ಕಳೆದೊಂದು ವಾರದಿಂದ ರಾಷ್ಟ್ರಾದ್ಯಂತ ಭಾರೀ ಸದ್ದು ಮಾಡುತ್ತಿರುವ ಚಿತ್ರ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಸೈ ರಾ ನರಸಿಂಹ ರೆಡ್ಡಿ'.  ಸಿನಿ ಇಂಡಸ್ಟ್ರೀಯಲ್ಲೇ  ಭಾರೀ ಸದ್ದು ಮಾಡುತ್ತಿದ್ದ, ಗಳಿಗೆಯಲ್ಲೂ  ಮುಂದಿದೆ. ಖೈದಿ ನಂಬರ್​ 150 ಮತ್ತು ಸೈ ರಾ ನರಸಿಂಹ ರೆಡ್ಡಿ ಚಿತ್ರದ ಸೂಪರ್​ ಹಿಟ್​ ನಂತರ ಮತ್ತೊಂದು ಚಿತ್ರಕ್ಕೆ ಗ್ರೀನ್​ ಸಿಗ್ನಲ್​ ಕೊಟ್ಟಿದ್ಧಾರೆ. ವಿಜಯದಶಮಿ ಸಂಭ್ರಮದಲ್ಲೇ ಮೆಗಾಸ್ಟಾರ್​ 152 ನೇ ಸಿನಿಮಾ ಲಾಂಚ್​ ಆಗಿದೆ. ರಾಜಕೀಯ ರಂಗ ಪ್ರವೇಶಿಸಿ, ಸೋಲುಂಡ ಚಿರು ಪ್ರೇಕ್ಷಕರನ್ನು ರಂಜಿಸೋದನ್ನೇ ಫುಲ್​ ಟೈಂ ಕಾಯಕ ಮಾಡಿಕೂಂಡಿದ್ದಾರೆ. ಇದ್ದಕ್ಕಿದಂತೆ ಸಿನಿಮಾ ಮಾಡೋ ಸ್ಪೀಡ್​ ಹೆಚ್ಚಿಸಿರೋ ಚಿರಂಜೀವಿ, ಸೈರಾ ಥಿಯೇಟರ್​​ನಲ್ಲಿ ಇರೋವಾಗ್ಲೇ ಹೊಸ ಚಿತ್ರಕ್ಕೆ ಚಾಲನೆ ಕೊಟ್ಟಿದ್ಧಾರೆ.

ಮಿರ್ಚಿ, ಶ್ರೀಮಂತುಡು, ಭರತ್​ ಅನೇ ನೇನು ರೀತಿಯ ಬ್ಲಾಕ್​ ಬಸ್ಟರ್​​ ಹಿಟ್​ ಕೊಟ್ಟ ಕೊರಟಾಲ ಶಿವ, ಚಿರಂಜೀವಿ 152ನೇ ಚಿತ್ರವನ್ನ ಡೈರೆಕ್ಟ್​ ಮಾಡ್ತಿದ್ದಾರೆ. ಒಂದೊಳ್ಳೆ ಮೆಸೇಜ್​​ ಜೊತೆಗೆ ಪಕ್ಕಾ ಮಾಸ್​ ಎಂಟ್ರಟ್ರೈನರ್​ ಸಿನಿಮಾ ಇದು ಅಂತ ಹೇಳಲಾಗ್ತಿದೆ. ಸೈರಾ ಶೂಟಿಂಗ್​ ಸಮಯದಲ್ಲೇ ಚಿರು ಈ ಚಿತ್ರವನ್ನ ಒಪ್ಪಿಕೊಂಡಿದ್ದರೆ. ವಿಜಯದಶಮಿ ಸಂಭ್ರಮದಲ್ಲಿ ಇನ್ನು ಹೆಸರಿಡದ ಈ ಚಿತ್ರಕ್ಕೆ ಪೂಜೆ ನೆರವೇರಿಸಿದ್ದು, ಚಿರಂಜೀವಿ ತಾಯಿ ಅಂಜನಾ ದೇವಿ ಪೂಜೆಯಲ್ಲಿ ಭಾಗಿಯಾಗಿದರು. ಚಿರು ಪತ್ನಿ ಸುರೇಖಾ ಮೊದಲ ದೃಶ್ಯಕ್ಕೆ ಕ್ಲಾಪ್​ ಮಾಡಿ ಶುಭ ಹಾರೈಸಿದರು.

ಮ್ಯಾಟ್ನಿ ಎಂಟ್ರಟ್ರೈನ್​ಮೆಂಟ್ಸ್​​​ ಬ್ಯಾನರ್​​ ಜೊತೆ ಸೇರಿ ಕೋಣಿದೇಲ ಬ್ಯಾನರ್​​​ನಲ್ಲಿ ರಾಮ್​ ಚರಣ್​ ತೇಜಾ ಈ ಚಿತ್ರವನ್ನ ನಿರ್ಮಾಣ ಮಾಡ್ತಿದ್ದಾರೆ. ಕೋಣಿದೇಲ ಸಂಸ್ಥೆಯಲ್ಲಿ ನಿರ್ಮಾಣವಾದ ಖೈದಿ ನಂಬರ್​ 150 ಮತ್ತು ಸೈರಾ ಸಿನಿಮಾಗಳು ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿವೆ. ಇದು ಮೂರನೇ ಸಿನಿಮಾ. 270ಕೋಟಿ ಬಜೆಟ್​​​ನಲ್ಲಿ ಸೈರಾ ಸಿನಿಮಾ ನಿರ್ಮಿಸಿ ಗೆದ್ದಿರೋ ಚೆರ್ರಿ ಈಗ ತಂದೆ ಚಿರಂಜೀವಿ ನಟಿಸ್ತಿರೋ ಮತ್ತೊಂದು ಚಿತ್ರವನ್ನ ನಿರ್ಮಿಸ್ತಿದ್ದಾರೆ.
ಒಟ್ಟಾರೆ ಮೆಗಾಸ್ಟಾರ್​ ಮತ್ತು ಮೆಗಾಪವರ್​ ಸ್ಟಾರ್​ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಮೆಗಾ ಗಿಫ್ಟ್​ ಕೊಡೋಕ್ಕೆ ಬರ್ತಿರೋದು ಸುಳ್ಳಲ್ಲ. ಶೀಘ್ರದಲ್ಲೇ ಶೂಟಿಂಗ್ ಶುರುವಾಗ್ತಿದ್ದು, 2020ರ ಸಮ್ಮರ್​ಗೆ ಚಿತ್ರ ತೆರೆಗಪ್ಪಳಿಸಲಿದೆ. 


మరింత సమాచారం తెలుసుకోండి: