ಕರ್ನಾಟಕದಲ್ಲಿ ಕನ್ನಡವೇ ಮರೆಯಾಗುತ್ತಿರುವುದು ನಿಜಕ್ಕೂ ದುರಂತದ ಸಂಗತಿ, ಪ್ರತಿನಿತ್ಯ ಎಲ್ಲ ತಿಳಿದಿರುವನಾವೇಅನೇಕ ತಪ್ಪುಗಳನ್ನು ಮಾಡುತ್ತೇವೆ. ದೊಡ್ಡವರ ಮತ್ತು ಚಿಕ್ಕವರ ಸಂಕಟಗಳೇ ಸಿನಿಮಾ ಆದರೆ ಹೇಗಿರುತ್ತದೆ ಎಂಬುದಕ್ಕೆ ಸಾಕ್ಷಿ ‘ಕಾಳಿದಾಸ ಕನ್ನಡ ಮೇಷ್ಟು್ರ’. ನಿರ್ದೇಶಕ ಕವಿರಾಜ್‌ ಅವರು ಈ ಸಾಹಸ ಮಾಡಿದ್ದಾರೆ. ಅಕ್ಷರ ಜ್ಞಾನಕ್ಕೆ ಹಾತೊರೆಯುತ್ತಿರುವ ಪ್ರತಿಯೊಬ್ಬರಿಗೂ ಗೊತ್ತಿರುವ ಮತ್ತು ಎದುರಿಸುತ್ತಿರುವ ಸಮಸ್ಯೆಯನ್ನೇ ತೆರೆ ಮೇಲೆ ತಂದಿದ್ದಾರೆ. ಶಿಕ್ಷಣ ಗಂಭೀರ ವಿಷಯವಾಗಿದೆ. ಜೊತೆಗೆ ಸಿಕ್ಕಾಪಟ್ಟೆ ಕಾಮಿಡಿಯೂ  ಇದೇ. 
 
ಪ್ರಸ್ತುತ ಕನ್ನಡ ಶಿಕ್ಷಕನ ತಳಮಳಗಳ, ತಮ್ಮ ಮಗ ಪ್ರತಿಷ್ಠಿತ ಖಾಸಗಿ ಆಂಗ್ಲ ಶಾಲೆಯಲ್ಲೇ ಓದಿಸಬೇಕೆಂಬ ಗೃಹಿಣಿಯ ಹಠ, ಸರ್ಕಾರಿ ಶಾಲೆಗಳನ್ನು ಮುಚ್ಚಬೇಕೆಂಬ ಸರ್ಕಾರದ ನೀತಿ, ಕನ್ನಡ ಶಾಲೆಗಳಲ್ಲಿ ಓದುವ ಬಡ ಮಕ್ಕಳ ನೆಮ್ಮದಿ, ಕೇಜಿಗಟ್ಟಲೇ ಪುಸ್ತಕಗಳನ್ನು ಹೊತ್ತು ಕಾನ್ವೆಂಟ್‌ಗಳತ್ತ ಸಾಗುವ ಮಕ್ಕಳ ಪ್ರಾಣ ಸಂಕಟಗಳು... ಈ ಎಲ್ಲವನ್ನೂ ಮನರಂಜನೆಯ ನೆರಳಿನಲ್ಲಿ ಹೇಳುತ್ತಲೇ ಮಕ್ಕಳನ್ನು ಮಾರ್ಕ್ಸ್ ತೆಗೆಯುವ ರೇಸ್‌ ಕುದುರೆಗಳನ್ನಾಗಿಸಿದ ಶಿಕ್ಷಣ ಪದ್ದತಿಯನ್ನು ಗಟ್ಟಿಯಾಗಿ ಪ್ರಶ್ನಿಸುತ್ತಾರೆ ನಿರ್ದೇಶಕರು. 
 
ಸರ್ಕಾರಿ ಶಾಲೆಯ ಶಿಕ್ಷಕ ಕಾಳಿದಾಸನದ್ದು, ಎಲ್ಲ ಮಕ್ಕಳು ಸರ್ಕಾರಿ ಶಾಲೆಗಳಲ್ಲೇ ಓದಬೇಕೆಂಬ ಆಸೆ. ಆದರೆ, ತಾನು ಕೆಲಸ ಮಾಡುವ ಶಾಲೆಯನ್ನೇ ಮುಚ್ಚಬೇಕು ಎನ್ನುವ ಮೇಲಾಧಿಕಾರಿಗಳ ನಿರ್ಧಾರ ತೆಗೆದುಕೊಂಡಿದೆ. ಮಾಸಿದ ಗೋಡೆಗಳ ಶಾಲೆಯಲ್ಲೇ ಹೇಗೋ ಕಾಲ ದೂಡುತ್ತಿರುವ ಕಾಳಿದಾಸನನ್ನು ಇಷ್ಟಪಟ್ಟು ಕೈ ಹಿಡಿದವಳ ಆಸೆಗಳು ದುಬಾರಿ. ಆಕೆಗೆ ತನ್ನ ಮಗನನ್ನು ಇಂಗ್ಲಿಷ್‌ ಮೀಡಿಯಂನಲ್ಲೇ ಓದಿಸಬೇಕು.
 
ಆದರೆ, ಇದಕ್ಕೆ ತಗಲುವ ಲಕ್ಷ ಲಕ್ಷ ಹಣ ಜೋಡಿಸುವುದಾದರೂ ಹೇಗೆ ಎನ್ನುವ ಚಿಂತೆ ಕಾಳಿದಾಸನದ್ದು. ಈ ನಡುವೆ ಕಾಳಿದಾಸನ ಮಗ ಹಾಗೂ ಹೆಂಡತಿಯ ಸಾವು, ಹಣಕ್ಕಾಗಿ ಕಿಡ್ನಿ ಮಾರುವ ದೃಶ್ಯಗಳು ಚಿತ್ರದ ನಿರೂಪಣೆಗೆ ಎಮೋಷನಲ್‌ ಟಚ್‌ ಕೊಡುತ್ತದೆ. ಮೊದಲರ್ಧ ನಕ್ಕರೇ ಅದೇ ಸ್ವರ್ಗ ಎನ್ನುವಂತಿದೆ. ಚಿತ್ರದಲ್ಲಿ ಜಗ್ಗೇಶ್ ಕಾಮಿಡಿ ಬೊಂಬಾಟ್.  ಅಮ್ಮನಾಗಿ ಮೇಘನಾ ಗಾಂವ್ಕರ್‌ ಗಮನ ಸೆಳೆಯುತ್ತಾರೆ. ಗುರು ಕಿರಣ್‌ ಅವರ ಸಂಗೀತದಲ್ಲಿ ಎರಡು ಹಾಡು ಕೇಳುವಂತಿದ್ದರೆ, ಸುರೇಶ್‌ ಗುಂಡ್ಲುಪೇಟೆ ಕ್ಯಾಮೆರಾ ಚಿತ್ರಕ್ಕೆ ಪೂರಕವಾಗಿದೆ. ಚಿತ್ರ ಕನ್ನಡಿಗರ ಮನ ಗೆದ್ದು, ಕನ್ನಡಾಭಿಮಾನ ಹುಟ್ಟು ಸುತ್ತಿದೆ.

మరింత సమాచారం తెలుసుకోండి: