ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಐಎಂಎ ಹಗರಣ ಬೆಳಕಿಗೆ ಬರುತ್ತಿದ್ದಂತೆ ತೆರಿಗೆ ಇಲಾಖೆ ಅಧಿಕಾರಿಗಳು ಇದೀಗ ಎಚ್ಚೆತ್ತುಕೊಂಡಿದ್ದಾರೆ. ಹೀಗಾಗಿ ಮಂಗಳೂರಿನಲ್ಲಿನ ಆಭರಣ ಮಳಿಗೆಗಳ ಮೇಲೆ ಹಾಗೂ ಅವುಗಳ ಮಾಲೀಕರ ಮನೆಗಳ ಮೇಲೆ ಐಟಿ ಇಲಾಖೆ ದಾಳಿ ನಡೆಸಿದೆ. ಆದರೆ ಇದು ತಡವಾಗಿ ಬೆಳಕಿಗೆ ಬಂದಿದೆ. 


ಕಾಸರಗೋಡು, ಮಂಗಳೂರು ಹಾಗೂ ಉಡುಪಿಯಲ್ಲಿ ಐಟಿ ತಂಡಗಳು ತೆರಳಿ ತಪಾಸಣೆ ನಡೆಸಿವೆ. ಮಂಗಳೂರಿನ ಸಿಟಿಗೋಲ್ಡ್ ಹಾಗೂ ಸುಲ್ತಾನ್ ಗೋಲ್ಡ್ ಜ್ಯುವೇಲರಿ ಮೇಲೆ ದಾಳಿ ನಡೆದಿದೆ. ಇನ್ನುಳಿದ ಆಭರಣ ಅಂಗಡಿ ಮೇಲೆ ನಿಗಾ ಇರಿಸಿರುವ ಐಟಿ ಇಲಾಖೆ, ಮತ್ತಷ್ಟು ದಾಳಿಗೆ ಸಿದ್ಧವಾಗಿದೆ.


ಮಂಗಳೂರು, ಬೆಂಗಳೂರು ಮತ್ತು ಗೋವಾ ರಾಜ್ಯದಿಂದ ಆದಾಯ ಇಲಾಖೆ ಅಧಿಕಾರಿಗಳ ತಂಡ ಈ ದಾಳಿ ಮಾಡಿವೆ. ಆದರೆ ದಾಳಿಯ ವೇಳಯ ಕಡತಗಳ ಪರಿಶೀಲನೆ ಇನ್ನೂ ಮುಂದುವರೆದಿದೆ ಎಂದು ತಿಳಿದು ಬಂದಿದೆ. 


మరింత సమాచారం తెలుసుకోండి: