ನಾ ಭೂತೋ  ನಾ ಭವಿಷ್ಯತ್ ಎನ್ನುವಂತೆ ಇಡೀ ಪ್ರಪಂಚದಾದ್ಯಂತ ಹವಾ ಎಬ್ಬಿಸಿ, ಸಾವಿರಾರು ಕೋಟಿ ರೂಪಾಯಿಗಳನ್ನು ಬಾಚಿಕೊಂಡಿತ್ತು ಆ ಸಿನಿಮಾ. ಆ ಒಂದೇ ಒಂದು ಸಿನಿಮಾದಿಂದ ಪ್ರಪಂಚದಾದ್ಯಂತ ಸದ್ದು ಮಾಡಿದ್ದರು ನಿರ್ದೇಶಕರು. ಆ ನಿರ್ದೇಶಕ ಬೇರಾರು ಅಲ್ಲ, ಕನ್ನಡಿಗ. ನಮ್ಮ ಕರುನಾಡಿನ ಹೆಮ್ಮೆಯ ಕನ್ನಡಿಗ. ಆ ನಿರ್ದೇಶಕನ ಹೆಸರು ರಾಜಮೌಳಿ. 


 ಬಾಹುಬಲಿ ನಂತರ ಯಾವುದೇ ಸಿನಿಮಾ ಮಾಡದೆ ಮತ್ತೊಂದು ದೊಡ್ಡ ಹಿಟ್​ ಕೊಡುವ ನಿಟ್ಟಿನಲ್ಲಿ ಖ್ಯಾತ ನಿರ್ದೇಶಕ ರಾಜಮೌಳಿ ಆರ್​ ಆರ್ ​ಆರ್​ ಚಿತ್ರ ಮಾಡುತ್ತಿದ್ದಾರೆ. ಹೀಗಿರು ವಾಗಲೇ ಬಹಳ ಸಮಯದ ನಂತರ ಅವರು ಟ್ವಿಟರ್​ ನಲ್ಲಿ ಒಂದು ಟ್ವೀಟ್​ ಮಾಡಿದ್ದಾರೆ. ಅದು ಕೂಡ ಭಾವನಾತ್ಮಕವಾಗಿ. ಏನದು? ಅಂತ ಮುಂದೆ ಓದಿ. 


ಭಾರತ ಚಿತ್ರರಂಗಕ್ಕೆ 'ಬಾಹುಬಲಿ'ಯಂತಹ ಹಿಟ್​ ಸಿನಿಮಾ ಕೊಟ್ಟ ನಿರ್ದೇಶಕ ರಾಜಮೌಳಿ ಅವರು ಆರ್ ಆರ್ ಆರ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಾಮ್​ಚರಣ್​ ಹಾಗೂ ಜೂನಿಯರ್ ಎನ್​ಟಿಆರ್ ಅಭಿನಯದ ಬಹು ತಾರಾಗಣದ ಚಿತ್ರದ ಚಿತ್ರೀಕರಣ ವಿದೇಶಗಳಲ್ಲೂ ಇದೀಗ ನಡೆಯುತ್ತಿದೆ.  ಹೌದು, ಅವರ ಕನಸಿನ ಪ್ರಾಜೆಕ್ಟ್​ 'ಬಾಹುಬಲಿ' ಕುರಿತಾಗಿ ತುಂಬಾ ಭಾವನಾತ್ಮಕವಾಗಿ ಟ್ವೀಟ್​ ಮಾಡಿದ್ದಾರೆ. ಹೌದು, ರಾಜಮೌಳಿ ಅವರ ನಿರ್ದೇಶನದ 'ಬಾಹುಬಲಿ- ದ ಬಿಗಿನಿಂಗ್​' ಸಿನಿಮಾ ಇದೇ 19ರಂದು ಲಂಡನ್​ನ ರಾಯಲ್​ ಆಲ್ಬರ್ಟ್​ ಹಾಲ್​ನಲ್ಲಿ ಪ್ರದರ್ಶನಗೊಳ್ಳಲಿದೆ. 


ಬಾಹುಬಲಿ ಜತೆಗೆ  ಹಾಲಿವುಡ್​ ಸಿನಿಮಾಗಳಾದ 'ಸ್ಕೈ ಫಾಲ್​', 'ಹ್ಯಾರಿ ಪಾಟರ್​' ಸಹ ಇದೇ ವೇಳೆ ಪ್ರದರ್ಶನಗೊಳ್ಳಲಿದೆ. ಈ ಪ್ರದರ್ಶನಕ್ಕೆ ಬಾಹುಬಲಿ ಚಿತ್ರದ ತಂಡದವರೂ ಹಾಜರಿರಲಿದ್ದಾರೆ. ನಟ ಪ್ರಭಾಸ್​, ರಾಣಾ ಹಾಗೂ ಅನುಷ್ಕಾ ಸಹ ಲಂಡನ್​ಗೆ ಹೋಗಲಿದ್ದಾರೆ. 2015 ರಲ್ಲಿ 'ಬಾಹುಬಲಿ- ದ ಬಿಗಿನಿಂಗ್​' ಸಿನಿಮಾ ತೆರೆಕಂಡು ಸಂಚಲನವನ್ನೇ ಸೃಷ್ಟಿಸಿತ್ತು. ಪ್ರಭಾಸ್​ ಬಾಹುಬಲಿಯಾಗಿ, ಅನುಷ್ಕಾ ದೇವಸೇನಾ, ರಾಣಾ ಬಲ್ಲಾಳದೇವನ ಪಾತ್ರದಲ್ಲಿ ನಟಿಸಿದ್ದರು. ಕಟ್ಟಪ್ಪನ ಪಾತ್ರದಲ್ಲಿ ಸತ್ಯ ರಾಜ್ ಅವರು ನಟಿಸಿದ್ದು ಇದೇ ಚಿತ್ರದಲ್ಲಿ ಕನ್ನಡದ ಮತ್ತೊಬ್ಬ ಖ್ಯಾತ ನಟ ಸುದೀಪ್ ಅವರು ಸಹ ನಟಿಸಿದ್ದರು.


మరింత సమాచారం తెలుసుకోండి: