ಸ್ಯಾಂಡಲ್ ವುಡ್ ನ ಯಜಮಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯನ ಪಯಣ ಭರ್ಜರಿಯಾಗಿ ಮುಂದುವರೆದಿದೆ. ಹೌದು, ಡಿಸೆಂಬರ್ 12 ರಂದು ಒಡೆಯ ಚಿತ್ರ ಅದ್ದೂರಿಯಾಗಿ ತೆರೆಕಂಡಿತ್ತು. ಗ್ಯ್ರಾಂಡ್ ಆಗಿ ಡಿ ಬಾಸ್ ನ ವೆಲ್ ಕಮ್ ಮಾಡಿಕೊಂಡಿದ್ದ ಅಭಿಮಾನಿಗಳು ‘ಒಡೆಯ’ನನ್ನು ತೆರೆಯ ಮೇಲೆ ಕಂಡು ಹಬ್ಬ ಮಾಡಿದ್ದರು. ಚಿತ್ರ ಬಿಡುಗಡೆ ಯಾಗಿ ಮೂರು ವಾರಗಳಾದ ಮೇಲೂ ಡಿ ಬಾಸ್ ಒಡೆಯನ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. 
 
ಎಂ ಡಿ ಶ್ರೀಧರ್ ನಿರ್ದೇಶನದ ‘ಒಡೆಯ’ದಲ್ಲಿ ದಚ್ಚುಗೆ ಸನಾ ತಿಮ್ಮಯ್ಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅಂದ ಹಾಗೆ ಈ ಚಿತ್ರವು ನಟ ದರ್ಶನ ಮತ್ತು ನಿರ್ದೇಶಕ ಎಂ.ಡಿ.ಶ್ರೀಧರ್ ಕಾಂಬಿನೇಶನ್ ನಲ್ಲಿ ಬಂದಿದ್ದ ಮೂರನೇ ಚಿತ್ರವಾಗಿದ್ದು, ಸಂದೇಶ್ ಬ್ಯಾನರ್ ನಲ್ಲಿ ಮೂಡಿ ಬಂದಿದೆ.  ಅಂದ ಹಾಗೆ ಈ ಚಿತ್ರದಲ್ಲಿ ‘ಒಡೆಯ’ನ ಸಿಂಪ್ಲಿಸಿಟಿ ಹಾಗೂ ರಿಮೇಕ್ ಸಿನೆಮಾವಾದರೂ ದಚ್ಚು ಮ್ಯಾನರಿಸಂಗೆ ತಕ್ಕಂತೆ ಚಿತ್ರಿಸಿದ್ದೇ ಕಥೆಯ ಹೈಲೇಟ್ ಆಗಿತ್ತು.
 
ರಿಲೀಸ್ ಆದಾಗಿನಿಂದ ಹೌಸ್ ಫುಲ್ ಕಾಣುತ್ತಿರುವ ಚಿತ್ರಮಂದಿರ ಕಂಡು ತಂಡವೂ ಫುಲ್ ಖುಷ್ ಆಗಿದ್ದು ನೋಡ ನೋಡುತ್ತಿದ್ದಂತೆ ಸಿನೆಮಾ 25 ನೇ ದಿನದತ್ತ ನಾಗಲೋಟದಿಂದ ಓಡ್ತಿದೆ. ಬೆಳ್ಳಿದಿನ ಆಚರಿಸಿಕೊಳ್ತಿರುವ ‘ಒಡೆಯ’ನಿಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ವಿಶ್ ಮಾಡ್ತಿದ್ದಾರೆ. ಸದ್ಯ ಚಿತ್ರತಂಡ ಹಾಗೂ ದಚ್ಚು ಅಭಿಮಾನಿಗಳು ಸಿನಿಮಾ ಸಕ್ಸಸ್ ಖುಷಿಯಲ್ಲಿ ತೇಲಾಡ್ತಿದ್ದಾರೆ. 
 
ಒಡೆಯ ಚಿತ್ರದಲ್ಲಿ ನಟ ದರ್ಶನ್ ಸಿಂಪಲ್ ಆಗಿದ್ರೂ ಕೂಡ, ಸರಳತೆಗಿಂತ ಮಿಗಿಲಾದದ್ದು  ಯಾವುದು ಇಲ್ಲ ಎಂಬ ದೊಡ್ಡ ಸಂದೇಶವನ್ನು ರವಾನಿಸಿದ್ದಾರೆ. ಒಡೆಯ ಚಿತ್ರವು ಅಭಿಮಾನಿಗಳ ಹೃದಯ ಗೆಲ್ಲಲು ಈ ಅಂಶವು ಬಹಳ ಪ್ರಮುಖವಾದಂತಿದೆ. ಹೌದು, ಸರಳವಾಗಿದ್ದರೂ, ಆ ಖದರ್, ಡ್ಯಾನ್ಸ್, ಫೈಟಿಂಗ್ಸ್ ಗಳಿಗೇನು ಕಮ್ಮಿಯಿಲ್ಲ ಚಿತ್ರದಲ್ಲಿ. ಮಾಸ್ ಅಂಡ್ ಕ್ಲಾಸ್ ಅಂಡ್ ಸಿಂಪಲ್ ಎಲ್ಲದಕ್ಕೂ ಸೈ ಎನ್ನುವಂತೆ ಚಿತ್ರ. ಚಿತ್ರ ಬಿಡುಗಡೆಯಾಗುವುದಕ್ಕೂ ಮುಂಚೆಯಿಂದಲೇ ಸದ್ದು ಮಾಡಿತ್ತು. ಇದೀಗ ಚಿತ್ರ ಬಿಡುಗಡೆಯಾಗಿ ಯಶಸ್ವಿ 25ನೇ ದಿನದತ್ತ  ಮುನ್ನುಗ್ಗುತ್ತಿರುವುದು ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಸಂತಸದ ವಿಷಯವಾಗಿದೆ.

మరింత సమాచారం తెలుసుకోండి: