ಇತ್ತೀಚೆಗೆ ತೆರೆಕಂಡ ಮುನಿರತ್ನ ನಿರ್ದೇಶನದ ಕುರುಕ್ಷೇತ್ರ ಚಿತ್ರದ ಧುರ್ಯೋಧನನ ಪಾತ್ರದಲ್ಲಿ ಕಾಣಿಸಿಕೊಂಡು ಜಗಮೆಚ್ಚಿದ್ದ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಲೀಡ್ ರೋಲ್ ನಲ್ಲಿನ ಒಡೆಯ ಚಿತ್ರದ  ಟೀಸರ್ ಬಿಟುಗಡೆಯಾಗದೇ ಅಭಿಮಾನಿಗಳಿಗೆ ಭಾರೀ ನಿರಾಸೆಯ. ಅದಕ್ಕೆ ಕಾರಣ ಈ ಹಿಂದೆಯೇ, ದರ್ಶನ್‌ ಅವರ ಮುಂಬರುವ ಚಿತ್ರ “ಒಡೆಯ’ ಎಂದು ಘೋಷಿಸಿದ್ದ ಚಿತ್ರತಂಡ, ಇದೇ ವಿಜಯದಶಮಿಯಂದು “ಒಡೆಯ’ನ ಮೋಶನ್‌ ಪೋಸ್ಟರ್‌ ಬಿಡುಗಡೆಯಾಗಲಿದೆ.


ನವೆಂಬರ್‌ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎಂದು ಪ್ರಕಟಿಸಿತ್ತು. ಅದರಂತೆ ಈ ವಿಜಯದಶಮಿಯ ವೇಳೆ “ಒಡೆಯ’ನ ಮೋಶನ್‌ ಪೋಸ್ಟರ್‌ಗಾಗಿ ಎದುರು ನೋಡುತ್ತಿದ್ದ ಅಭಿಮಾನಿಗಳ ಮುಂದೆ ತಾಂತ್ರಿಕ ಕಾರಣಗಳಿಂದ “ಒಡೆಯ’ನ ದರ್ಶನ ಸಾಧ್ಯವಾಗಲಿಲ್ಲ. ಇದು ಸಹಜವಾಗಿ ದರ್ಶನ್‌ ಅಭಿಮಾನಿಗಳ ನಿರಾಸೆಗೆ ಕಾರಣವಾದಂತಿದೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಡಿ ಬಾಸ್ ಅಭಿಮಾನಿಗಳು ತಮ್ಮ ಬೇಸರ, ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.


ಇದನ್ನು ಗಮನಿಸಿದ ಚಿತ್ರತಂಡ “ಒಡೆಯ’ಚಿತ್ರದ ಮೋಶನ್‌ ಪೋಸ್ಟರ್‌ ನಿಗದಿತ ಸಮಯಕ್ಕೆ ಬಿಡುಗಡೆ ಮಾಡಲು ಸಾಧ್ಯವಾಗದಿರುವುದಕ್ಕೆ ದರ್ಶನ್‌ ಅಭಿಮಾನಿಗಳ ಬಳಿ ಕ್ಷಮೆ ಯಾಚಿಸಿದೆ. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲೇ ಪ್ರತಿಕ್ರಿಯಿಸಿರುವ “ಒಡೆಯ’ ಚಿತ್ರದ ನಿರ್ಮಾಪಕ ಸಂದೇಶ್‌, ದಸರಾ ಪ್ರಯುಕ್ತ ಬಿಡುಗಡೆಯಾಗಬೇಕಿದ್ದ ನಮ್ಮ ಡಿ ಬಾಸ್‌ರವರ “ಒಡೆಯ’ ಚಿತ್ರದ ಮೋಶನ್‌ ಪೋಸ್ಟರ್‌ ಅನ್ನು ತಾಂತ್ರಿಕ ಸಮಸ್ಯೆಗಳ ಕಾರಣದಿಂದ ಮುಂದೂಡಲಾಗಿದೆ.


ಇಷ್ಟರಲ್ಲೇ ನಿಮಗೆ ಬಿಡುಗಡೆಯ ದಿನಾಂಕವನ್ನು ತಿಳಿಸಲಾಗುವುದು ಕ್ಷಮೆ ಇರಲಿ’ ಎಂದಿದ್ದಾರೆ.  ಇನ್ನು ಅಣ್ಣ-ತಮ್ಮಂದಿರ ಸೆಂಟಿಮೆಂಟ್‌ ಕಥಾಹಂದರ ಹೊಂದಿರುವ “ಒಡೆಯ’ ಚಿತ್ರದಲ್ಲಿ ನಟ ದರ್ಶನ್‌ ಗಜೇಂದ್ರ ಪಾತ್ರಕ್ಕೆ ಬಣ್ಣ ಹಚ್ಚಿದ್ದು, ಎಂ.ಡಿ ಶ್ರೀಧರ್‌ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಾಯಕಿಯಾಗಿ ರಾಘವಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ದೇವರಾಜ್‌, ಸಾಧುಕೋಕಿಲ, ಚಿಕ್ಕಣ್ಣ ಮೊದಲಾದವರು ಚಿತ್ರದ ಇತರ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸದ್ಯ ತನ್ನ ಟೈಟಲ್‌ ಮತ್ತು ಫ‌ಸ್ಟ್‌ಲುಕ್‌ ಮೂಲಕ ಅಭಿಮಾನಿಗಳ ಗಮನ ಸೆಳೆದಿರುವ “ಒಡೆಯ’ ಚಿತ್ರರಂಗದ ಮೂಲಗಳ ಪ್ರಕಾರ, ನವೆಂಬರ್‌ ಅಂತ್ಯದ ವೇಳೆಗೆ ತೆರೆ ಮೇಲೆ ಮೂಡಿಬರಬಹುದು.




మరింత సమాచారం తెలుసుకోండి: