ಬಾಲಿವುಡ್ ಹಿರಿಯ ಮತ್ತು ಸೂಪರ್ ಸ್ಟಾರ್ ಖ್ಯಾತ ನಟ ಅಮಿತಾಬ್ ಬಚ್ಚನ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದಾರೆ.  ಮುಂಬೈನಲ್ಲಿನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಯಕೃತ್ತಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದ ಅಮಿತಾಭ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳಿಂದ ಮೂಲಗಳು. ಕಳೆದ ಮೂರು ದಿನಗಳಿಂದ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.


ಮಂಗಳವಾರ ರಾತ್ರಿ ಎರಡು ಗಂಟೆ ಸಮಯದಲ್ಲಿ ಅಮಿತಾಭ್‌ರನ್ನು ಕುಟುಂಬಿಕರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಐಸಿಯು ರೀತಿಯ ಕೊಠಡಿಯಲ್ಲಿ ಇರಿಸಲಾಗಿದ್ದು ನಿತ್ಯ ಅವರ ಮೇಲೆ ನಿಗಾ ಇಡಲಾಗಿದೆ. ಕುಟುಂಬಿಕರು ಬಂದು ಹೋಗುತ್ತಿದ್ದಾರೆ. 
 ಫುಲ್ ಬಾಡಿ ಚೆಕಪ್‌ಗಾಗಿ ಆಸ್ಪತ್ರೆಗೆ ಬಂದಿದ್ದಾರೆಂದು, ಇದೊಂದು ರೆಗ್ಯುಲರ್ ಚೆಕಪ್ ಅಷ್ಟೇ. ಅವರು ಆರೋಗ್ಯವಾಗಿಯೇ ಇದ್ದಾರೆಂದು ನಾನಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವಂತೆ ವೈದ್ಯರು ಸೂಚಿಸಿದ್ದಾರೆ. ಅಮಿತಾಭ್ ಆರೋಗ್ಯದ ಬಗ್ಗೆ ಯಾವುದೇ ರೀತಿಯ ಆತಂಕ ಅಗತ್ಯ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅಮಿತಾಭ್ ಬಚ್ಚನ್ ಕಾಲ್‍ಶೀಟ್ ಮುಂದಿನ ವರ್ಷದ ತನಕ ಖಾಲಿ ಇಲ್ಲ


ತಾನು ಲಿವರ್ ಸಿರೋಸಿಸ್‌ನಿಂದ ಬಳಲುತ್ತಿದ್ದು ಶೇ.75ರಷ್ಟು ಲಿವರ್ ಹಾಳಾಗಿದೆ. ಉಳಿದ ಶೇ.25ರಷ್ಟು ಲಿವರ್‌ನೊಂದಿಗೆ ಮಾತ್ರ ಬದುಕುತ್ತಿದ್ದೇನೆ ಎಂದು ಈ ಹಿಂದೊಮ್ಮೆ ಸ್ವತಃ ಅಮಿತಾಭ್ ಹೇಳಿದ್ದರು. ಅಷ್ಟೇ ಅಲ್ಲದೆ ಈ ಹಿಂದೆ ಕ್ಷಯ, ಹೆಪಟೈಟಿಸ್ ಬಿ ಯಂತಹ ಖಾಯಿಲೆಗಳ ಜತೆಗೂ ಹೋರಾಡಿದ್ದೇನೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ ತನಗೆ ಕ್ಷಯ ಇದೆ ಎಂದು 8 ವರ್ಷಗಳಷ್ಟು ತಡವಾಗಿ ತಿಳಿಯಿತು ಎಂದು ಹೇಳಿದ್ದರು. ಅಮಿತಾಬ್ ಬಚ್ಚನ್ ಅವರು ಕಳೆದ ಇಪ್ಪತೈದಕ್ಕೂ ಹೆಚ್ಚು ವರ್ಷಗಳಿಂದ ನಟಿಸುತ್ತಿದ್ದು, ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಸೂಪರ್ ಸ್ಟಾರ್, ಬಾಲಿವುಡ್ ಹಿರಿಯ ಖ್ಯಾತ ನಟ ಬಿಗ್ ಬಿ ಎಂದೇ ಖ್ಯಾತಿ ಪಡೆದಿದ್ದಾರೆ. ಸೌತ್ ಸಿನಿ ಇಂಡಸ್ಟ್ರೀಯಲ್ಲಿ ತಮ್ಮದೇ ಆದ ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪ್ರೆತ್ರೆಗೆ ದಾಖಲಿಸಲಾಗಿದೆ. ಭಯ ಪಡುವ ಅಗತ್ಯತೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. 


మరింత సమాచారం తెలుసుకోండి: