ಕನ್ನಡದ ಮುತ್ತು, ಆಟೋ ಚಾಲಕರ ರಿಯಲ್ ಹೀರೊ ಅಭಿಮಾನಿಗಳಿಗೆ ದೇವರೆಂದೇ ಖ್ಯಾತಿ ಪಡೆದ ಶಂಕರ್ ನಾಗ್ ಅವರ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿದ್ದಾರೆ. ಅದೇಕೆ ಗೊತ್ತಾ! ಇಲ್ಲೀಗ ಹೇಳಹೊರಟಿರುವ ವಿಷಯ ಗೀತ ಚಿತ್ರದ್ದು ಗೀತಾ ಎಂದಾಕ್ಷಣ ನೆನಪಾಗುವುದು ಶಂಕರ್ ನಾಗ್ .


ಹಾಗಂತ ಈ ಚಿತ್ರಕ್ಕೂ ಆ ಚಿತ್ರಕ್ಕೂ ಸಂಬಂಧವಿಲ್ಲ ಆದರೆ ಗಣೇಶ್ ಅಭಿನಯದ ಚಿತ್ರಕ್ಕೆ ಗೀತಾ ಅನ್ನೋ ಹೆಸರು ಇಟ್ಟಿರುವ ವಿಷಯ ಕೇಳಿದ ಶಂಕರ್ ನಾಗ್ ಅಭಿಮಾನಿಗಳು ಸಹ ಚಿತ್ರವನ್ನು ನೋಡುವ ಆತುರದಲ್ಲಿದ್ದಾರೆ. ಅಭಿಮಾನಿಗಳಲ್ಲಿ ಕುತೂಹಲ ಗರಿಗೆದರಿದೆ.  ಗೀತಾ ಚಿತ್ರದ ಗಣೇಶ್ ಅವರ ಭಾವಚಿತ್ರವನ್ನು ತಮ್ಮ ಆಟೋಗೆ ಅಂಟಿಸಿಕೊಂಡು ಕನ್ನಡ ಬಾವುಟ ಕಟ್ಟಿಕೊಂಡು ಮೆರವಣಿಗೆ ಮಾಡುವ ಮೂಲಕ ಗೀತಾ ಚಿತ್ರದ ಪ್ರಚಾರ ಶುರು ಮಾಡಿದ್ದಾರೆ ಆಟೋಚಾಲಕ ಅಭಿಮಾನಿಗಳು. ಹೇಳಿ ಕೇಳಿ ಶಂಕರ್ ನಾಗ್ ಅವರು ಆಟೋ ಚಾಲಕರ ಹಾಟ್ ಫೇವರಿಟ್. ಶಂಕರ್ನಾಗ್ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಚಿತ್ರಕ್ಕೆ ಶುಭಕೋರಿದ್ದಾರೆ. 


ಅತ್ತ ಆಟೋಚಾಲಕರ ಗಣೇಶ್ ಅಭಿಮಾನಿಗಳು ಸಂಘದ ಕಾರ್ಯಕರ್ತರು ಗಣೇಶ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು. ಕಿಲೋಮೀಟರ್ ಗಟ್ಟಲೆ ಆಟೋ ಚಲಾಯಿಸುವ ಮೂಲಕ ಮೆರವಣಿಗೆ ನಡೆಸಿದ್ದಾರೆ. 
ಈಗಾಗಲೇ ಗೀತ ಚಿತ್ರಕ್ಕೆ ಪುನೀತ್ ರಾಜಕುಮಾರ್ ಅವರ ಹಾಡು ಆಡಿನ ಬಳಿಕ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದ್ದು,  ಆ ಟ್ರೇಲರ್ ಕೂಡಾ ಸಖತ್ ಸದ್ದು ಮಾಡುತ್ತಿದೆ. ಟ್ರೇಲರ್ ನೋಡಿದರೆ ಮಾಸ್ ಮತ್ತು ಕ್ಲಾಸ್ ಎರಡು ಅಂಶಗಳು ಜೊತೆಗೆ ಮುದ್ದಾದ ಲವ್ ಸ್ಟೋರಿ ಹೊಂದಿರುವ ಚಿತ್ರ ಎಂಬುದನ್ನು ಸಾರುತ್ತದೆ ಎಂಬುದು ತಿಳಿದು ಬಂದಿದೆ. 


ಅದರಲ್ಲೂ ಇಲ್ಲಿ ಗಣೇಶ್ ಅವರು ಅಪ್ಪಟ ಕನ್ನಡ ಹೋರಾಟಗಾರರಾಗಿ ಯೂ ಕಾಣಿಸಿಕೊಂಡಿದ್ದಾರೆ. ಅದೇ ಚಿತ್ರದ ಹೈಲೈಟ್ಸ್ ಗಳಲ್ಲೊಂದು ಚಿತ್ರಕ್ಕೆ ಅನೂಪ್ ರುಬೆಂಸ್ ಸಂಗೀತವಿದೆ ಶ್ರೀಶ ಛಾಯಾಗ್ರಹಣವಿದೆ ಚಿತ್ರವನ್ನು ಸೈಯದ್ ಸಲಂ ಹಾಗೂ ಶಿಲ್ಪ ಗಣೇಶ್ ನಿರ್ಮಿಸುತ್ತಿದ್ದಾರೆ ವಿಜಯ್ ನಾಗೇಂದ್ರ ನಿರ್ದೇಶನವಿದೆ. ಪ್ರಸ್ತುತ ಚಿತ್ರಕ್ಕಾಗಿ ಅಭಿಮಾನಿಗಳು ಸಾವಿರ ಕಣ್ಣುಗಳಿಂದ ಎದುರು ನೋಡುತ್ತಿದ್ದಾರೆ. 


మరింత సమాచారం తెలుసుకోండి: