಎಂದು ಜಾಹ್ನವಿ ಹೇಳಿಕೊಂಡಿದ್ದರು. ಇದೀಗ, ತಮ್ಮ ನೆಚ್ಚಿನ ನಟನ ಜೊತೆ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. 


ಪೂರಿ ಜಗನ್ನಾಥ್ ಈ ಮುಂಚೆಯೇ ವಿಜಯ್ ದೇವರಕೊಂಡ ಜೊತೆ ಸಿನಿಮಾ ಮಾಡಬೇಕಿತ್ತಂತೆ. ಪೂರಿ ನಿರ್ದೇಶನದ 'ಇಸ್ಮಾರ್ಟ್ ಶಂಕರ್' ಸಿನಿಮಾದಲ್ಲಿ ವಿಜಯ್ ನಾಯಕನಾಗಬೇಕಿತ್ತಂತೆ. ಡೇಟ್ ಸಿಗದ ಕಾರಣ ಆ ಜಾಗಕ್ಕೆ ರಾಮ್ ಬಂದರಂತೆ. ಈಗ ಅದಕ್ಕಿಂತೆ ಹೆಚ್ಚು ಮಾಸ್ ಆಗಿರುವ ಇನ್ನೊಂದು ಸ್ಕ್ರಿಪ್ಟ್ ನಲ್ಲಿ ಇಬ್ಬರು ಒಟ್ಟಾಗಿದ್ದಾರೆ. ಬಹುಶಃ ಇದು 'ಇಸ್ಮಾರ್ಟ್ ಶಂಕರ್' ಚಿತ್ರಕ್ಕಿಂತ ಹೆಚ್ಚು ಮಾಸ್ ಆಗಿರುತ್ತೆ ಎನ್ನಲಾಗುತ್ತಿದೆ.


మరింత సమాచారం తెలుసుకోండి: