ತಮ್ಮ ಇಷ್ಟದ ನಟನನ್ನು ನೋಡಲು ಅಭಿಮಾನಿಗಳು ಏನೇನೆಲ್ಲಾ ಮಾಡ್ತಾರೆ. ಚಿತ್ರ ವಿಚಿತ್ರವಾಗಿ ಲವ್ ಲೆಟರ್ಸ್ ಬರೀತಾರೆ. ಟ್ವೀಟ್ ಮಾಡ್ತಾರೆ, ಇನ್ನು ಸಾಕಷ್ಟು ಮಾಡ್ತಾರೆ. ಆದರೆ ಆಂಧ್ರದ ಈ ಯುವತಿ ತಮ್ಮ ನೆಚ್ಚಿನ ನಟನನ್ನು ನೋಡಲು ಮರವೇರಿ ಕುಳಿತಿದ್ದಾಳೆ.  ವಿಜಯವಾಡದ ರೆವೆನ್ಯೂ ಕಾಲೋನಿ ಯಲ್ಲಿರುವ ಅಗ್ರಿಗೋಲ್ಡ್​ ಕಾರ್ಯಾಲಯದ ಆವರಣದಲ್ಲಿ ಯುವತಿ ಮರವೇರಿದ್ದಾಳೆ. ನಟ ಮಹೇಶ್​ ಬಾಬು ಅವರನ್ನು ನೋಡಲೇಬೇಕು. ಅವರನ್ನು ಇಲ್ಲಿಗೆ ಕರೆಸಿ ಎಂದು ಹಠ ಹಿಡಿದು ಮರವೇರಿ ಕುಳಿತ್ತಿದ್ದಾರೆ. 


ಈಗ ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬುರನ್ನ ಭೇಟಿಯಾಗಲು ಯುವತಿ ಯೊಬ್ಬರು ಮಾಡಿದ ಕೆಲಸ ಈಗ ಸದ್ದು ಮಾಡುತ್ತಿದೆ. ವಿಜಯವಾಡದ ರೆವೆನ್ಯೂ ಕಾಲೋನಿಯಲ್ಲಿರುವ ಅಗ್ರಿಗೋಲ್ಡ್​ ಕಾರ್ಯಾಲಯದ ಆವರಣದಲ್ಲಿ ಯುವತಿಯೊಬ್ಬರು ಮಾಡಿದ ಕೆಲಸ ಸಂಚಲ ಸೃಷ್ಟಿಸಿತ್ತು. ನಟ ಮಹೇಶ್​ ಬಾಬು ಅವರನ್ನು ನೋಡಲೇಬೇಕು. ಅವರನ್ನು ಇಲ್ಲಿಗೆ ಕರೆಸಿ ಎಂದು ಹಠ ಹಿಡಿದು ಮರವೇರಿ ಕುಳಿತ್ತಿದ್ದಾರೆ. ಅಷ್ಟೇ ಅಲ್ಲ ಮೋದಿಯವರೊಂದಿಗೆ ಮಾತನಾಡ ಬೇಕು, ಜಗನ್​ ತನ್ನ ಮನವಿ ಕೇಳಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಆ ಯುವತಿ. ಈಕೆ ಏತಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಅರಿದ ಜನರು ಅವರ ಮನವೊಲಿಸಲು ಪ್ರಯತ್ನಿಸುತ್ತಿದ್ದರು.


ಕೆಲವರು ಅವರ ವಿಡಿಯೋ ಮಾಡಲು ಹೋದಾಗ ಮರದ ಕೊಂಬೆಗಳಲ್ಲಿದ್ದ ಕಡ್ಡಿಗಳನ್ನು ಕಿತ್ತು ಹೊಡೆಯಲಾರಂಭಿಸಿದ್ದಾರೆ. ಅಷ್ಟೊತ್ತಿಗೆ ಅಲ್ಲಿಗೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಏಣಿಯ ಸಹಾಯದಿಂದ ಮರವೇರಿ ಆ ಯುವತಿಯನ್ನು ಕಾಪಾಡಿದ್ದಾರೆ. ಪೊಲೀಸರ ವಿಚಾರಣೆ ಯಿಂದ ಆ ಯುವತಿ ಕೊಲ್ಕತ್ತಾದವರು ಎಂದು ಗೊತ್ತಾಗಿದೆ. ಅನಿತಾ ಎಂಬ ಹೆಸರಿನ ಯುವತಿಗೆ ವಿಜಯವಾಡದಲ್ಲಿ ಕೆಲವರು ಮೋಸ ಮಾಡಿದ್ದು, ಇದರಿಂದ ಮಾನಸಿಕವಾಗಿ ನೊಂದಿದ್ದಾರೆ ಎಂದು ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಆಕೆಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹೇಶ್ ಬಾಬು ರವರಿಗೆ ಈ ವಿಷಯ ಸಾಮಾಜಿಕ ಜಾಲತಾಣ ಗಳಿಂದ ತಿಳಿದಿರ ಬಹುದು. ಆದರೆ ಈ ಯುವತಿ ಯನ್ನು ನೋಡಲು ಬರುತ್ತಾರಾ ಇಲ್ಲವಾ ಎಂಬುದಷ್ಟೇ ಸದ್ಯಕ್ಕೆ ಅಭಿಮಾನಿಗಳಿಗೆ ಈಗಿರುವ ಕುತೂಹಲ.


మరింత సమాచారం తెలుసుకోండి: