ನವ ದೆಹಲಿ: ಬಹಳ ದಿನಗಳ ನಂತರ ರಾಹುಲ್ ತುಂಬಾ ಭಾವುಕರಾಗಿದ್ದಾರೆ. ಭಾವುಕರಾಗಿ ಟ್ವೀಟ್ ಮಾಡಿದ್ದಾರೆ. ಹೌದು ಅದು ಗಾಂಧಿ ಕುಟುಂಬಕ್ಕೆ ನೀಡಿದ್ದ ಭದ್ರತೆ ಬಗ್ಗೆ. ಅದನ್ನು ನೀವು ಒಮ್ಮೆ ಓದಿಬಿಡಿ.


ಇಲ್ಲಿಯವರೆಗೂ ಗಾಂಧಿ ಕುಟುಂಬಕ್ಕೆ ನೀಡಿದ್ದ ಎಸ್.​ಪಿ.ಜಿ ಭದ್ರತೆಯನ್ನು ಕೇಂದ್ರ ಸರ್ಕಾರ ವಾಪಸ್​ ಪಡೆದಿದೆ. ಈ ವಿಚಾರವಾಗಿ ರಾಹುಲ್​ ಗಾಂಧಿ ಭಾವನಾತ್ಮಕ ಟ್ವೀಟ್​ ಮಾಡಿದ್ದು, ನನಗೆ, ನನ್ನ ಕುಟುಂಬಕ್ಕೆ ಭದ್ರತೆ ನೀಡಿದ ಎಸ್​.ಪಿ.ಜಿ ಸಹೋದರ-ಸಹೋದರಿಯರಿಗೆ ಧನ್ಯವಾದ ಎಂದಿದ್ದಾರೆ. ಗಾಂಧಿ ಕುಟುಂಬದ ರಕ್ಷಣೆಗೆ ಯಾವುದೇ ಧಕ್ಕೆ ಇಲ್ಲ. ಇತ್ತೀಚಿನ ದಿನಗಲ್ಲಿ ಗಾಂಧಿ ಕುಟುಂಬಕ್ಕೆ ನೇರ ಬೆದರಿಕೆ ಇಲ್ಲದ ಕಾರಣಕ್ಕೆ ಅವರಿಗೆ ನೀಡಲಾಗಿರುವ ಎಸ್​ಪಿಜಿ ಭದ್ರತೆಯನ್ನು ಕೇಂದ್ರ ಹಿಂಪಡೆದಿದೆ ಎನ್ನಲಾಗಿದೆ. ಈ ವಿಚಾರವಾಗಿ ಕಾಂಗ್ರೆಸ್​ ನಾಯಕರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದು, ಇದೊಂದು ಸೇಡಿನ ರಾಜಕಾರಣ ಎಂದಿದ್ದಾರೆ.


ವಿಶೇಷವಾಗಿ ಕೇಂದ್ರದ ವಿರುದ್ದ ಗುಡುಗುತ್ತಿದ್ದ ರಾಹುಲ್ ಇದೀಗ ಸುಮ್ಮನಾಗಿದ್ದಾರೆ. ಈ ಬಗ್ಗೆ ರಾಹುಲ್​ ಯಾವುದೇ ಅಪಸ್ವರ ಎತ್ತಿಲ್ಲ. ಬದಲಿಗೆ ಭಾವನಾತ್ಮಕ ಟ್ವೀಟ್​ ಮಾಡಿದ್ದಾರೆ. "ಕಳೆದ ಹಲವು ವರ್ಷಗಳಿಂದ ನನ್ನ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಲು ಶ್ರಮಿಸಿದ ಎಸ್​ಪಿಜಿ ಸಹೋದರ ಹಾಗೂ ಸಹೋದರಿಯರಿಗೆ ಧನ್ಯವಾದ. ನಿಮ್ಮ ಬದ್ಧತೆಗೆ ನನ್ನ ಧನ್ಯವಾದ. ಉತ್ತಮ ಭವಿಷ್ಯಕ್ಕೆ ಆಲ್​ ದ ಬೆಸ್ಟ್​," ಎಂದಿದ್ದಾರೆ ರಾಹುಲ್​ ಗಾಂಧಿ.

1991ರಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ಬಳಿಕ ಮಾಜಿ ಪ್ರಧಾನಿಗಳು ಸೇರಿದಂತೆ ಗಾಂಧಿ ಕುಟುಂಬಕ್ಕೆ ಎಸ್​ಪಿಜಿ ಭದ್ರತೆ ಒದಗಿಸಲಾಗಿತ್ತು. ಎಲ್ಲಾ ಮಾಜಿ ಪ್ರಧಾನಿಗಳ ಭದ್ರತೆಯನ್ನು ಕಾಲ ಕಾಲಕ್ಕೆ ಪರಿಶೀಲಿಸಲಾಗುತ್ತದೆ ಮತ್ತು ಅಗತ್ಯವಿದ್ದಾಗ ಅದನ್ನು ಇಳಿಕೆ ಮಾಡಲಾಗುತ್ತದೆ. ಇತ್ತೀಚೆಗೆ ಮಾಜಿ ಪ್ರಧಾನಿ ಡಾ.ಮನಮೋಹನ್ ಅವರಿಗೆ ನೀಡಲಾಗಿದ್ದ ಎಸ್​ಪಿಜಿ ಭದ್ರತೆಯನ್ನು ಹಿಂಪಡೆಯಲಾಗಿತ್ತು. ಇದೀಗ ಗಾಂಧಿ ಕುಟುಂಬದಿಂದಲೂ ಈ ಎಸ್. ಪಿ. ಜಿ ಭದ್ರತೆ ಹಿಂಪಡೆಯಲಾಗಿದೆ. ಆದರೆ ಕೇಂದ್ರದ ನಾಯಕರು ಮತ್ತು ಕಾಂಗ್ರೇಸ್ ನ ಗಟಾನುಘಟಿ ನಾಯಕರು ಇದನ್ನು ಇನ್ನಷ್ಟು ವರ್ಷ ಮುಂದುವರೆಸಬೇಕಿತ್ತು, ಇಲ್ಲಿಗೆ ನಿಲ್ಲಿಸಬಾರದಿತ್ತೆಂದು ಆಕ್ರೋಶ ಹೊರಹಾಕಿದ್ತಾರೆ.


మరింత సమాచారం తెలుసుకోండి: