ಸೈರಾ ನರಸಿಂಹ ರೆಡ್ಡಿ ಚಿತ್ರದ ಟ್ರೈಲರ್ ಇತ್ತಿಚೇಗೆ ಬಿಡುಗಡೆಯಾಯಿತು. ಇದು ತೆಲುಗು ಚಿತ್ರರಂಗದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದೆ. ಇದರಲ್ಲಿ ಚಿರಂಜೀವಿ ನಟನೆ ಮಾಡುತ್ತಿದ್ದಾರೆ. ಅದ್ರ ಜೊತೆಗೆ ಅಮಿತಾಬ್ ಬಚ್ಚನ್ ಕೂಡ ಇದ್ದಾರೆ. ಇನ್ನು ಮತ್ತೊಂದು ಇಂಟರೆಸ್ಟಿಂಗ್ ವಿಷಯ ಏನಪ್ಪಾ ಅಂದರೆ, ಅನುಷ್ಕಾ ಶೆಟ್ಟಿ. ಹೌದು, ಆದರೆ ಟ್ರೈಲರ್ ನಲ್ಲಿ ಅನುಷ್ಕಾ ಶೆಟ್ಟಿ ಇಲ್ಲದಿರುವುದನ್ನು ಕಂಡು ಆಕೆಯ ಅಭಿಮಾನಿಗಳು ನಿರಾಶಗೊಂಡಿದ್ದರು.


ಈ ಚಿತ್ರ  ಸುರೇಂದರ್ ರೆಡ್ಡಿ ಅವರ ನಿರ್ದೇಶನದಲ್ಲಿ ತೆರೆಗೆ ಬರುತ್ತಿದೆ. ಆದರೆ,  ನಟಿ ಅನುಷ್ಕಾ ಶೆಟ್ಟಿ ಅವರ ಅವರ ಪಾತ್ರ ಏನೆಂಬುದು ಹಲವರ ಕುತೂಹಲಕ್ಕೆ ಕಾರಣವಾಗಿತ್ತು. ಹೌದು, ಅನುಷ್ಕಾ ಶೆಟ್ಟಿ ಅವರು ನಿರ್ಣಾಯಕ ಪಾತ್ರದಲ್ಲಿ ಅಂದರೆ ರಾಣಿ ಲಕ್ಷ್ಮೀಬಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದು ಇದೀಗ ಪಕ್ಕಾ ಆಗಿದೆ. ಮುಂಬೈನಲ್ಲಿ ಚಿತ್ರದ ಪ್ರಚಾರದ ಸಮಯದಲ್ಲಿ ಈ ವಿಷಯ ಹೊರ ಬಿದ್ದಿದೆ.

ರಾಮ್ ಚರಣ್, ಚಿರಂಜೀವಿ ಮತ್ತು ಅನುಷ್ಕಾ ಈ ಮೂವರು ಸಹ ನಿರ್ಣಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಯುದ್ಧಭೂಮಿಯಲ್ಲಿ ಗಾಯಗೊಂಡ ಸೈನಿಕರಿಗೆ ಉಯಲವಾಡ ಅವರ ಸ್ಪೂರ್ತಿದಾಯಕ ಕಥೆಯನ್ನು ವಿವರಿಸುವ ಪಾತ್ರವನ್ನು ನಿರ್ವಹಿಸುತ್ತಿರುವುದು ಬೇರೆ ಯಾರು ಅಲ್ಲ. ಅದೇ ಅನುಷ್ಕಾ ಶೆಟ್ಟಿ. ಅವರ ಪಾತ್ರವೇ  ರಾಣಿ ಲಕ್ಷ್ಮೀಬಾಯಿ.

ಅನುಷ್ಕಾ ಶೆಟ್ಟಿ ಅವರು ಈ ಮೊದಲು ಬಾಹುಬಲಿ ಒಂದು ಮತ್ತು ಬಾಹುಬಲಿ ಎರಡರಲ್ಲಿ ಅಭಿನಯಿಸಿ ಎಲ್ಲರ ಮನ ಗೆದ್ದಿದ್ದಾರೆ. ಇದೀಗ ಸಾಯಿರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ತೆಲುಗು ಸೂಪರ್‌ಸ್ಟಾರ್‌ ಜೊತೆ ಅನುಷ್ಕಾ ಕಾಣಿಸಿಕೊಳ್ಳುವುದು ಅನುಮಾನ ಎನ್ನಲಾಗುತ್ತಿದೆ. ಆದರೆ, ಉಯ್ಯಲವಾಡ ನರಸಿಂಹ ರೆಡ್ಡಿ ಅವರ ಕಥೆಯನ್ನು ನೋಡೋಕೆ ಅಭಿಮಾನಿಗಳು ಕಾತುರದಿಂದಲೇ ಕಾಯುತ್ತಿದ್ದಾರೆ.

ಹೀಗಾಗಿ ಚಿತ್ರದ ಇನ್ನಷ್ಟು ಕೆಲಸ ಪೂರ್ಣವಾದರೆ ಆದಷ್ಟು ಬೇಗ ಈ ಚಿತ್ರ ತೆರೆ ಮೇಲೆ ಬರಲಿದೆ. ಅದರಲ್ಲೂ ತೆಲುಗು ಚಿತ್ರರಂಗ ದೊಡ್ಮಟ್ಟದಲ್ಲಿ ಚಿತ್ರವನ್ನು ಬಿಡುಗಡೆ ಮಾಡೋಕೆ ಪ್ಲಾನ್ ಮಾಡಿಕೊಂಡಿರುತ್ತದೆ. ಹೀಗಾಗಿ ಎದೆಸ್ಸ್ತು ಥಿಯೇಟರ್ ಗಳಲ್ಲಿ ಈ ಚಿತ್ರ ಬಿವುಗವೆ ಆಗುತ್ತದೆ ಅನ್ನೋದನ್ನು ಕಾಡು ನೋಡಬೇಕು .

మరింత సమాచారం తెలుసుకోండి: