ಬೆಂಗಳೂರು: ಜನವರಿ ಮುಗಿಯುತ್ತಾ ಬಂದರೂ ಕೂಡ ಕೆಪಿಸಿಸಿ ಅಧ್ಯಕ್ಷರ ನೇಮಕ ಮಾತ್ರ ಆಗ್ತಾನೆ ಇಲ್ಲ. ಇದೀಗ ಮಾಜಿ ಡಿಸಿಎಂ ಪರಮೇಶ್ವರ್ ಏನ್ ಹೇಳಿದ್ದಾರೆ ಗೊತ್ತಾ! ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನ ಮಾಡುವಂತೆ ನಾವು ಕೂಡ ಒತ್ತಡ ಏರಿದ್ದೇವೆ ಎಂದಿದ್ದು ಇನ್ನಾದರೂ ನೇಮಕ ಆಗ್ತಾರೆ ಇಲ್ವಾ ಎಂಬಂತಾಗಿದೆ ಸದ್ಯದ ಪರಿಸ್ಥಿತಿ. 
 
ನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಸಿ.ಎಲ್.​ಪಿ ಸ್ಥಾನದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶೀಘ್ರವೇ ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಹೈಕಮಾಂಡ್ ಮೇಲೆ ಒತ್ತಡ ತಂದಿದ್ದೇವೆ. ಈಗ ನಮ್ಮ ಹೈಕಮಾಂಡ್​ ದೆಹಲಿ ಚುನಾವಣೆಯಲ್ಲಿ ಕಾರ್ಯನಿರತರಾಗಿದ್ದಾರೆ. ಹೀಗಾಗಿ ಈ ಸ್ಥಾನದ ಕಡೆ ಸ್ವಲ್ಪ ಗಮನ ಕಡಿಮೆಯಾಗಿದೆ. ಮತ್ತೊಂದು ಬಾರಿ ಹೈಕಮಾಂಡ್ ಗೆ ಮನವಿ ಮಾಡ್ತೇವೆ ಈ ಬಗ್ಗೆ ತಿಳಿಸುತ್ತೇನೆ ಎಂದರು. ಈ ಬಾರಿ ಕೆಪಿಸಿಸಿ ಅಧ್ಯಕ್ಷರ ನೇಮಕ ಆಗೋದು ಖಚಿತ ಎಂದಿದ್ದಾರೆ. 
 
ರಾಜ್ಯ ಸರ್ಕಾರ ಬಗ್ಗೆ ಮಾತನಾಡಿ, ರಾಜ್ಯದಲ್ಲಿನ ಸರ್ಕಾರ ನಿಷ್ಕ್ರಿಯ ವಾಗಿದೆ. 17ರಿಂದ ಅಧಿವೇಶನ ಬೇರೆ ನಡೆಯಲಿದೆ. ರಾಜ್ಯದಲ್ಲಿ ಆಡಳಿತ ಯಂತ್ರವೂ ಕುಸಿದಿದೆ. ನಮ್ಮ ಸರ್ಕಾರ ಹಿಂದೆ ಅನುದಾನ ಬಿಡುಗಡೆ ಮಾಡಿತ್ತು. ಅದನ್ನು ಸಹ ಸರ್ಕಾರ ತಡೆಹಿಡಿದಿದೆ. ಆ ಅನುದಾನವನ್ನ ವಾಪಸ್ ಪಡೆಯುತ್ತಿದೆ. ಇದೆಲ್ಲದರ ವಿರುದ್ಧ ನಾವು  ಧ್ವನಿ ಎತ್ತಬೇಕಿದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷರ ನೇಮಕ ಅನಿವಾರ್ಯವಾಗಿದೆ. ನಮ್ಮಲ್ಲಿ ಕೆಲ ಭಿನ್ನಾಭಿಪ್ರಾಯಗಳು ಇರಬಹುದು.ಈಹಿಂದೆ ನಮ್ಮ ಮನೆಯಲ್ಲೇ ಸಭೆಯನ್ನ ಮಾಡಿದ್ದೆ, ಆಗಲೂ ಭಿನ್ನಾಬಿಪ್ರಾಯ ಬಿಟ್ಟು ಹೋಗೋಣ ಎಂದಿದ್ದೆ. ಎಲ್ಲರೂ ಅದಕ್ಕೆ ಒಪ್ಪಿಕೊಂಡಿದ್ದರು. ಆದರು ಅದನ್ನೇ ಮುಂದುವರೆಸಿಕೊಂಡು ಹೋಗುತ್ತಿದ್ದಾರೆಂದು ಜಿ.ಪರಮೇಶ್ವರ್​ ಅವರು ಪರೋಕ್ಷವಾಗಿ ತಮ್ಮ ನಾಯಕರ ವಿರುದ್ಧ ಕಿಡಿಕಾರದ್ದಾರೆ.
 
ಅಲ್ಲದೆ ಶಾಸಕಾಂಗ ಪಕ್ಷದ ಸ್ಥಾನದ ವಿಚಾರವಾಗಿ ಉತ್ತರಿಸಿ, ಯಾವ ಸ್ಥಾನಕ್ಕೂ ಯಾರದು ಒತ್ತಡವಿಲ್ಲ. ಹೈಕಮಾಂಡ್​ ಬೇಗ ಪಟ್ಟಿ ಬಿಡುಗಡೆ ಮಾಡಬೇಕು. ಕೆಲವರು ಹೇಳಿಕೆ ಕೊಟ್ಟು ನಾನು ಅರ್ಹ ಇದ್ದೇನೆ ಎಂದು ಹೇಳುತ್ತಾರೆ. ಅದೆಲ್ಲ ಪಕ್ಷದಲ್ಲಿ ಸ್ವಾಭಾವಿಕ. ಇನ್ನು ಹೈಕಮಾಂಡ್​ ಯಾರು ಅರ್ಹರಿದ್ದಾರೆ, ಯಾರು ಅರ್ಹರಿಲ್ಲ ಎಂದು ನಿರ್ಧಾರಿಸಿ ಪಟ್ಟಿಯನ್ನ ಬಿಡುಗಡೆ ಮಾಡುತ್ತಾರೆ, ಕಾದು ನೋಡೋಣ ವೆಂದು ತಿಳಿಸಿದ್ದಾರೆ.
 
 

మరింత సమాచారం తెలుసుకోండి: