ಹೊಸದಿಲ್ಲಿ: ದಿನ ಕಳೆದಂತೆ ಕುತೂಹಲ ಹುಟ್ಟಿಸುತ್ತಿರು ಅಯೋಧ್ಯೆ ತೀರ್ಪಿನ ಮೇಲೆ ಇದೀಗ ಟೆರರಿಸ್ಟ್ ಗಳ ಕಣ್ಣು ಬಿದ್ದಿದೆ. ತೀರ್ಪಿನ ಬೆನ್ನಲ್ಲೆ ಶಾಂತಿ ನಾಶ ಮಾಡಿ, ಹಿಂದೂ ಮುಸ್ಲಿಂ ಪವಿತ್ರ ಬಂಧಕ್ಕೆ ಬೆಂಕಿ ಹಚ್ಚುವ ಬಿಗ್ ಮಾಸ್ಟರ್ ಪ್ಲಾನೊಂದು ಮಾಡಿಕೊಂಡಿದ್ದಾರಂತೆ. 


ಕೋಮು ಸಂಘರ್ಷಕ್ಕೆ ಕಿಚ್ಚು ಹಚ್ಚಲು ಪಾಕಿಸ್ತಾನದ ಏಳು ಉಗ್ರರು ದೇಶದೊಳಗೆ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆಯು ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದೆ.
ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿಯಿಂದ ಅಕ್ರಮವಾಗಿ ಒಳನುಸುಳುತ್ತಿದ್ದ ಉಗ್ರರು ಈ ಬಾರಿ ನೇಪಾಳದ ಮಾರ್ಗವಾಗಿ ದೇಶ ಪ್ರವೇಶಿಸಿದ್ದಾರೆ. ಈ ಏಳು ಮಂದಿ ದೇಶಾದ್ಯಂತ ಚದುರಿಹೋಗಿದ್ದಾರೆ. ಆ ಪೈಕಿ ಕೆಲವರು ಗೋರಖ್‌ಪುರದಲ್ಲಿ ಅಡಗಿದ್ದಾರೆ. ಉತ್ತರ ಪ್ರದೇಶವನ್ನೇ ಪ್ರಮುಖ ಗುರಿಯಾಗಿಸಿಕೊಂಡಿರುವ ಉಗ್ರರು , ಅಯೋಧ್ಯೆ ತೀರ್ಪನ್ನು ಕೋಮುಸಂಘರ್ಷದ ದೊಡ್ಡ ಕಿಡಿಯಾಗಿಸಲು ಯತ್ನಿಸುತ್ತಿದ್ದಾರೆ ಎಂದು ಗುಪ್ತಚರ ಅಧಿಕಾರಿಗಳು ನೀಡಿದ್ದಾರೆ. ಆದ್ದರಿಂದ ಭದ್ರತಾ ಪಡೆ ಹೆಚ್ಚಬೇಕಿದೆ. 


ದೇಶದೊಳಗೆ ನುಸುಳಿರುವ ಏಳು ಉಗ್ರರ ಪೈಕಿ ಐದು ಮಂದಿಯ ಗುರುತನ್ನು ಗುಪ್ತಚರ ಅಧಿಕಾರಿಗಳು ಈಗಾಗಲೇ ಪತ್ತೆ ಮಾಡಿದ್ದಾರೆ. ಮೊಹಮ್ಮದ್‌ ಯಾಕೂಬ್‌, ಅಬು ಹಂಜಾ, ಮೊಹಮ್ಮದ್‌ ಶಾಹಬಾಜ್‌, ನಿಸಾರ್‌ ಅಹ್ಮದ್‌, ಮೊಹಮ್ಮದ್‌ ಕೌಮಿ ಚೌಧರಿ ಎಂಬ ಹೆಸರಿನ ಉಗ್ರರು ದೇಶದೊಳಗೆ ಅಡಗಿದ್ದಾರೆ ಎನ್ನಲಾಗಿದೆ.


ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಮನಬಂದಂತೆ ಅಭಿಪ್ರಾಯಗಳನ್ನು ಹರಿಬಿಡಲಾಗುವ ಬಗ್ಗೆ ಜಾಗ್ರತೆ ವಹಿಸಿರುವ ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಪ್ರೇಟ್‌ ಡಿಸೆಂಬರ್‌ 28ರವರೆಗೆ ಖಡಕ್‌ ನಿರ್ಬಂಧಗಳನ್ನು ಜಾರಿಗೊಳಿಸಿದ್ದಾರೆ. ಅಯೋಧ್ಯೆಯಲ್ಲಿಮುನ್ನೆಚ್ಚರಿಕೆ ಕ್ರಮವಾಗಿ 144 ಸೆಕ್ಷನ್‌ ಜಾರಿಯಲ್ಲಿದೆ. ಯಾವುದೇ ಸಮುದಾಯದಿಂದ ಸಾರ್ವಜನಿಕ ಸಮಾರಂಭ, ಸಮಾವೇಶಗಳನ್ನು ನಡೆಸದಂತೆ ನಿಷೇಧ ಹೇರಲಾಗಿದೆ. ದೈನಂದಿನ ಆಧಾರದಲ್ಲಿ 40 ದಿನಗಳ ಕಾಲ ಸುದೀರ್ಘ ವಿಚಾರಣೆಯನ್ನು ಅ.16ರಂದು ಪೂರ್ಣಗೊಳಿಸಿರುವ ಸಿಜೆಐ ನೇತೃತ್ವದ ಸಂವಿಧಾನ ಪೀಠವು ತೀರ್ಪು ಕಾಯ್ದಿರಿಸಿದೆ. ಮ.17ರಂದು ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ನಿವೃತ್ತಿ ಹೊಂದಲಿದ್ದು, ಅಷ್ಟರ ಒಳಗೆ ಯಾವುದೇ ದಿನ ತೀರ್ಪು ಪ್ರಕಟವಾಗುವ ನಿರೀಕ್ಷೆ ಇದೆ. 


ಪ್ರಮುಖ ಮುಖಂಡರೆಲ್ಲಾ  ಚರ್ಚೆಮಾಡಿ ಶಾಂತಿ ಧೋರಣೆ ತಾಳಬೇಕೆಂದು ಮಾತನಾಡಿಕೊಂಡಿದ್ದಾರೆ.


మరింత సమాచారం తెలుసుకోండి: