ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಚಿತ್ರ ಪವರ್ ಸ್ಟಾರ್ ಅಭಿನಯದ ಯುವರತ್ನ. ಸದ್ಯಕ್ಕೀಗ ಚಿತ್ರತಂಡ ಹಾಗೂ ಅಭಿಮಾನಿಗಳು ಸಖತ್ ಖುಷಿಯಾಗಿ ಇದ್ದಾರೆ. ಯುವರತ್ನ ಟೀಸರ್ ಅಷ್ಟೇ ಬಿಡುಗಡೆಯಾಗಿದೆ ಆದರೆ ಇಷ್ಟೇಲ್ಲಾ ನಡೆಯಲು ಕಾರಣ ವೇನೆಂದು ನಾವು ಹೇಳ್ತೇವೆ ಕೇಳಿ.  ಕೊಟ್ಟ ಮಾತಿನಂತೆ 'ಯುವರತ್ನ' ಟೀಸರ್​ ಅನ್ನು ಬಿಡುಗಡೆ ಮಾಡಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.

ಇದರಿಂದಾಗಿ ಅಪ್ಪು ಅಭಿಮಾನಿಗಳಲ್ಲಿ ಸದ್ಯ ಈ ಸಿನಿಮಾ ಕುರಿತಾಗಿ ಇದ್ದ ಕುತೂಹಲ ಇನ್ನಷ್ಟು ಹೆಚ್ಚಾಗಿದೆ. ಏಕೆಂದರೆ ಯುವರತ್ನ ಟೀಸರ್ ಅಷ್ಟರ ಮಟ್ಟಿಗೆ ಸದ್ದು ಮಾಡುತ್ತಿದೆ.  'ರಾಜಕುಮಾರ' ಚಿತ್ರದಂತಹ ಹಿಟ್​ ಸಿನಿಮಾ ಕೊಟ್ಟ ಪುನೀತ್ ರಾಜ್‍ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್‍ ರಾಮ್ ಜೋಡಿ ಈಗ ಮತ್ತೆ ಮೋಡಿ ಮಾಡೋಕೆ ಬಂದಿದೆ. ಎರಡನೇ ಬಾರಿಗೆ 'ಯುವರತ್ನ' ಚಿತ್ರಕ್ಕಾಗಿ ಈ ಜೋಡಿ ಒಂದಾಗಿದ್ದು, ಈ ಚಿತ್ರದ ಬಗ್ಗೆ ಪ್ರೇಕ್ಷಕರಿಗೆ ಅಭಿಮಾನಿಗಳಿಗೆ  ನಿರೀಕ್ಷೆ ಹೆಚ್ಚಾಗಿದೆ.

ಕಳೆದೆರಡು ದಿನಗಳ ಹಿಂದೆಯಸ್ಟೇ 'ಯುವರತ್ನ' ಚಿತ್ರದ ಟೀಸರ್​ ಬಿಡುಗಡೆಯಾಗಿದ್ದು,  2 ದಿನ ಕಳೆಯುವಷ್ಟರಲ್ಲೇ 12ಲಕ್ಷಕ್ಕೂ ಹೆಚ್ಚು ವೀಕ್ಷಣೆ ಸಿಕ್ಕಿದೆ. ಜೊತೆಗೆ ಸುಮಾರು 95 ಸಾವಿರ ಲೈಕ್ಸ್​ ಹಾಗೂ 40 ಸಾವಿರಕ್ಕೂ ಹೆಚ್ಚು ಕಮೆಂಟ್​ಗಳು ಬಂದಿವೆ. ಜೊತೆಗೆ ಟೀಸರ್ ಯೂಟ್ಯೂಬ್‍, ಫೇಸ್ ಬುಕ್, ಟಿಕ್ ಟಾಕ್ ಸೇರಿದಂತೆ ಸಾಮಾಜಿಕ ಜಾಲತಾಣ ಗಳಲ್ಲಿ ಭಾರೀ ಟ್ರೆಂಡಿಂಗ್‍ ನಲ್ಲಿ ಮುನ್ನುಗ್ಗುತ್ತಿದೆ. 


ನಟಿ ಸಯೇಶಾ ಪುನೀತ್​ಗೆ ನಾಯಕಿ ಆಗಿ ನಟಿಸಿದ್ದು, ಥಮನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು  ಉಳಿದಂತೆ ಡಾಲಿ ಧನಂಜಯ್, ವಸಿಷ್ಠ ಸಿಂಹ, ಬೊಮ್ಮನ್​ ಇರಾನಿ, ಪ್ರಕಾಶ್ ರೈ, ಸೋನುಗೌಡ ಸೇರಿದಂತೆ ಹಲವರ ತಾರಾಗಣ ಇದೆ. ಯುವರತ್ನ ಚಿತ್ರದಲ್ಲಿ ಪುನೀತ್​ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಂಡಿದ್ದು, ಫುಲ್ ಯಂಗ್​ ಆಗಿ ಮೂಡಿ ಬಂದಿದ್ದಾರೆ. ಎಲ್ಲ ಸರಿಯಾಗಿ ನಡೆದರೆ ಆದಷ್ಟು ಬೇಗ ಈ ಸಿನಿಮಾವನ್ನು ಬೆಳ್ಳಿ ತೆರೆಯಲ್ಲಿ ಕಾಣಬಹುದಾಗಿದೆ. ಅಭಿಮಾನಿಗಳು ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.


మరింత సమాచారం తెలుసుకోండి: