ತಮಿಳುನಾಡಿನ ತಲೈವ, ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಒಂದೇ ಒಂದು ಸೆಲ್ಫೀ ಪಡೆಯೋದು ಕಷ್ಟಸಾಧ್ಯ. ಆದರೆ ಕನ್ನಡದ ಈ ನಟ ರೋಬೋ ಖ್ಯಾತಿಯ ರಜನಿಕಾಂತ್ ಜೊತೆಗೆ ನಟಿಸುವ ಅವಕಾಶವನ್ನು ಕೈಚಲ್ಲಿದ್ದಾರೆ. ಹೌದು, ಯಾಕೆ ಏನು ಎಂಬುದು ನೀವೆ ತಿಳಿಯಿರಿ. 
 
ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್‌ ಶೆಟ್ಟಿ ಅಭಿನಯದ “ಅವನೇ ಶ್ರೀಮನ್ನಾರಾಯಣ‘ ಚಿತ್ರದ ಟ್ರೇಲರ್‌ಗೆ ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಸಿಗುತ್ತಿರುವುದು ಗೊತ್ತೇ ಇದೆ. ಇದರ ಬೆನ್ನಲ್ಲೇ, ತಮಿಳಿನ ಸೂಪರ್‌ ಹಿಟ್‌ ಸಿನಿಮಾ “ಪೆಟ್ಟಾ‘ ಚಿತ್ರದ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ಕೂಡ ಚಿತ್ರದ ಟ್ರೇಲರ್‌ ವೀಕ್ಷಿಸಿ, “ಅದ್ಭುತ ಸಿನಿಮೇಕರ್‌, ಬರಹಗಾರ ನಟ ರಕ್ಷಿತ್‌ ಶೆಟ್ಟಿ ಅವರಿಗೆ ತಮಿಳು ಇಂಡಸ್ಟ್ರಿಗೆ ಸ್ವಾಗತ. ಇಡೀ ಚಿತ್ರತಂಡಕ್ಕೆ ಆಲ್‌ ದಿ ಬೆಸ್ಟ್‌. ಆದಷ್ಟು ಬೇಗ ಚಿತ್ರವನ್ನು ನೋಡಲು ಕಾಯುತ್ತಿದ್ದೇನೆ‘ ಎಂದು ಟ್ವೀಟ್‌ ಮೂಲಕ ಶುಭ ಹಾರೈಸಿದ್ದಾರೆ.
 
ಇದೀಗ ವಿಶೇಷತೆ ಏನಪ್ಪಾ ಅಂದ್ರೆ ರಕ್ಷಿತ್‌ಶೆಟ್ಟಿ ಅವರಿಗೆ ರಜನಿಕಾಂತ್‌ ಅವರ ಜೊತೆ ನಟಿಸುವ ಅವಕಾಶ ಬಂದಿದ್ದರೂ, ಅದನ್ನು ನಿರಾಕರಿಸಿದ್ದಾರೆ. “ಪೆಟ್ಟಾ‘ ಚಿತ್ರದಲ್ಲಿ ನಟಿಸುವ ಅವಕಾಶ ರಕ್ಷಿತ್‌ ಶೆಟ್ಟಿ ಅವರನ್ನು ಹುಡುಕಿ ಬಂದಿತ್ತು. ಆದರೆ, ರಕ್ಷಿತ್‌ ಶೆಟ್ಟಿ ಮಾತ್ರ, ನಟಿಸಲು ಸಾಧ್ಯವಾಗಲಿಲ್ಲ. “ಪೆಟ್ಟಾ‘ ಚಿತ್ರದ ನಿರ್ದೇಶಕ ಕಾರ್ತಿಕ್‌ ಸುಬ್ಬರಾಜು ಮತ್ತು ರಕ್ಷಿತ್‌ ಶೆಟ್ಟಿ ಗೆಳೆಯರು. ಹಾಗಾಗಿ ಚಿತ್ರದ ಒಂದು ಪಾತ್ರಕ್ಕೆ ರಕ್ಷಿತ್‌ ಶೆಟ್ಟಿ ಅವರನ್ನು ಕಾರ್ತಿಕ್‌ ಸುಬ್ಬರಾಜು ಸಂಪರ್ಕಿಸಿದ್ದರು.
 
ಆದರೆ, ರಕ್ಷಿತ್‌ ಶೆಟ್ಟಿ ಆ ಅವಕಾಶವನ್ನು ನಿರಾಕರಿಸಿದ್ದರು. ಅದಕ್ಕೆ ಕಾರಣವೇನು ಗೊತ್ತಾ? ಆ ಸಂದರ್ಭದಲ್ಲಿ ರಕ್ಷಿತ್‌ ಶೆಟ್ಟಿ ಅವರು “ಅವನೇ ಶ್ರೀಮನ್ನಾರಾಯಣ‘ ಚಿತ್ರದ ಚಿತ್ರೀಕರಣದಲ್ಲಿ ಬಿಝಿಯಾಗಿದ್ದರು. ಆ ಸಿನಿಮಾಗೆ ಹೆಚ್ಚು ಆದ್ಯತೆ ಕೊಟ್ಟಿದ್ದರಿಂದ ರಕ್ಷಿತ್‌ ಶೆಟ್ಟಿ “ಪೆಟ್ಟಾ‘ ಚಿತ್ರದಲ್ಲಿ ರಜನಿಕಾಂತ್‌ ಅವರ ಜೊತೆ ನಟಿಸುವ ಚಾನ್ಸ್ ಮಿಸ್ ಮಾಡಿಕೊಂಡಿದ್ದಾರೆ. ನಾನು ಶ್ರೀಮನ್ನಾರಾಯಣ ಚಿತ್ರದಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದೆ ಆದಕಾರಣ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ನಟಿಸುವ ಅವಕಾಶ ಕಳೆದುಕೊಂಡೆ ಎಂದು ಸ್ವತಹ ರಕ್ಷಿತ್ ಶೆಟ್ಟಿ ಅವರೆ ಹೇಳಿಕೊಂಡಿದ್ದಾರೆ.

మరింత సమాచారం తెలుసుకోండి: