ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ನಡೆದ ಯುವ ದಸರಾ ದಿಂದ ರಪ್ಪಾರ್ ಮತ್ತು ಬೊಂಬೆದೇ ಹವಾ. ಸ್ಟೇಜ್ ಮೇಲೆ ಪ್ರಪೋಸ್ ಮಾಡಿದ್ದೇ ಮಾಡಿದ್ದು ಇದೀಗ ನೇರವಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಈ ಜೋಡಿ. ಅರೇ ಏನಪ್ಪಾ ಇದು ಎಂದು ಆಶ್ಚರ್ಯ ವಾದರೂ ಸರಿ ನೀವು ನಂಬಲೇ ಬೇಕಾದ ವಿಷಯವಿದು. ಗಾಯಕ ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತಾ ಗೌಡ ನಿಶ್ವಿತಾರ್ಥ  ಇಂದು ಮೈಸೂರಿನಲ್ಲಿ ನಡೆಯಲಿದೆ.


ಸಾಂಸ್ಕೃತಿಕ ನಗರಿ ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ನಡೆಯಲಿದ್ದು, ಕುಟುಂಬದ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ. ಯುವ ದಸರಾ ವೇದಿಕೆಯಲ್ಲಿ ಚಂದನ್ ಶೆಟ್ಟಿ ಅಭಿಮಾನಿಗಳ ಮುಂದೆ ಗೆಳತಿ ನಿವೇದಿತಾರಿಗೆ ಪ್ರಪೋಸ್ ಮಾಡಿದ್ದರು. ವೇದಿಕೆಯಲ್ಲಿಯೇ ರಿಂಗ್ ತೊಡಿಸಿ ತಮ್ಮ ಪ್ರೇಮ ನಿವೇದನೆಯನ್ನು  ಚಂದನ್ ಶೆಟ್ಟಿ ಅಧಿಕೃತವಾಗಿ ಹೇಳಿಕೊಂಡಿದ್ದರು. ಯಾವುದೋ ಖಾಸಗಿ ವಾಹಿನಿಯ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದ ನಿವೇದಿತಾ ಮತ್ತು ಚಂದನ್ ಪ್ರೇಮ ಜೋಡಿಗಳ ರೀತಿಯಲ್ಲಿಯೇ ಬಿಂಬಿತವಾಗಿದ್ದರು. ರಿಯಾಲಿಟಿ ಶೋ ಬಳಿಕ ನಾವಿಬ್ಬರು ಜಸ್ಟ್ ಫ್ರೆಂಡ್ಸ್ ಅಂತಾ ಹೇಳಿದ್ದರು.


ಕಳೆದ ಎರಡು ವರ್ಷಗಳಿಂದ ಚಂದನ್ ಮತ್ತು ನಿವೇದಿತಾ ನಡುವೆ ಪ್ರೇಮಾಂಕುರವಾಗಿದೆ, ಈಗಾಗಲೇ ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂಬಿತ್ಯಾದಿ ಗಾಸಿಪ್ ಸುದ್ದಿಗಳು ರಾಜ್ಯಾದ್ಯಂತ  ಹರಿದಾಡಿದ್ದವು. ಆದರೆ ಎಲ್ಲಿಯೂ ಚಂದನ್ ಶೆಟ್ಟಿ ಮತ್ತು ಗೊಂಬೆ ನಿವೇದಿತಾ ತಮ್ಮ ಸಂಬಂಧದ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿರಲಿಲ್ಲ. ಈಚೆಗಿನ ಯುವ ದಸರಾದಲ್ಲಿ ಸ್ಟೇಜ್ ಮೇಲೆಯೇ ಚಂದನ್  ರಿಂಗ್ ತೊಡಿಸುವ ಮೂಲಕ ಎಲ್ಲರು ಹುಬ್ಬೇರುವಂತೆ ಮಾಡಿದ್ದರು. ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ಪ್ರೇಮ ನಿವೇದನೆ ಸಲ್ಲಿಸಿದ್ದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ   ವಿರೋಧದ ಚರ್ಚೆಗಳು ನಡೆದಿದ್ದವು. ವಿರೋಧ ಪಕ್ಷಗಳು ಸಹ ಇದನ್ನು ವಿರೋಧಿಸಿ ಟ್ವೀಟ್ ಮಾಡಿದ್ದವು. 


ಸಂಸದ ಪ್ರತಾಪ್ ಸಿಂಹ ಅವರು ಇದರ ಕುರಿತು ತಪ್ಪೇನು ಎಂದು ನೇರವಾಗಿ ಮುಖಕ್ಕೊಡೆಯುವ ಹಾಗೆಯೇ ಪ್ರತಿಪಕ್ಷಗಳ ವಿರುದ್ದ ಪರೋಕ್ಷವಾಗಿ ಕಿಡಿಕಾರಿದ್ದರು. ಇಷ್ಟೇಲ್ಲಾ ನಡೆದ ಮೇಲೆ ಇದೀಗ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿದೆ.


మరింత సమాచారం తెలుసుకోండి: